<p><strong>ಇಂದೋರ್</strong>: ಇಲ್ಲಿನ ಭಾಗೀರಥಿಪುರದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದ 142 ಮಂದಿ ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ 11 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ. ಇಡೀ ಪ್ರದೇಶದಲ್ಲಿ ಆರೋಗ್ಯ ತಂಡವು ಬೀಡುಬಿಟ್ಟಿದ್ದು, 20 ಮಂದಿಗೆ ಅತಿಸಾರ ಹರಡಿರುವುದನ್ನು ಪತ್ತೆಹಚ್ಚಿದೆ.</p><p>‘ಭಾಗೀರಥಿಪುರದ 2,354 ಮನೆಗಳ ಸಮೀಕ್ಷೆ ನಡೆಸಿರುವ ಆರೋಗ್ಯ ಇಲಾಖೆಯ ತಂಡವು 9,416 ಮಂದಿಯನ್ನು ಪರೀಕ್ಷೆ ನಡೆಸಿದೆ. ಈ ವೇಳೆ 20 ಮಂದಿ ಭೇದಿಯಿಂದ ಬಳಲುತ್ತಿರುವುದು ಕಂಡುಬಂದಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ದುರಂತ ನಡೆದ ಬಳಿಕ ಇದುವರೆಗೂ 398 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 256 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ 142 ಮಂದಿಯ ಚಿಕಿತ್ಸೆ ಮುಂದುವರಿದಿದ್ದು, 11 ಮಂದಿ ಈಗಲೂ ತೀವ್ರ ನಿಗಾ ಘಟಕದಲ್ಲಿದ್ದಾರೆ. </p><p>‘ಸಾಂಕ್ರಾಮಿಕ ರೋಗವು ಈಗ ನಿಯಂತ್ರಣದಲ್ಲಿದೆ. ಕೋಲ್ಕತ್ತದಲ್ಲಿರುವ ಬ್ಯಾಕ್ಟೀರಿಯಾ ಸೋಂಕುಗಳ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ (ಎನ್ಐಆರ್ಬಿಐ) ತಜ್ಞರ ತಂಡವು ಈಗಾಗಲೇ ಭಾಗೀರಥಿಪುರಕ್ಕೆ ಬಂದಿದ್ದು, ಪರಿಶೀಲನೆ ನಡೆಸುತ್ತಿದೆ’ ಎಂದು ಮಧ್ಯಪ್ರದೇಶದ ಮುಖ್ಯ ವೈದ್ಯಕೀಯ ಆರೋಗ್ಯಾಧಿಕಾರಿ ಡಾ.ಮಾಧವ ಪ್ರಸಾದ್ ಹಸನಿ ತಿಳಿಸಿದ್ದಾರೆ.</p>.ಇಂದೋರ್ ದುರಂತ ವ್ಯವಸ್ಥೆ ಸೃಷ್ಟಿಸಿದ ವಿಪತ್ತು: ಜಲತಜ್ಞ ರಾಜೇಂದ್ರ ಸಿಂಗ್ .ಸ್ವಚ್ಛ ನಗರದಲ್ಲಿ ಕಲುಷಿತ ನೀರಿನ ದುರಂತ: ಇಂದೋರ್ ಕಮಿಷನರ್ ವಜಾ, ಇಬ್ಬರ ಅಮಾನತು.<p>‘ಕಲುಷಿತ ಕುಡಿಯುವ ನೀರು ಕುಡಿದು ಇದುವರೆಗೆ 10 ಮಂದಿ ಮೃತಪಟ್ಟಿದ್ದಾರೆ’ ಎಂದು ಇಂದೋರ್ನ ಮೇಯರ್ ಪುಷ್ಯಮಿತ್ರ ಭಾರ್ಗವ ತಿಳಿಸಿದ್ದಾರೆ. ಆದರೆ, 16 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.</p><p><strong>ಘಂಟೆ ಪ್ರತಿಭಟನೆ:</strong> ಪ್ರಕರಣದ ಹೊಣೆಹೊತ್ತು ಸ್ಥಳೀಯ ಶಾಸಕ ಹಾಗೂ ಸಚಿವ ಕೈಲಾಸ್ ವಿಜಯ್ವರ್ಗೀಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಮಧ್ಯಪ್ರದೇಶ ಕಾಂಗ್ರೆಸ್ ಘಟಕವು ಸೋಮವಾರ ‘ಘಂಟಾನಾದ’ ಹೆಸರಿನಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿತು.</p><p>ಪ್ರಕರಣವನ್ನು ಕೂಡಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ವಿಜಯ್ವರ್ಗೀಯ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.</p><p>‘ಈಗ ಸೃಷ್ಟಿಯಾಗಿರುವ ಸಮಸ್ಯೆಯನ್ನು ಬಗೆಹರಿಸದಿದ್ದರೆ, ರಾಜ್ಯವ್ಯಾಪಿ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ಕಾಂಗ್ರೆಸ್ನ ರಾಜ್ಯ ಘಟಕದ ಅಧ್ಯಕ್ಷ ಜಿತು ಪಟ್ವಾರಿ ಎಚ್ಚರಿಕೆ ನೀಡಿದ್ದಾರೆ.</p><p><strong>ಅಧಿಕಾರಿಯ ಅಮಾನತು</strong>: ಪ್ರಕರಣದಲ್ಲಿ ಗಂಭೀರ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ದೇವಾಸ್ನ ಉಪ ವಿಭಾಗಾಧಿಕಾರಿಯನ್ನು ಅಮಾನತುಗೊಳಿಸಿ ಉಜೈನಿ ವಿಭಾಗೀಯ ಕಂದಾಯ ಅಧಿಕಾರಿ ಆಶೀಶ್ ಸಿಂಗ್ ಆದೇಶ ಹೊರಡಿಸಿದ್ದಾರೆ.</p><p>ಸಚಿವ ಕೈಲಾಸ್ ಅವರು ಪತ್ರಕರ್ತರ ವಿರುದ್ಧ ಇತ್ತೀಚಿಗೆ ಆಕ್ಷೇಪಾರ್ಹ ಪದ ಬಳಸಿದ್ದರು. ಸಚಿವರ ವರ್ತನೆಯನ್ನು ‘ಸರ್ವಾಧಿಕಾರಿ ನಡೆ’ ಎಂದು ದೇವಾಸ್ನ ಉಪ ವಿಭಾಗಾಧಿಕಾರಿ ಟೀಕಿಸಿದ್ದರು.</p>.ಬಡವರ ಸಾವಿಗೆ ಮೋದಿ ಸದಾ ಮೌನ: ಇಂದೋರ್ ಘಟನೆಗೆ ರಾಹುಲ್ ಪ್ರತಿಕ್ರಿಯೆ.ಇಂದೋರ್: ಕಲುಷಿತ ನೀರು ಸೇವಿಸಿ 7 ಸಾವು, 140ಕ್ಕೂ ಅಧಿಕ ಮಂದಿ ಅಸ್ವಸ್ಥ .ಇಂದೋರ್ | ಕೆಲಸ ಕಸಿದುಕೊಂಡ ಎಐ: ಸಿನಿಮಾದಿಂದ ಪ್ರೇರಣೆಗೊಂಡು ಕಳ್ಳತನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂದೋರ್</strong>: ಇಲ್ಲಿನ ಭಾಗೀರಥಿಪುರದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದ 142 ಮಂದಿ ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ 11 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ. ಇಡೀ ಪ್ರದೇಶದಲ್ಲಿ ಆರೋಗ್ಯ ತಂಡವು ಬೀಡುಬಿಟ್ಟಿದ್ದು, 20 ಮಂದಿಗೆ ಅತಿಸಾರ ಹರಡಿರುವುದನ್ನು ಪತ್ತೆಹಚ್ಚಿದೆ.</p><p>‘ಭಾಗೀರಥಿಪುರದ 2,354 ಮನೆಗಳ ಸಮೀಕ್ಷೆ ನಡೆಸಿರುವ ಆರೋಗ್ಯ ಇಲಾಖೆಯ ತಂಡವು 9,416 ಮಂದಿಯನ್ನು ಪರೀಕ್ಷೆ ನಡೆಸಿದೆ. ಈ ವೇಳೆ 20 ಮಂದಿ ಭೇದಿಯಿಂದ ಬಳಲುತ್ತಿರುವುದು ಕಂಡುಬಂದಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ದುರಂತ ನಡೆದ ಬಳಿಕ ಇದುವರೆಗೂ 398 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 256 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ 142 ಮಂದಿಯ ಚಿಕಿತ್ಸೆ ಮುಂದುವರಿದಿದ್ದು, 11 ಮಂದಿ ಈಗಲೂ ತೀವ್ರ ನಿಗಾ ಘಟಕದಲ್ಲಿದ್ದಾರೆ. </p><p>‘ಸಾಂಕ್ರಾಮಿಕ ರೋಗವು ಈಗ ನಿಯಂತ್ರಣದಲ್ಲಿದೆ. ಕೋಲ್ಕತ್ತದಲ್ಲಿರುವ ಬ್ಯಾಕ್ಟೀರಿಯಾ ಸೋಂಕುಗಳ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ (ಎನ್ಐಆರ್ಬಿಐ) ತಜ್ಞರ ತಂಡವು ಈಗಾಗಲೇ ಭಾಗೀರಥಿಪುರಕ್ಕೆ ಬಂದಿದ್ದು, ಪರಿಶೀಲನೆ ನಡೆಸುತ್ತಿದೆ’ ಎಂದು ಮಧ್ಯಪ್ರದೇಶದ ಮುಖ್ಯ ವೈದ್ಯಕೀಯ ಆರೋಗ್ಯಾಧಿಕಾರಿ ಡಾ.ಮಾಧವ ಪ್ರಸಾದ್ ಹಸನಿ ತಿಳಿಸಿದ್ದಾರೆ.</p>.ಇಂದೋರ್ ದುರಂತ ವ್ಯವಸ್ಥೆ ಸೃಷ್ಟಿಸಿದ ವಿಪತ್ತು: ಜಲತಜ್ಞ ರಾಜೇಂದ್ರ ಸಿಂಗ್ .ಸ್ವಚ್ಛ ನಗರದಲ್ಲಿ ಕಲುಷಿತ ನೀರಿನ ದುರಂತ: ಇಂದೋರ್ ಕಮಿಷನರ್ ವಜಾ, ಇಬ್ಬರ ಅಮಾನತು.<p>‘ಕಲುಷಿತ ಕುಡಿಯುವ ನೀರು ಕುಡಿದು ಇದುವರೆಗೆ 10 ಮಂದಿ ಮೃತಪಟ್ಟಿದ್ದಾರೆ’ ಎಂದು ಇಂದೋರ್ನ ಮೇಯರ್ ಪುಷ್ಯಮಿತ್ರ ಭಾರ್ಗವ ತಿಳಿಸಿದ್ದಾರೆ. ಆದರೆ, 16 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.</p><p><strong>ಘಂಟೆ ಪ್ರತಿಭಟನೆ:</strong> ಪ್ರಕರಣದ ಹೊಣೆಹೊತ್ತು ಸ್ಥಳೀಯ ಶಾಸಕ ಹಾಗೂ ಸಚಿವ ಕೈಲಾಸ್ ವಿಜಯ್ವರ್ಗೀಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಮಧ್ಯಪ್ರದೇಶ ಕಾಂಗ್ರೆಸ್ ಘಟಕವು ಸೋಮವಾರ ‘ಘಂಟಾನಾದ’ ಹೆಸರಿನಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿತು.</p><p>ಪ್ರಕರಣವನ್ನು ಕೂಡಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ವಿಜಯ್ವರ್ಗೀಯ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.</p><p>‘ಈಗ ಸೃಷ್ಟಿಯಾಗಿರುವ ಸಮಸ್ಯೆಯನ್ನು ಬಗೆಹರಿಸದಿದ್ದರೆ, ರಾಜ್ಯವ್ಯಾಪಿ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ಕಾಂಗ್ರೆಸ್ನ ರಾಜ್ಯ ಘಟಕದ ಅಧ್ಯಕ್ಷ ಜಿತು ಪಟ್ವಾರಿ ಎಚ್ಚರಿಕೆ ನೀಡಿದ್ದಾರೆ.</p><p><strong>ಅಧಿಕಾರಿಯ ಅಮಾನತು</strong>: ಪ್ರಕರಣದಲ್ಲಿ ಗಂಭೀರ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ದೇವಾಸ್ನ ಉಪ ವಿಭಾಗಾಧಿಕಾರಿಯನ್ನು ಅಮಾನತುಗೊಳಿಸಿ ಉಜೈನಿ ವಿಭಾಗೀಯ ಕಂದಾಯ ಅಧಿಕಾರಿ ಆಶೀಶ್ ಸಿಂಗ್ ಆದೇಶ ಹೊರಡಿಸಿದ್ದಾರೆ.</p><p>ಸಚಿವ ಕೈಲಾಸ್ ಅವರು ಪತ್ರಕರ್ತರ ವಿರುದ್ಧ ಇತ್ತೀಚಿಗೆ ಆಕ್ಷೇಪಾರ್ಹ ಪದ ಬಳಸಿದ್ದರು. ಸಚಿವರ ವರ್ತನೆಯನ್ನು ‘ಸರ್ವಾಧಿಕಾರಿ ನಡೆ’ ಎಂದು ದೇವಾಸ್ನ ಉಪ ವಿಭಾಗಾಧಿಕಾರಿ ಟೀಕಿಸಿದ್ದರು.</p>.ಬಡವರ ಸಾವಿಗೆ ಮೋದಿ ಸದಾ ಮೌನ: ಇಂದೋರ್ ಘಟನೆಗೆ ರಾಹುಲ್ ಪ್ರತಿಕ್ರಿಯೆ.ಇಂದೋರ್: ಕಲುಷಿತ ನೀರು ಸೇವಿಸಿ 7 ಸಾವು, 140ಕ್ಕೂ ಅಧಿಕ ಮಂದಿ ಅಸ್ವಸ್ಥ .ಇಂದೋರ್ | ಕೆಲಸ ಕಸಿದುಕೊಂಡ ಎಐ: ಸಿನಿಮಾದಿಂದ ಪ್ರೇರಣೆಗೊಂಡು ಕಳ್ಳತನ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>