ಭಾರತೀಯ ರಿಸರ್ವ್ ಬ್ಯಾಂಕ್ ನಡೆಸಿರುವ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಆರು ಸಾವಿರ ಕುಟುಂಬಗಳ ಪೈಕಿ ಶೇ 90ರಷ್ಟು ಕುಟುಂಬಗಳು ಈ ಕಳವಳ ಹಂಚಿಕೊಂಡಿವೆ. ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತ ಮತ್ತಿತರ ನಗರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಲೋಕಸಭೆಗೆ ಚುನಾವಣೆ ನಡೆಯಲು ಐದು ತಿಂಗಳಷ್ಟೆ ಬಾಕಿ ಇರುವಾಗ ಈ ಸಮೀಕ್ಷೆ ವಿವರ ಪ್ರಕಟವಾಗಿದೆ. ಉದ್ಯೋಗ ಅವಕಾಶಗಳೂ ಕಡಿಮೆ ಇರಲಿವೆ ಎನ್ನುವುದು ಯುವ ಜನಾಂಗದ ಮುಖ್ಯ ಕಳವಳವಾಗಿದೆ.