ಈ ಮಧ್ಯೆ, ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ,‘ಭಾರತೀಯ ಮೀನುಗಾರಿಕಾ ದೋಣಿ ಪಾಕಿಸ್ತಾನದ ಜಲ ಪ್ರದೇಶವನ್ನು‘ಕಾನೂನುಬಾಹಿರವಾಗಿ ಅತಿಕ್ರಮಿಸಿತ್ತು’ ಎಂದು ಹೇಳಿದೆ. ಪಿಎಂಎಸ್ಎ ಸಿಬ್ಬಂದಿ ದೋಣಿಗೆ ಎಚ್ಚರಿಕೆ ನೀಡಿದರು. ಭಾರತದ ಜಲ ಪ್ರದೇಶಕ್ಕೆ ಹಿಂದಿರುಗುವಂತೆಯೂ, ಮಾರ್ಗ ಬದಲಾಯಿಸುವಂತೆಯೂ ತಿಳಿಸಿದರು. ಆದರೆ ದೋಣಿ ಮಾರ್ಗವನ್ನು ಬದಲಾಯಿಸಲಿಲ್ಲ.ಹೀಗಾಗಿ ಪಿಎಂಎಸ್ಎ ಸಿಬ್ಬಂದಿ ಗುಂಡು ಹಾರಿಸಬೇಕಾಯಿತು ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ.