<p><strong>ಲಖನೌ:</strong> ‘ಎಲ್ಲಾ ಭಾರತೀಯ ಭಾಷೆಗಳನ್ನೂ ಗೌರವಿಸಬೇಕು. ಸಮಾಜವಾದಿ ಪಕ್ಷವು ಸದಾ ಭಾರತೀಯ ಭಾಷೆಗಳ ಪರವಾಗಿದೆ’ ಎಂದು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಶನಿವಾರ ಹೇಳಿದ್ದಾರೆ.</p><p>ವಿವಿಧ ರಾಜ್ಯಗಳಲ್ಲಿ ಭಾಷಾ ಸಂಘರ್ಷ ಮತ್ತು 2 ದಶಕಗಳ ನಂತರ ರಾಜ್–ಉದ್ಧವ್ ಠಾಕ್ರೆ ಸಮಾಗಮದ ಸಂದರ್ಭದಲ್ಲೇ ಅಖಿಲೇಶ್ ಯಾದವ್ ಅವರು ಈ ಹೇಳಿಕೆ ನೀಡಿದ್ದಾರೆ.</p><p>‘ಉತ್ತರ ಪ್ರದೇಶದೊಂದಿಗೆ ಮರಾಠಾ ಜನರ ಸಂಬಂಧ ಹಿಂದಿನಿಂದಲೂ ಇದ್ದು, ಇದಕ್ಕೊಂದು ಭವ್ಯ ಇತಿಹಾಸವಿದೆ. ಸಮಾಜವಾದಿಗಳು ಸದಾ ಭಾರತೀಯ ಭಾಷೆಗಳ ಪರವಾಗಿದ್ದವರು’ ಎಂದಿದ್ದಾರೆ.</p><p>‘ಎಲ್ಲಾ ಭಾಷೆಗಳನ್ನು ನಾವು ಗೌರವಿಸಬೇಕು. ಎಲ್ಲಾ ಭಾಷಿಗರಂತೆಯೇ ಉತ್ತರ ಪ್ರದೇಶದವರು ಸದಾ ಹಿಂದಿಯ ಪರವಾಗಿದ್ದೇವೆ. ತಂತ್ರಜ್ಞಾನವು ಇಂದು ಹಲವು ಸಂಗತಿಗಳನ್ನು ಸುಲಭವಾಗಿಸಿದೆ. ನೌಕರಿ ಕೈತಪ್ಪಿದ್ದು ಸೇರಿದಂತೆ ಹಿಂದೆ ಭಾಷೆಯಿಂದಲೇ ಹಲವು ಸಂಗತಿಗಳು ನಡೆದಿವೆ. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ಭಾಷೆಯನ್ನೇ ಇಂದು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಇಂದು ಇಂಥ ವಿವಾದಗಳು ತಲೆ ಎತ್ತಿವೆ’ ಎಂದರು.</p><p>‘ಉತ್ತರ ಪ್ರದೇಶದಲ್ಲಿ ಎಲ್ಲಾ ಭಾಷೆಗಳಿಗೂ ಅನುದಾನ ಮೀಸಲಿಡಬೇಕು. ಗರಿಷ್ಠ ಅನುದಾನವನ್ನು ನೀಡುವ ಮೂಲಕ ಭಾಷೆಗಳನ್ನು ಉತ್ತೇಜಿಸಬೇಕು. ಇದರಲ್ಲಿ ಯಾವುದೇ ತಾರತಮ್ಯ ಇರಬಾರದು. ಜಯಪ್ರಕಾಶ್ ನಾರಾಯಣ ಅಂತರರಾಷ್ಟ್ರೀಯ ಕೇಂದ್ರದಲ್ಲಿ (JPNIC) ಮರಾಠಿ, ತಮಿಳು, ಕನ್ನಡ ಹಾಗೂ ಉರ್ದು ಭಾಷೆಗಳ ಅಧ್ಯಯನಕ್ಕೆ ಮಹಡಿಗಳನ್ನು ಮೀಸಲಿಡಬೇಕು. ಹಿಂದಿಯೊಂದಿಗೆ ಇತರ ಭಾಷೆಗಳ ಅಧ್ಯಯನಕ್ಕೂ ಜಾಗ ಸಿಕ್ಕಲ್ಲಿ, ಅಲ್ಲಿಯ ಭಾಷೆಗಳೊಂದಿಗೆ ಸಂಸ್ಕೃತಿಯ ಪರಿಚಯವೂ ಆಗಲಿದೆ. ಆಹಾರ, ವಸ್ತ್ರಾಭರಣ ಇತ್ಯಾದಿಗಳ ಪರಿಚಯ, ವಿನಿಮಯಗಳಿಗೂ ವೇದಿಕೆ ಕಲ್ಪಿಸಿದಂತಾಗಲಿದೆ’ ಎಂದು ಅಖಿಲೇಶ್ ಹೇಳಿದ್ದಾರೆ.</p><p>‘ತಾರತಮ್ಯ ಹಾಗೂ ಅವಮಾನವನ್ನು ನಾವು ಎಂದಿಗೂ ಸಹಿಸಿಕೊಳ್ಳುವುದಿಲ್ಲ. ‘ಹಿಂದಿ ಮತ್ತು ಹಿಂದು’ ಎಂದು ಹೇಳಿರುವ ಬಿಜೆಪಿ ಜನರಿಗೆ ಉತ್ತರ ನೀಡಬೇಕು. ಬಿಜೆಪಿ ನಾಯಕರು ಕೇವಲ ಘೋಷಣೆಗಳನ್ನು ನೀಡುವಲ್ಲಿ ನಿಸ್ಸೀಮರು. ಭಾಷಾ ಅಧ್ಯಯನಕ್ಕೆ ಕೋಟಿಗಟ್ಟಲೆ ರೂಪಾಯಿ ಹಣವನ್ನು ಬಿಜೆಪಿ ಖರ್ಚು ಮಾಡಿದೆ. ಹೀಗಾದರೆ, ಪ್ರತಿ ದಿನ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ನಡೆಯುತ್ತಿಲ್ಲ. ಒಂದೊಮ್ಮೆ ಎಲ್ಲಾ ಭಾಷೆಗಳ ಅಧ್ಯಯನಕ್ಕೂ ವೇದಿಕೆ ಕಲ್ಪಿಸಿದ್ದಲ್ಲಿ, ವ್ಯಾಪಾರ ಹಾಗೂ ವ್ಯವಹಾರಗಳೂ ಉತ್ತಮವಾಗುತ್ತಿದ್ದವು. ಜನರು ಪರಸ್ಪರ ಪರಿಚಿತರಾಗುತ್ತಿದ್ದರು. ಒಬ್ಬರನ್ನೊಬ್ಬರು ಅರಿತು ಪರಸ್ಪರ ಗೌರವ ನೀಡುತ್ತಿದ್ದರು’ ಎಂದು ಅಖಿಲೇಶ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ‘ಎಲ್ಲಾ ಭಾರತೀಯ ಭಾಷೆಗಳನ್ನೂ ಗೌರವಿಸಬೇಕು. ಸಮಾಜವಾದಿ ಪಕ್ಷವು ಸದಾ ಭಾರತೀಯ ಭಾಷೆಗಳ ಪರವಾಗಿದೆ’ ಎಂದು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಶನಿವಾರ ಹೇಳಿದ್ದಾರೆ.</p><p>ವಿವಿಧ ರಾಜ್ಯಗಳಲ್ಲಿ ಭಾಷಾ ಸಂಘರ್ಷ ಮತ್ತು 2 ದಶಕಗಳ ನಂತರ ರಾಜ್–ಉದ್ಧವ್ ಠಾಕ್ರೆ ಸಮಾಗಮದ ಸಂದರ್ಭದಲ್ಲೇ ಅಖಿಲೇಶ್ ಯಾದವ್ ಅವರು ಈ ಹೇಳಿಕೆ ನೀಡಿದ್ದಾರೆ.</p><p>‘ಉತ್ತರ ಪ್ರದೇಶದೊಂದಿಗೆ ಮರಾಠಾ ಜನರ ಸಂಬಂಧ ಹಿಂದಿನಿಂದಲೂ ಇದ್ದು, ಇದಕ್ಕೊಂದು ಭವ್ಯ ಇತಿಹಾಸವಿದೆ. ಸಮಾಜವಾದಿಗಳು ಸದಾ ಭಾರತೀಯ ಭಾಷೆಗಳ ಪರವಾಗಿದ್ದವರು’ ಎಂದಿದ್ದಾರೆ.</p><p>‘ಎಲ್ಲಾ ಭಾಷೆಗಳನ್ನು ನಾವು ಗೌರವಿಸಬೇಕು. ಎಲ್ಲಾ ಭಾಷಿಗರಂತೆಯೇ ಉತ್ತರ ಪ್ರದೇಶದವರು ಸದಾ ಹಿಂದಿಯ ಪರವಾಗಿದ್ದೇವೆ. ತಂತ್ರಜ್ಞಾನವು ಇಂದು ಹಲವು ಸಂಗತಿಗಳನ್ನು ಸುಲಭವಾಗಿಸಿದೆ. ನೌಕರಿ ಕೈತಪ್ಪಿದ್ದು ಸೇರಿದಂತೆ ಹಿಂದೆ ಭಾಷೆಯಿಂದಲೇ ಹಲವು ಸಂಗತಿಗಳು ನಡೆದಿವೆ. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ಭಾಷೆಯನ್ನೇ ಇಂದು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಇಂದು ಇಂಥ ವಿವಾದಗಳು ತಲೆ ಎತ್ತಿವೆ’ ಎಂದರು.</p><p>‘ಉತ್ತರ ಪ್ರದೇಶದಲ್ಲಿ ಎಲ್ಲಾ ಭಾಷೆಗಳಿಗೂ ಅನುದಾನ ಮೀಸಲಿಡಬೇಕು. ಗರಿಷ್ಠ ಅನುದಾನವನ್ನು ನೀಡುವ ಮೂಲಕ ಭಾಷೆಗಳನ್ನು ಉತ್ತೇಜಿಸಬೇಕು. ಇದರಲ್ಲಿ ಯಾವುದೇ ತಾರತಮ್ಯ ಇರಬಾರದು. ಜಯಪ್ರಕಾಶ್ ನಾರಾಯಣ ಅಂತರರಾಷ್ಟ್ರೀಯ ಕೇಂದ್ರದಲ್ಲಿ (JPNIC) ಮರಾಠಿ, ತಮಿಳು, ಕನ್ನಡ ಹಾಗೂ ಉರ್ದು ಭಾಷೆಗಳ ಅಧ್ಯಯನಕ್ಕೆ ಮಹಡಿಗಳನ್ನು ಮೀಸಲಿಡಬೇಕು. ಹಿಂದಿಯೊಂದಿಗೆ ಇತರ ಭಾಷೆಗಳ ಅಧ್ಯಯನಕ್ಕೂ ಜಾಗ ಸಿಕ್ಕಲ್ಲಿ, ಅಲ್ಲಿಯ ಭಾಷೆಗಳೊಂದಿಗೆ ಸಂಸ್ಕೃತಿಯ ಪರಿಚಯವೂ ಆಗಲಿದೆ. ಆಹಾರ, ವಸ್ತ್ರಾಭರಣ ಇತ್ಯಾದಿಗಳ ಪರಿಚಯ, ವಿನಿಮಯಗಳಿಗೂ ವೇದಿಕೆ ಕಲ್ಪಿಸಿದಂತಾಗಲಿದೆ’ ಎಂದು ಅಖಿಲೇಶ್ ಹೇಳಿದ್ದಾರೆ.</p><p>‘ತಾರತಮ್ಯ ಹಾಗೂ ಅವಮಾನವನ್ನು ನಾವು ಎಂದಿಗೂ ಸಹಿಸಿಕೊಳ್ಳುವುದಿಲ್ಲ. ‘ಹಿಂದಿ ಮತ್ತು ಹಿಂದು’ ಎಂದು ಹೇಳಿರುವ ಬಿಜೆಪಿ ಜನರಿಗೆ ಉತ್ತರ ನೀಡಬೇಕು. ಬಿಜೆಪಿ ನಾಯಕರು ಕೇವಲ ಘೋಷಣೆಗಳನ್ನು ನೀಡುವಲ್ಲಿ ನಿಸ್ಸೀಮರು. ಭಾಷಾ ಅಧ್ಯಯನಕ್ಕೆ ಕೋಟಿಗಟ್ಟಲೆ ರೂಪಾಯಿ ಹಣವನ್ನು ಬಿಜೆಪಿ ಖರ್ಚು ಮಾಡಿದೆ. ಹೀಗಾದರೆ, ಪ್ರತಿ ದಿನ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ನಡೆಯುತ್ತಿಲ್ಲ. ಒಂದೊಮ್ಮೆ ಎಲ್ಲಾ ಭಾಷೆಗಳ ಅಧ್ಯಯನಕ್ಕೂ ವೇದಿಕೆ ಕಲ್ಪಿಸಿದ್ದಲ್ಲಿ, ವ್ಯಾಪಾರ ಹಾಗೂ ವ್ಯವಹಾರಗಳೂ ಉತ್ತಮವಾಗುತ್ತಿದ್ದವು. ಜನರು ಪರಸ್ಪರ ಪರಿಚಿತರಾಗುತ್ತಿದ್ದರು. ಒಬ್ಬರನ್ನೊಬ್ಬರು ಅರಿತು ಪರಸ್ಪರ ಗೌರವ ನೀಡುತ್ತಿದ್ದರು’ ಎಂದು ಅಖಿಲೇಶ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>