<p>ಉತ್ತರ ಕಾಶ್ಮೀರದಲ್ಲಿ ಶನಿವಾರ ರಾತ್ರಿಯಿಂದ ನಡೆಯುತ್ತಿದ್ದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಐವರು ಭದ್ರತಾ ಸಿಬ್ಬಂದಿಯಲ್ಲಿ ಇಬ್ಬರು ಹಿರಿಯ ಸೇನಾಧಿಕಾರಿಗಳೂ ಇದ್ದಾರೆ.</p>.<p>ಕುಪ್ವಾರ ಜಿಲ್ಲೆ ಹಂದ್ವಾರದಲ್ಲಿ ನಡೆದ ಎನ್ಕೌಂಟರ್ನಲ್ಲಿ ಕರ್ನಲ್ ಆಶುತೋಷ್ ಶರ್ಮಾ, ಮೇಜರ್ ಅನುಜ್ ಸೂದ್, ನಾಯಕ್ ರಾಜೇಶ್,ಲ್ಯಾನ್ಸ್ ನಾಯಕ್ ದಿನೇಶ್ಮತ್ತುಪೊಲೀಸ್ ಸಬ್ಇನ್ಸ್ಪೆಕ್ಟರ್ ಸಗೀರ್ ಅಹ್ಮದ್ ಪಠಾಣ್ ಹುತಾತ್ಮರಾದರು.</p>.<p>ಧೈರ್ಯಕ್ಕೆ ಹೆಸರುವಾಸಿಯಾದ ಕರ್ನಲ್ ಶರ್ಮಾ 21ನೇ ರಾಷ್ಟ್ರೀಯ ರೈಫಲ್ಸ್ನ ಕಮಾಂಡಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಎರಡು ಬಾರಿ ಶೌರ್ಯ ಪ್ರಶಸ್ತಿ ಪಡೆದಿದ್ದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/colonel-major-among-seven-killed-in-kashmir-handwara-724776.html" target="_blank">ಹಂದ್ವಾರ ಎನ್ಕೌಂಟರ್–ಕರ್ನಲ್, ಮೇಜರ್ ಸೇರಿ ಐವರು ಹುತಾತ್ಮ</a></p>.<div style="text-align:center"><figcaption><em><strong>ಹುತಾತ್ಮರು... ಕರ್ನಲ್ ಆಶುತೋಷ್ ಶರ್ಮಾ, ಮೇಜರ್ ಅನುಜ್ ಸೂದ್, ನಾಯಕ್ ರಾಜೇಶ್, ಲ್ಯಾನ್ಸ್ ನಾಯಕ್ ದಿನೇಶ್. ಸಬ್ ಇನ್ಸ್ಪೆಕ್ಟರ್ ಎಸ್.ಎ.ಖಾಜಿ</strong></em></figcaption></div>.<p><strong>ಶರ್ಮಾ ಅವರ ಬಗ್ಗೆ ತಿಳಿಯಬೇಕಾದ ಸಂಗತಿಗಳಿವು...</strong></p>.<p>1) ಕರ್ನಲ್ ಆಶುತೋಷ್ ಶರ್ಮಾ ಅವರ ಹುಟ್ಟೂರು ಉತ್ತರ ಪ್ರದೇಶದ ಬುಲಂದ್ಶಹರ್. ಪತ್ನಿ ಮತ್ತು 12 ವರ್ಷದ ಮಗಳಿದ್ದಾಳೆ.</p>.<p>2) ಹಲವು ಯಶಸ್ವಿ ಉಗ್ರಗಾಮಿ ನಿಗ್ರಹ ಕಾರ್ಯಾಚರಣೆಗಳಲ್ಲಿ ಶರ್ಮಾ ಪಾಲ್ಗೊಂಡಿದ್ದರು. ಕಾಶ್ಮೀರದಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದರು. ಒಮ್ಮೆ ಸೇನಾ ಮೆಡಲ್ ಮತ್ತು ಒಮ್ಮೆ ಶೌರ್ಯ ಪ್ರಶಸ್ತಿ ಬಂದಿತ್ತು.</p>.<p>3) ಬಟ್ಟೆಗಳಲ್ಲಿ ಗ್ರೆನೇಡ್ ಅಡಗಿಸಿಕೊಂಡುಸೇನಾ ಸಿಬ್ಬಂದಿಯತ್ತ ಓಡಿ ಬರುತ್ತಿದ್ದ ಉಗ್ರಗಾಮಿಯೊಬ್ಬನನ್ನು ಹತ್ತಿರದಿಂದ ಗುಂಡಿಕ್ಕಿ ಕೊಂದಿದ್ದರು. ಇವರ ಚುರುಕುತನ ಮತ್ತು ಧೈರ್ಯವನ್ನು ಗುರುತಿಸಿದ್ದ ಸರ್ಕಾರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.</p>.<p>4) ಕಳೆದ 5 ವರ್ಷಗಳಲ್ಲಿ ಹುತಾತ್ಮರಾದ ಮೊದಲ ಕರ್ನಲ್ ದರ್ಜೆಯ ಅಧಿಕಾರಿ ಇವರು. ಈ ಹಿಂದೆ, 2015ರಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಕರ್ನಲ್ ದರ್ಜೆಯ ಅಧಿಕಾರಿಗಳು ಹುತಾತ್ಮರಾಗಿದ್ದರು.</p>.<p>5) ಲಷ್ಕರ್ ಎ ತಯ್ಯಾಬಾದ ಕಮಾಂಡರ್ನನ್ನು ಬಂಧಿಸುತ್ತೇನೆ ಅಥವಾ ಕೊಂದು ಹಾಕುತ್ತೇನೆ ಎಂದು ಶಿಬಿರದಿಂದ ಹೊರಡುವ ಮೊದಲು ಸಹವರ್ತಿಗಳಿಗೆ ಭರವಸೆ ಕೊಟ್ಟಿದ್ದರು ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.</p>.<p>6) ಸೇನೆಗೆ ಸೇರಬೇಕೆಂದು ಸತತವಾಗಿ ಆರೂವರೆ ವರ್ಷ ಕಷ್ಟಪಟ್ಟಿದ್ದರು. 13ನೇ ಪ್ರಯತ್ನದಲ್ಲಿ ಅವರಿಗೆ ಯಶಸ್ಸು ಸಿಕ್ಕಿತ್ತು.</p>.<p>7) ಸೈನಿಕರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಹಲವು ಬಾರಿ ನಿಯಮಗಳನ್ನು ಮೀರಿದ್ದರು ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.</p>.<p>8) ಚಂಗಿಮುಲ್ಲಾ ಗ್ರಾಮದಲ್ಲಿ ಉಗ್ರಗಾಮಿಗಳು ಅಡಗಿದ್ದಾರೆ ಎಂಬ ಗುಪ್ತಚರ ಮಾಹಿತಿ ಆಧರಿಸಿ ವ್ಯಾಪಕ ತಪಾಸಣೆ ಕಾರ್ಯಾಚರಣೆ ಆರಂಭಿಸಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಗುಂಡಿನ ಚಕಮಕಿ ಆರಂಭವಾಯಿತು.</p>.<p>9) ಉಗ್ರರು ವ್ಯಾಪಕವಾಗಿ ಗುಂಡಿನ ದಾಳಿ ಆರಂಭಿಸಿದಾಗ ನಾಗರಿಕರ ರಕ್ಷಣೆಗೆ ಭದ್ರತಾ ಸಿಬ್ಬಂದಿ ಆದ್ಯತೆ ಕೊಟ್ಟರು. ಈ ಸಂದರ್ಭ ಕರ್ನಲ್ ಮತ್ತು ಅವರೊಂದಿಗಿದ್ದ ತಂಡದ ಜೊತೆಗೆ ಸಂಪರ್ಕ ಕಡಿದುಹೋಯಿತು.</p>.<p>10) ಮೇ 5ರಂದು ಶ್ರೀನಗರದಲ್ಲಿ ಅಂತಿಮ ನಮನ ಸಲ್ಲಿಸಲಾಗುವುದು. ನಂತರ ಅವರ ಸ್ವಗ್ರಾಮಗಳಿಗೆ ಪಾರ್ಥಿವ ಶರೀರಗಳನ್ನು ಕಳಿಸಲಾಗುವುದು. ಕೊರೊನಾ ವೈರಸ್ ಸುರಕ್ಷತೆಯ ಶಿಷ್ಟಾಚಾರದ ಅನ್ವಯ ಅಂತ್ಯಸಂಸ್ಕಾರ ನಡೆಯಲಿದೆ.</p>.<div style="text-align:center"><figcaption><em><strong>ಉತ್ತರ ಕಾಶ್ಮೀರದ ಹಂದ್ವಾರದಲ್ಲಿ ಉಗ್ರರ ಗುಂಡಿಗೆ ಹುತಾತ್ಮರಾದ ಸಬ್ ಇನ್ಸ್ಪೆಕ್ಟರ್ ಖಾಜಿ ಎಸ್.ಎ.ಪಠಾಣ್ ಅವರಿಗೆ ಹಿರಿಯ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.</strong></em></figcaption></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉತ್ತರ ಕಾಶ್ಮೀರದಲ್ಲಿ ಶನಿವಾರ ರಾತ್ರಿಯಿಂದ ನಡೆಯುತ್ತಿದ್ದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಐವರು ಭದ್ರತಾ ಸಿಬ್ಬಂದಿಯಲ್ಲಿ ಇಬ್ಬರು ಹಿರಿಯ ಸೇನಾಧಿಕಾರಿಗಳೂ ಇದ್ದಾರೆ.</p>.<p>ಕುಪ್ವಾರ ಜಿಲ್ಲೆ ಹಂದ್ವಾರದಲ್ಲಿ ನಡೆದ ಎನ್ಕೌಂಟರ್ನಲ್ಲಿ ಕರ್ನಲ್ ಆಶುತೋಷ್ ಶರ್ಮಾ, ಮೇಜರ್ ಅನುಜ್ ಸೂದ್, ನಾಯಕ್ ರಾಜೇಶ್,ಲ್ಯಾನ್ಸ್ ನಾಯಕ್ ದಿನೇಶ್ಮತ್ತುಪೊಲೀಸ್ ಸಬ್ಇನ್ಸ್ಪೆಕ್ಟರ್ ಸಗೀರ್ ಅಹ್ಮದ್ ಪಠಾಣ್ ಹುತಾತ್ಮರಾದರು.</p>.<p>ಧೈರ್ಯಕ್ಕೆ ಹೆಸರುವಾಸಿಯಾದ ಕರ್ನಲ್ ಶರ್ಮಾ 21ನೇ ರಾಷ್ಟ್ರೀಯ ರೈಫಲ್ಸ್ನ ಕಮಾಂಡಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಎರಡು ಬಾರಿ ಶೌರ್ಯ ಪ್ರಶಸ್ತಿ ಪಡೆದಿದ್ದರು.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/colonel-major-among-seven-killed-in-kashmir-handwara-724776.html" target="_blank">ಹಂದ್ವಾರ ಎನ್ಕೌಂಟರ್–ಕರ್ನಲ್, ಮೇಜರ್ ಸೇರಿ ಐವರು ಹುತಾತ್ಮ</a></p>.<div style="text-align:center"><figcaption><em><strong>ಹುತಾತ್ಮರು... ಕರ್ನಲ್ ಆಶುತೋಷ್ ಶರ್ಮಾ, ಮೇಜರ್ ಅನುಜ್ ಸೂದ್, ನಾಯಕ್ ರಾಜೇಶ್, ಲ್ಯಾನ್ಸ್ ನಾಯಕ್ ದಿನೇಶ್. ಸಬ್ ಇನ್ಸ್ಪೆಕ್ಟರ್ ಎಸ್.ಎ.ಖಾಜಿ</strong></em></figcaption></div>.<p><strong>ಶರ್ಮಾ ಅವರ ಬಗ್ಗೆ ತಿಳಿಯಬೇಕಾದ ಸಂಗತಿಗಳಿವು...</strong></p>.<p>1) ಕರ್ನಲ್ ಆಶುತೋಷ್ ಶರ್ಮಾ ಅವರ ಹುಟ್ಟೂರು ಉತ್ತರ ಪ್ರದೇಶದ ಬುಲಂದ್ಶಹರ್. ಪತ್ನಿ ಮತ್ತು 12 ವರ್ಷದ ಮಗಳಿದ್ದಾಳೆ.</p>.<p>2) ಹಲವು ಯಶಸ್ವಿ ಉಗ್ರಗಾಮಿ ನಿಗ್ರಹ ಕಾರ್ಯಾಚರಣೆಗಳಲ್ಲಿ ಶರ್ಮಾ ಪಾಲ್ಗೊಂಡಿದ್ದರು. ಕಾಶ್ಮೀರದಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದರು. ಒಮ್ಮೆ ಸೇನಾ ಮೆಡಲ್ ಮತ್ತು ಒಮ್ಮೆ ಶೌರ್ಯ ಪ್ರಶಸ್ತಿ ಬಂದಿತ್ತು.</p>.<p>3) ಬಟ್ಟೆಗಳಲ್ಲಿ ಗ್ರೆನೇಡ್ ಅಡಗಿಸಿಕೊಂಡುಸೇನಾ ಸಿಬ್ಬಂದಿಯತ್ತ ಓಡಿ ಬರುತ್ತಿದ್ದ ಉಗ್ರಗಾಮಿಯೊಬ್ಬನನ್ನು ಹತ್ತಿರದಿಂದ ಗುಂಡಿಕ್ಕಿ ಕೊಂದಿದ್ದರು. ಇವರ ಚುರುಕುತನ ಮತ್ತು ಧೈರ್ಯವನ್ನು ಗುರುತಿಸಿದ್ದ ಸರ್ಕಾರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.</p>.<p>4) ಕಳೆದ 5 ವರ್ಷಗಳಲ್ಲಿ ಹುತಾತ್ಮರಾದ ಮೊದಲ ಕರ್ನಲ್ ದರ್ಜೆಯ ಅಧಿಕಾರಿ ಇವರು. ಈ ಹಿಂದೆ, 2015ರಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಕರ್ನಲ್ ದರ್ಜೆಯ ಅಧಿಕಾರಿಗಳು ಹುತಾತ್ಮರಾಗಿದ್ದರು.</p>.<p>5) ಲಷ್ಕರ್ ಎ ತಯ್ಯಾಬಾದ ಕಮಾಂಡರ್ನನ್ನು ಬಂಧಿಸುತ್ತೇನೆ ಅಥವಾ ಕೊಂದು ಹಾಕುತ್ತೇನೆ ಎಂದು ಶಿಬಿರದಿಂದ ಹೊರಡುವ ಮೊದಲು ಸಹವರ್ತಿಗಳಿಗೆ ಭರವಸೆ ಕೊಟ್ಟಿದ್ದರು ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.</p>.<p>6) ಸೇನೆಗೆ ಸೇರಬೇಕೆಂದು ಸತತವಾಗಿ ಆರೂವರೆ ವರ್ಷ ಕಷ್ಟಪಟ್ಟಿದ್ದರು. 13ನೇ ಪ್ರಯತ್ನದಲ್ಲಿ ಅವರಿಗೆ ಯಶಸ್ಸು ಸಿಕ್ಕಿತ್ತು.</p>.<p>7) ಸೈನಿಕರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಹಲವು ಬಾರಿ ನಿಯಮಗಳನ್ನು ಮೀರಿದ್ದರು ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.</p>.<p>8) ಚಂಗಿಮುಲ್ಲಾ ಗ್ರಾಮದಲ್ಲಿ ಉಗ್ರಗಾಮಿಗಳು ಅಡಗಿದ್ದಾರೆ ಎಂಬ ಗುಪ್ತಚರ ಮಾಹಿತಿ ಆಧರಿಸಿ ವ್ಯಾಪಕ ತಪಾಸಣೆ ಕಾರ್ಯಾಚರಣೆ ಆರಂಭಿಸಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಗುಂಡಿನ ಚಕಮಕಿ ಆರಂಭವಾಯಿತು.</p>.<p>9) ಉಗ್ರರು ವ್ಯಾಪಕವಾಗಿ ಗುಂಡಿನ ದಾಳಿ ಆರಂಭಿಸಿದಾಗ ನಾಗರಿಕರ ರಕ್ಷಣೆಗೆ ಭದ್ರತಾ ಸಿಬ್ಬಂದಿ ಆದ್ಯತೆ ಕೊಟ್ಟರು. ಈ ಸಂದರ್ಭ ಕರ್ನಲ್ ಮತ್ತು ಅವರೊಂದಿಗಿದ್ದ ತಂಡದ ಜೊತೆಗೆ ಸಂಪರ್ಕ ಕಡಿದುಹೋಯಿತು.</p>.<p>10) ಮೇ 5ರಂದು ಶ್ರೀನಗರದಲ್ಲಿ ಅಂತಿಮ ನಮನ ಸಲ್ಲಿಸಲಾಗುವುದು. ನಂತರ ಅವರ ಸ್ವಗ್ರಾಮಗಳಿಗೆ ಪಾರ್ಥಿವ ಶರೀರಗಳನ್ನು ಕಳಿಸಲಾಗುವುದು. ಕೊರೊನಾ ವೈರಸ್ ಸುರಕ್ಷತೆಯ ಶಿಷ್ಟಾಚಾರದ ಅನ್ವಯ ಅಂತ್ಯಸಂಸ್ಕಾರ ನಡೆಯಲಿದೆ.</p>.<div style="text-align:center"><figcaption><em><strong>ಉತ್ತರ ಕಾಶ್ಮೀರದ ಹಂದ್ವಾರದಲ್ಲಿ ಉಗ್ರರ ಗುಂಡಿಗೆ ಹುತಾತ್ಮರಾದ ಸಬ್ ಇನ್ಸ್ಪೆಕ್ಟರ್ ಖಾಜಿ ಎಸ್.ಎ.ಪಠಾಣ್ ಅವರಿಗೆ ಹಿರಿಯ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.</strong></em></figcaption></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>