<p><strong>ಡೆಹ್ರಾಡೂನ್:</strong> ಪಾಚಿ, ಜರೀಗಿಡ (ಕಲ್ಲುಹೂವುಗಳು) ಹಾಗೂ ಶಿಲೀಂಧ್ರಗಳು ಸೇರಿದಂತೆ ಏಕಕೋಶೀಯ ಸಸ್ಯಗಳಿರುವ ದೇಶದ ಮೊದಲ ಉದ್ಯಾನವನ್ನು(ಕ್ರಿಪ್ಟೋಗ್ಯಾಮಿಕ್ ಗಾರ್ಡನ್) ಡೆಹ್ರಾಡೂನ್ ಜಿಲ್ಲೆಯ ಚಕರಾತಾ ಪಟ್ಟಣದಲ್ಲಿ ಭಾನುವಾರ ಉದ್ಘಾಟಿಸಲಾಯಿತು.</p>.<p>ಪಟ್ಟಣದ ದೇವವನದಲ್ಲಿ 50 ಪ್ರಭೇದಗಳಿಗೆ ಸೇರಿದ ಇಂಥ ಸಸ್ಯಗಳನ್ನು ಬೆಳೆಸಲಾಗಿದೆ. 9 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ಈ ಉದ್ಯಾನವನ್ನು ಸಾಮಾಜಿಕ ಕಾರ್ಯಕರ್ತ ಅನೂಪ್ ನೌತಿಯಾಲ್ ಉದ್ಘಾಟಿಸಿದರು.</p>.<p>‘ಸಸ್ಯಶಾಸ್ತ್ರದ ಪ್ರಕಾರ, ಪಾಚಿ, ಶಿಲೀಂಧ್ರ, ಜರೀಗಿಡಗಳು ‘ಕ್ರಿಪ್ಟೋಗ್ಯಾಮೆ’ ಪ್ರಭೇದಕ್ಕೆ ಸೇರಿದವುಗಳಾಗಿವೆ. ಇವು ನಾಳ ರಹಿತ ಸಸ್ಯಗಳಾಗಿದ್ದು, ಇವುಗಳು ಹೂವು ಅಥವಾ ಬೀಜಗಳ ಮೂಲಕ ಸಂತಾನೋತ್ಪತ್ತಿ ನಡೆಸುವುದಿಲ್ಲ. ಈ ಸಸ್ಯಗಳು ಕಾಂಡ, ಎಲೆ ಮತ್ತು ಬೇರಿನಂತಹ ಏಕಕೋಶಿಯ ರಚನೆಯನ್ನು ಹೊಂದಿರುತ್ತವೆ’ ಎಂದುಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ) ಸಂಜೀವ್ ಚತುರ್ವೇದಿ ವಿವರಿಸಿದರು.</p>.<p>‘ದೇವವನದಲ್ಲಿ ಮಾಲಿನ್ಯದ ಪ್ರಮಾಣ ಕಡಿಮೆ. ಇಲ್ಲಿನ ತೇವಾಂಶ ಸಹ ಇಂಥ ಸಸ್ಯಗಳನ್ನು ಬೆಳೆಯಲು ಸೂಕ್ತವಾದುದು. ಹೀಗಾಗಿ ಈ ಉದ್ಯಾನದ ಮೂರು ಎಕರೆ ಪ್ರದೇಶದಲ್ಲಿ ಈ ಸಸ್ಯಗಳನ್ನು ಬೆಳೆಸಲಾಗಿದೆ’ ಎಂದು ಹೇಳಿದರು.</p>.<p>‘ದೇವವನ ಪ್ರದೇಶದಲ್ಲಿ ದೇವದಾರು ಹಾಗೂ ಓಕ್ ಮರಗಳೇ ಹೆಚ್ಚಾಗಿರುವ ಅರಣ್ಯಗಳಿವೆ. ಇಂಥ ಪ್ರದೇಶಗಳು ಪಾಚಿ, ಶಿಲೀಂಧ್ರಗಳಿಗೆ ನೈಸರ್ಗಿಕ ಆಶ್ರಯ ತಾಣಗಳಾಗುತ್ತವೆ’ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡೆಹ್ರಾಡೂನ್:</strong> ಪಾಚಿ, ಜರೀಗಿಡ (ಕಲ್ಲುಹೂವುಗಳು) ಹಾಗೂ ಶಿಲೀಂಧ್ರಗಳು ಸೇರಿದಂತೆ ಏಕಕೋಶೀಯ ಸಸ್ಯಗಳಿರುವ ದೇಶದ ಮೊದಲ ಉದ್ಯಾನವನ್ನು(ಕ್ರಿಪ್ಟೋಗ್ಯಾಮಿಕ್ ಗಾರ್ಡನ್) ಡೆಹ್ರಾಡೂನ್ ಜಿಲ್ಲೆಯ ಚಕರಾತಾ ಪಟ್ಟಣದಲ್ಲಿ ಭಾನುವಾರ ಉದ್ಘಾಟಿಸಲಾಯಿತು.</p>.<p>ಪಟ್ಟಣದ ದೇವವನದಲ್ಲಿ 50 ಪ್ರಭೇದಗಳಿಗೆ ಸೇರಿದ ಇಂಥ ಸಸ್ಯಗಳನ್ನು ಬೆಳೆಸಲಾಗಿದೆ. 9 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ಈ ಉದ್ಯಾನವನ್ನು ಸಾಮಾಜಿಕ ಕಾರ್ಯಕರ್ತ ಅನೂಪ್ ನೌತಿಯಾಲ್ ಉದ್ಘಾಟಿಸಿದರು.</p>.<p>‘ಸಸ್ಯಶಾಸ್ತ್ರದ ಪ್ರಕಾರ, ಪಾಚಿ, ಶಿಲೀಂಧ್ರ, ಜರೀಗಿಡಗಳು ‘ಕ್ರಿಪ್ಟೋಗ್ಯಾಮೆ’ ಪ್ರಭೇದಕ್ಕೆ ಸೇರಿದವುಗಳಾಗಿವೆ. ಇವು ನಾಳ ರಹಿತ ಸಸ್ಯಗಳಾಗಿದ್ದು, ಇವುಗಳು ಹೂವು ಅಥವಾ ಬೀಜಗಳ ಮೂಲಕ ಸಂತಾನೋತ್ಪತ್ತಿ ನಡೆಸುವುದಿಲ್ಲ. ಈ ಸಸ್ಯಗಳು ಕಾಂಡ, ಎಲೆ ಮತ್ತು ಬೇರಿನಂತಹ ಏಕಕೋಶಿಯ ರಚನೆಯನ್ನು ಹೊಂದಿರುತ್ತವೆ’ ಎಂದುಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನೆ) ಸಂಜೀವ್ ಚತುರ್ವೇದಿ ವಿವರಿಸಿದರು.</p>.<p>‘ದೇವವನದಲ್ಲಿ ಮಾಲಿನ್ಯದ ಪ್ರಮಾಣ ಕಡಿಮೆ. ಇಲ್ಲಿನ ತೇವಾಂಶ ಸಹ ಇಂಥ ಸಸ್ಯಗಳನ್ನು ಬೆಳೆಯಲು ಸೂಕ್ತವಾದುದು. ಹೀಗಾಗಿ ಈ ಉದ್ಯಾನದ ಮೂರು ಎಕರೆ ಪ್ರದೇಶದಲ್ಲಿ ಈ ಸಸ್ಯಗಳನ್ನು ಬೆಳೆಸಲಾಗಿದೆ’ ಎಂದು ಹೇಳಿದರು.</p>.<p>‘ದೇವವನ ಪ್ರದೇಶದಲ್ಲಿ ದೇವದಾರು ಹಾಗೂ ಓಕ್ ಮರಗಳೇ ಹೆಚ್ಚಾಗಿರುವ ಅರಣ್ಯಗಳಿವೆ. ಇಂಥ ಪ್ರದೇಶಗಳು ಪಾಚಿ, ಶಿಲೀಂಧ್ರಗಳಿಗೆ ನೈಸರ್ಗಿಕ ಆಶ್ರಯ ತಾಣಗಳಾಗುತ್ತವೆ’ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>