<p><strong>ಬಾಲೇಶ್ವರ(ಒಡಿಶಾ):</strong> ನೆಲದಿಂದ ಆಗಸಕ್ಕೆ ಕ್ಷಿಪ್ರವಾಗಿ ಚಿಮ್ಮಿ ಗುರಿಯನ್ನು ನಾಶ ಮಾಡಬಲ್ಲ ಕ್ಷಿಪಣಿ ವ್ಯವಸ್ಥೆಯ (ಕ್ಯೂಆರ್ಎಸ್ಎಎಂ) ಪರೀಕ್ಷಾರ್ಥ ಉಡಾವಣೆ ಚಾಂದಿಪುರ ಸಮೀಪವಿರುವ ಸಮಗ್ರ ಪರೀಕ್ಷಾ ವಲಯದಲ್ಲಿ ಗುರುವಾರ ಯಶಸ್ವಿಯಾಯಿತು.</p>.<p>ಒಟ್ಟು ಆರು ಪರೀಕ್ಷೆಗಳನ್ನು ನೆರವೇರಿಸಲಾಗಿದೆ. ವಾಯುಪ್ರದೇಶದ ಮೂಲಕ ಎದುರಾಗಬಹುದಾದ ವಿವಿಧ ಸ್ವರೂಪದ ಅಪಾಯಕಾರಿ ಗುರಿಗಳನ್ನು ಕರಾವಾರುಕ್ಕಾಗಿ ಹೊಡೆದುರುಳಿಸುವ ಈ ಕ್ಷಿಪಣಿ ವ್ಯವಸ್ಥೆಯ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲಾಯಿತು ಎಂದು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ತಿಳಿಸಿದೆ.</p>.<p>‘ಈ ಪರೀಕ್ಷೆ ವೇಳೆ, ಕ್ಷಿಪಣಿ ವ್ಯವಸ್ಥೆಯು ಎಲ್ಲ ನಿರ್ದೇಶಿತ ಗುರಿಗಳನ್ನು ನಿಖರವಾಗಿ ತಲುಪಿತು ಈ ಕ್ಷಿಪಣಿ ವ್ಯವಸ್ಥೆಯ ಕಾರ್ಯಸಾಧನೆಯನ್ನು ಟೆಲಿಮೆಟ್ರಿ, ರಾಡಾರ್ ಹಾಗೂ ಎಲೆಕ್ಟ್ರೊ ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ಸ್ನಂತಹ ವಿವಿಧ ಸಾಧನ/ತಂತ್ರಾಂಶಗಳನ್ನು ಬಳಸಿ ಖಚಿತಪಡಿಸಿಕೊಳ್ಳಲಾಯಿತು’ ಎಂದು ಡಿಆರ್ಡಿಒ ತಿಳಿಸಿದೆ.</p>.<p>‘ಈ ಕ್ಷಿಪಣಿ ವ್ಯವಸ್ಥೆಯು ಈಗ ಸೇನೆಗೆ ಸೇರ್ಪಡೆ ಮಾಡಲು ಸಿದ್ಧವಾಗಿದೆ’ ಎಂದೂ ಸಂಸ್ಥೆ ತಿಳಿಸಿದೆ.</p>.<p>ಕ್ಷಿಪಣಿ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿರುವುದಕ್ಕಾಗಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಡಿಆರ್ಡಿಒ ಹಾಗೂ ಸೇನೆಯನ್ನು ಅಭಿನಂದಿಸಿದ್ದಾರೆ.</p>.<p><strong>ಕ್ಯೂಆರ್ಎಸ್ಎಂ ವೈಶಿಷ್ಟ್ಯಗಳು</strong></p>.<p>* ಚಲನೆಯ ಸಮಯದಲ್ಲಿಯೂ ಈ ಕ್ಷಿಪಣಿ ವ್ಯವಸ್ಥೆಯ ಕಾರ್ಯಾಚರಣೆ ಸಾಧ್ಯ</p>.<p>* ಅಪಾಯಗಳನ್ನು ಪತ್ತೆ ಹಾಗೂ ಅವುಗಳ ಮೇಲೆ ನಿಗಾ ಇಡುವ ಸಾಮರ್ಥ್ಯ</p>.<p>* ನಿಖರವಾಗಿ ಗುರಿ ನಾಶ ಮಾಡುವುದು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಲೇಶ್ವರ(ಒಡಿಶಾ):</strong> ನೆಲದಿಂದ ಆಗಸಕ್ಕೆ ಕ್ಷಿಪ್ರವಾಗಿ ಚಿಮ್ಮಿ ಗುರಿಯನ್ನು ನಾಶ ಮಾಡಬಲ್ಲ ಕ್ಷಿಪಣಿ ವ್ಯವಸ್ಥೆಯ (ಕ್ಯೂಆರ್ಎಸ್ಎಎಂ) ಪರೀಕ್ಷಾರ್ಥ ಉಡಾವಣೆ ಚಾಂದಿಪುರ ಸಮೀಪವಿರುವ ಸಮಗ್ರ ಪರೀಕ್ಷಾ ವಲಯದಲ್ಲಿ ಗುರುವಾರ ಯಶಸ್ವಿಯಾಯಿತು.</p>.<p>ಒಟ್ಟು ಆರು ಪರೀಕ್ಷೆಗಳನ್ನು ನೆರವೇರಿಸಲಾಗಿದೆ. ವಾಯುಪ್ರದೇಶದ ಮೂಲಕ ಎದುರಾಗಬಹುದಾದ ವಿವಿಧ ಸ್ವರೂಪದ ಅಪಾಯಕಾರಿ ಗುರಿಗಳನ್ನು ಕರಾವಾರುಕ್ಕಾಗಿ ಹೊಡೆದುರುಳಿಸುವ ಈ ಕ್ಷಿಪಣಿ ವ್ಯವಸ್ಥೆಯ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲಾಯಿತು ಎಂದು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ತಿಳಿಸಿದೆ.</p>.<p>‘ಈ ಪರೀಕ್ಷೆ ವೇಳೆ, ಕ್ಷಿಪಣಿ ವ್ಯವಸ್ಥೆಯು ಎಲ್ಲ ನಿರ್ದೇಶಿತ ಗುರಿಗಳನ್ನು ನಿಖರವಾಗಿ ತಲುಪಿತು ಈ ಕ್ಷಿಪಣಿ ವ್ಯವಸ್ಥೆಯ ಕಾರ್ಯಸಾಧನೆಯನ್ನು ಟೆಲಿಮೆಟ್ರಿ, ರಾಡಾರ್ ಹಾಗೂ ಎಲೆಕ್ಟ್ರೊ ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ಸ್ನಂತಹ ವಿವಿಧ ಸಾಧನ/ತಂತ್ರಾಂಶಗಳನ್ನು ಬಳಸಿ ಖಚಿತಪಡಿಸಿಕೊಳ್ಳಲಾಯಿತು’ ಎಂದು ಡಿಆರ್ಡಿಒ ತಿಳಿಸಿದೆ.</p>.<p>‘ಈ ಕ್ಷಿಪಣಿ ವ್ಯವಸ್ಥೆಯು ಈಗ ಸೇನೆಗೆ ಸೇರ್ಪಡೆ ಮಾಡಲು ಸಿದ್ಧವಾಗಿದೆ’ ಎಂದೂ ಸಂಸ್ಥೆ ತಿಳಿಸಿದೆ.</p>.<p>ಕ್ಷಿಪಣಿ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿರುವುದಕ್ಕಾಗಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಡಿಆರ್ಡಿಒ ಹಾಗೂ ಸೇನೆಯನ್ನು ಅಭಿನಂದಿಸಿದ್ದಾರೆ.</p>.<p><strong>ಕ್ಯೂಆರ್ಎಸ್ಎಂ ವೈಶಿಷ್ಟ್ಯಗಳು</strong></p>.<p>* ಚಲನೆಯ ಸಮಯದಲ್ಲಿಯೂ ಈ ಕ್ಷಿಪಣಿ ವ್ಯವಸ್ಥೆಯ ಕಾರ್ಯಾಚರಣೆ ಸಾಧ್ಯ</p>.<p>* ಅಪಾಯಗಳನ್ನು ಪತ್ತೆ ಹಾಗೂ ಅವುಗಳ ಮೇಲೆ ನಿಗಾ ಇಡುವ ಸಾಮರ್ಥ್ಯ</p>.<p>* ನಿಖರವಾಗಿ ಗುರಿ ನಾಶ ಮಾಡುವುದು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>