<p><strong>ನವದೆಹಲಿ:</strong> ಭಾರತವು ಅಂತರರಾಷ್ಟ್ರೀಯ ಕಾನೂನು ಪಾಲನೆ, ಶಾಂತಿ, ಭದ್ರತೆ ಮತ್ತುಸಮೃದ್ಧಿಯಪರವಾಗಿ ಯಾವಾಗಲು ಧ್ವನಿ ಎತ್ತಲಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.</p>.<p>ಸಾಗರ ಭದ್ರತೆ, ಅಂತರರಾಷ್ಟ್ರೀಯ ಸಹಕಾರ, ಶಾಂತಿ ಪಾಲನೆ ಮತ್ತು ಭದ್ರತೆಯ ವಿಚಾರವಾಗಿ ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್ಎಸ್ಸಿ) ಉನ್ನತ ಮಟ್ಟದವರ್ಚುವಲ್ ಸಭೆಯು ಆಗಸ್ಟ್9ರಂದು ನಡೆಯಲಿದೆ.ಪ್ರಧಾನಿ ಮೋದಿ ಅವರು ಈ ಸಭೆಯ ಅಧ್ಯಕ್ಷತೆವಹಿಸಲಿದ್ದು, ಅದಕ್ಕೂ ಮುನ್ನ ಬಾಗ್ಚಿ ಹೇಳಿಕೆ ನೀಡಿದ್ದಾರೆ.</p>.<p>ಆಗಸ್ಟ್9ರಂದು ನಡೆಯುವ ಯುಎನ್ಎಸ್ಸಿ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಿಕೊಳ್ಳಲಿದ್ದಾರೆ. ಭಾರತ ಯಾವಾಗಲೂ ಅಂತರರಾಷ್ಟ್ರೀಯ ಕಾನೂನಿನ ಧ್ವನಿಯಾಗಲಿದೆ. ಶಾಂತಿ, ಭದ್ರತೆ ಮತ್ತು ಸಮೃದ್ಧಿಯನ್ನು ಬೆಂಬಲಿಸುತ್ತದೆ. ಅಂತರರಾಷ್ಟ್ರೀಯಸಮಸ್ಯೆಗಳ ಬಗ್ಗೆ ಭಾರತ ಸಮಾಲೋಚನೆ, ಸಂವಾದ ನಡೆಸಲಿದ್ದು, ನ್ಯಾಯವನ್ನು ಪ್ರತಿಪಾದಿಸಲಿದೆ ಎಂದು ಬಾಗ್ಚಿ ಟ್ವೀಟ್ ಮಾಡಿದ್ದಾರೆ.</p>.<p>ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತುವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರೂ ಈ ತಿಂಗಳು ನ್ಯೂಯಾರ್ಕ್ಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಸಂಘರ್ಷ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.</p>.<p>ಭಾರತವು ಆಗಸ್ಟ್ 1ರಿಂದ ಒಂದು ತಿಂಗಳ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಿಕೊಂಡಿದೆ.ಈ ಅವಧಿಯಲ್ಲಿ ಕಡಲ ಭದ್ರತೆ, ಶಾಂತಿ ಪಾಲನೆ ಮತ್ತು ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆಸಿದೆ.</p>.<p>ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿರುವ ಭಾರತದ ಎರಡು ವರ್ಷಗಳ ಅಧಿಕಾರಾವಧಿಯು 2021ರ ಜನವರಿ 1ರಿಂದ ಆರಂಭವಾಗಿದೆ. ಮುಂದಿನ ವರ್ಷ ಡಿಸೆಂಬರ್ನಲ್ಲಿ ಮತ್ತೆ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಗಲಿದೆ.</p>.<p>ಭದ್ರತಾ ಮಂಡಳಿಗೆ ಜುಲೈ ತಿಂಗಳಲ್ಲಿ ಫ್ರಾನ್ಸ್ಅಧ್ಯಕ್ಷತೆ ವಹಿಸಿತ್ತು.</p>.<p><strong>ಇವನ್ನೂ ಓದಿ<br />*</strong><a href="https://cms.prajavani.net/world-news/us-for-consensus-on-modest-expansion-of-un-security-council-provided-it-does-not-alter-or-expand-the-855187.html" itemprop="url">ವಿಶ್ವಸಂಸ್ಥೆ ಭದ್ರತಾ ಮಂಡಳಿ ವಿಸ್ತರಣೆಗೆ ಅಮೆರಿಕದ ಬೆಂಬಲ </a><br /><strong>*</strong><a href="https://cms.prajavani.net/world-news/india-not-in-favour-of-further-destablisation-of-myanmar-amb-tirumurti-854276.html" itemprop="url">ಮ್ಯಾನ್ಮಾರ್ನಲ್ಲಿನ ಅಸ್ಥಿರತೆಯಿಂದಲೂ ಭಾರತದ ಮೇಲೆ ನೇರ ಪರಿಣಾಮ: ತಿರುಮೂರ್ತಿ </a><br /><strong>*</strong><a href="https://cms.prajavani.net/world-news/we-will-continue-to-keep-the-spotlight-on-terrorism-indian-amb-tirumurti-854255.html" itemprop="url">ಭಯೋತ್ಪಾದನೆ ಚಟುವಟಿಕೆ ಮೇಲೆ ತೀವ್ರ ನಿಗಾ: ತಿರುಮೂರ್ತಿ </a><br /><strong>*</strong><a href="https://cms.prajavani.net/world-news/india-to-make-best-of-its-2-year-term-in-unsc-to-establish-the-right-to-be-a-permanent-member-fs-848317.html" itemprop="url">ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ: ದಿಟ್ಟ ಹೆಜ್ಜೆಗುರುತು –ಭಾರತ </a><br /><strong>*</strong><a href="https://cms.prajavani.net/india-news/uzbekistan-extends-support-for-indias-permanent-membership-at-unsc-853742.html" itemprop="url">ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿಭಾರತಕ್ಕೆ ಖಾಯಂಸ್ಥಾನ ಸಿಗಲಿ: ಉಜ್ಬೇಕಿಸ್ತಾನ </a><br /><strong>*</strong><a href="https://cms.prajavani.net/world-news/possible-use-of-weaponised-drones-for-terrorism-calls-for-serious-attention-says-india-at-un-843379.html" itemprop="url">ಭಯೋತ್ಪಾದನೆಗೆ ಡ್ರೋನ್ ಬಳಕೆ ಸಾಧ್ಯತೆ, ಗಂಭೀರ ಪರಿಗಣನೆ ಅಗತ್ಯ: ಭಾರತ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತವು ಅಂತರರಾಷ್ಟ್ರೀಯ ಕಾನೂನು ಪಾಲನೆ, ಶಾಂತಿ, ಭದ್ರತೆ ಮತ್ತುಸಮೃದ್ಧಿಯಪರವಾಗಿ ಯಾವಾಗಲು ಧ್ವನಿ ಎತ್ತಲಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.</p>.<p>ಸಾಗರ ಭದ್ರತೆ, ಅಂತರರಾಷ್ಟ್ರೀಯ ಸಹಕಾರ, ಶಾಂತಿ ಪಾಲನೆ ಮತ್ತು ಭದ್ರತೆಯ ವಿಚಾರವಾಗಿ ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್ಎಸ್ಸಿ) ಉನ್ನತ ಮಟ್ಟದವರ್ಚುವಲ್ ಸಭೆಯು ಆಗಸ್ಟ್9ರಂದು ನಡೆಯಲಿದೆ.ಪ್ರಧಾನಿ ಮೋದಿ ಅವರು ಈ ಸಭೆಯ ಅಧ್ಯಕ್ಷತೆವಹಿಸಲಿದ್ದು, ಅದಕ್ಕೂ ಮುನ್ನ ಬಾಗ್ಚಿ ಹೇಳಿಕೆ ನೀಡಿದ್ದಾರೆ.</p>.<p>ಆಗಸ್ಟ್9ರಂದು ನಡೆಯುವ ಯುಎನ್ಎಸ್ಸಿ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಿಕೊಳ್ಳಲಿದ್ದಾರೆ. ಭಾರತ ಯಾವಾಗಲೂ ಅಂತರರಾಷ್ಟ್ರೀಯ ಕಾನೂನಿನ ಧ್ವನಿಯಾಗಲಿದೆ. ಶಾಂತಿ, ಭದ್ರತೆ ಮತ್ತು ಸಮೃದ್ಧಿಯನ್ನು ಬೆಂಬಲಿಸುತ್ತದೆ. ಅಂತರರಾಷ್ಟ್ರೀಯಸಮಸ್ಯೆಗಳ ಬಗ್ಗೆ ಭಾರತ ಸಮಾಲೋಚನೆ, ಸಂವಾದ ನಡೆಸಲಿದ್ದು, ನ್ಯಾಯವನ್ನು ಪ್ರತಿಪಾದಿಸಲಿದೆ ಎಂದು ಬಾಗ್ಚಿ ಟ್ವೀಟ್ ಮಾಡಿದ್ದಾರೆ.</p>.<p>ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತುವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರೂ ಈ ತಿಂಗಳು ನ್ಯೂಯಾರ್ಕ್ಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಸಂಘರ್ಷ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.</p>.<p>ಭಾರತವು ಆಗಸ್ಟ್ 1ರಿಂದ ಒಂದು ತಿಂಗಳ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಿಕೊಂಡಿದೆ.ಈ ಅವಧಿಯಲ್ಲಿ ಕಡಲ ಭದ್ರತೆ, ಶಾಂತಿ ಪಾಲನೆ ಮತ್ತು ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆಸಿದೆ.</p>.<p>ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿರುವ ಭಾರತದ ಎರಡು ವರ್ಷಗಳ ಅಧಿಕಾರಾವಧಿಯು 2021ರ ಜನವರಿ 1ರಿಂದ ಆರಂಭವಾಗಿದೆ. ಮುಂದಿನ ವರ್ಷ ಡಿಸೆಂಬರ್ನಲ್ಲಿ ಮತ್ತೆ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಗಲಿದೆ.</p>.<p>ಭದ್ರತಾ ಮಂಡಳಿಗೆ ಜುಲೈ ತಿಂಗಳಲ್ಲಿ ಫ್ರಾನ್ಸ್ಅಧ್ಯಕ್ಷತೆ ವಹಿಸಿತ್ತು.</p>.<p><strong>ಇವನ್ನೂ ಓದಿ<br />*</strong><a href="https://cms.prajavani.net/world-news/us-for-consensus-on-modest-expansion-of-un-security-council-provided-it-does-not-alter-or-expand-the-855187.html" itemprop="url">ವಿಶ್ವಸಂಸ್ಥೆ ಭದ್ರತಾ ಮಂಡಳಿ ವಿಸ್ತರಣೆಗೆ ಅಮೆರಿಕದ ಬೆಂಬಲ </a><br /><strong>*</strong><a href="https://cms.prajavani.net/world-news/india-not-in-favour-of-further-destablisation-of-myanmar-amb-tirumurti-854276.html" itemprop="url">ಮ್ಯಾನ್ಮಾರ್ನಲ್ಲಿನ ಅಸ್ಥಿರತೆಯಿಂದಲೂ ಭಾರತದ ಮೇಲೆ ನೇರ ಪರಿಣಾಮ: ತಿರುಮೂರ್ತಿ </a><br /><strong>*</strong><a href="https://cms.prajavani.net/world-news/we-will-continue-to-keep-the-spotlight-on-terrorism-indian-amb-tirumurti-854255.html" itemprop="url">ಭಯೋತ್ಪಾದನೆ ಚಟುವಟಿಕೆ ಮೇಲೆ ತೀವ್ರ ನಿಗಾ: ತಿರುಮೂರ್ತಿ </a><br /><strong>*</strong><a href="https://cms.prajavani.net/world-news/india-to-make-best-of-its-2-year-term-in-unsc-to-establish-the-right-to-be-a-permanent-member-fs-848317.html" itemprop="url">ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ: ದಿಟ್ಟ ಹೆಜ್ಜೆಗುರುತು –ಭಾರತ </a><br /><strong>*</strong><a href="https://cms.prajavani.net/india-news/uzbekistan-extends-support-for-indias-permanent-membership-at-unsc-853742.html" itemprop="url">ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿಭಾರತಕ್ಕೆ ಖಾಯಂಸ್ಥಾನ ಸಿಗಲಿ: ಉಜ್ಬೇಕಿಸ್ತಾನ </a><br /><strong>*</strong><a href="https://cms.prajavani.net/world-news/possible-use-of-weaponised-drones-for-terrorism-calls-for-serious-attention-says-india-at-un-843379.html" itemprop="url">ಭಯೋತ್ಪಾದನೆಗೆ ಡ್ರೋನ್ ಬಳಕೆ ಸಾಧ್ಯತೆ, ಗಂಭೀರ ಪರಿಗಣನೆ ಅಗತ್ಯ: ಭಾರತ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>