‘ಮುಂಬರುವ ಚಳಿಗಾಲದಲ್ಲಿ ಪಾಕಿಸ್ತಾನದ ವಿವಿಧ ಕಡೆಗಳಿಂದ ಉಗ್ರರು ಗಡಿ ನಿಯಂತ್ರಣ ರೇಖೆ (ಎಲ್ಒಸಿ) ದಾಟಿ ಬರುವ ಸಾಧ್ಯತೆ ಇದೆ. ಕಾಶ್ಮೀರ ಕಣಿವೆಯ ಸುತ್ತ ಉಗ್ರರು ಕ್ರಿಯಾಶೀಲರಾಗಿದ್ದಾರೆ. 1947ರಿಂದ ಉತ್ತರ ಕಾಶ್ಮೀರದವರು ಸೇನೆಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಯಾವುದೇ ಉಗ್ರರಿಗೆ ಇವರು ಆಶ್ರಯ ನೀಡಿಲ್ಲ. ಈ ಜನರಿಗೆ ಸೇನೆ ಎಲ್ಲ ಸಹಕಾರ ನೀಡುತ್ತದೆ. ಇಲ್ಲಿನ ಯುವಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ನೇಮಕ ಮಾಡಿಕೊಳ್ಳುತ್ತೇವೆ. ಆದರೆ, ಉಗ್ರರಿಗೆ ಆಶ್ರಯ ನೀಡುತ್ತಿರುವ ದಕ್ಷಿಣ ಕಾಶ್ಮೀರಿಗರು, ಉತ್ತರ ಕಾಶ್ಮೀರದವರಿಂದ ಪಾಠ ಕಲಿಯುವ ಅಗತ್ಯವಿದೆ’ ಎಂದು ಭಟ್ ಹೇಳಿದ್ದಾರೆ.