‘ರಷ್ಯಾದಲ್ಲಿ ಉತ್ತಮ ಉದ್ಯೋಗದ ಭರವಸೆ ನೀಡಿ ನೇಮಕ ಮಾಡಿಕೊಂಡು, ನಂತರ ಆ ರಾಷ್ಟ್ರದ ಸೇನೆಗೆ ಸೇರಿಸುವ ಮೂಲಕ ಹಲವು ಭಾರತೀಯರಿಗೆ ವಂಚಿಸಲಾಗಿದೆ. ಇಂತಹ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ಬಿಡುಗಡೆಗಾಗಿ ರಷ್ಯಾದೊಂದಿಗೆ ನಿರಂತರ ಮಾತುಕತೆ ನಡೆಸಲಾಗುತ್ತಿದೆ’ ಎಂದು ಸಚಿವಾಲಯ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.