<p><strong>ನವದೆಹಲಿ:</strong> ಅಹಮದಾಬಾದ್ನಲ್ಲಿ ಜೂನ್ 12ರಂದು ಸಂಭವಿಸಿದ್ದ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತ ಪ್ರಾಥಮಿಕ ತನಿಖೆಯ ವರದಿಯ ಆಯ್ಧ ಭಾಗವನ್ನು ಬಿಡುಗಡೆ ಮಾಡಿರುವುದನ್ನು ‘ದುರದೃಷ್ಟಕರ ಮತ್ತು ಬೇಜವಾಬ್ದಾರಿತನ’ ಎಂದು ಸುಪ್ರೀಂಕೋರ್ಟ್ ಸೋಮವಾರ ಖಂಡಿಸಿದೆ. </p>.<p>ಪೈಲಟ್ಗಳ ಲೋಪದಿಂದಾಗಿ ವಿಮಾನ ಅಪಘಾತ ನಡೆದಿದೆ ಎಂದು ವಿವರಿಸುವ ವರದಿಯ ಈ ಆಯ್ದ ಭಾಗಗಳು ಮಾಧ್ಯಮಗಳು ನಿರೂಪಣೆ ರಚಿಸಲು ದಾರಿ ಮಾಡಿಕೊಡುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.<p>ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರ ಪೀಠವು, ‘ವಿಚಾರಣೆ ಪೂರ್ಣಗೊಳ್ಳುವವರೆಗೆ ಈ ರೀತಿಯ ವರದಿಗಳು ಸಂಪೂರ್ಣವಾಗಿ ಗೌಪ್ಯವಾಗಿರಬೇಕು. ನಾವು ಅಂತಿಮ ವರದಿಗಾಗಿ ಕಾಯಬೇಕು. ಇದರಲ್ಲಿ ಅಪಘಾತದಲ್ಲಿ ಮೃತಪಟ್ಟವರ ಗೌಪ್ಯತೆ ಮತ್ತು ಘನತೆಯ ಅಂಶವೂ ಒಳಗೊಂಡಿತ್ತು’ ಎಂದು ಹೇಳಿದೆ.</p>.<p>ಜುಲೈ 12ರಂದು ಬಿಡುಗಡೆಯಾದ ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ಪ್ರಾಥಮಿಕ ವರದಿಯ ಕೆಲವು ಅಂಶಗಳನ್ನು ಪೀಠವು ಟಿಪ್ಪಣಿ ಮಾಡಿಕೊಂಡಿದ್ದು, ಮಾಧ್ಯಮ ನಿರೂಪಣೆಗೆ ಕಾರಣವಾದ ವರದಿಗಳಲ್ಲಿ ‘ತುಂಡು ಮತ್ತು ಆಯ್ಧ’ ಭಾಗಗಳನ್ನು ಪ್ರಕಟಿಸಿದ್ದು ಬೇಜವಾಬ್ದಾರಿತನ ಎಂದು ಟೀಕಿಸಿದೆ.</p>.<p>ಸೇಫ್ಟೀ ಮ್ಯಾಟರ್ಸ್ ಫೌಂಡೇಷನ್ ಎಂಬ ಎನ್ಜಿಒ ಪರವಾಗಿ ಹಾಜರಾದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು, ‘ಅಪಘಾತ ನಡೆದ ನಂತರ ರಚಿಸಲಾದ ತನಿಖಾ ಸಮಿತಿಯಲ್ಲಿ ಮೂವರು ಸದಸ್ಯರು ವಾಯುಯಾನ ನಿಯಂತ್ರಕದವರೇ ಇದ್ದು, ವರದಿಯಲ್ಲಿ ಹಿತಾಸಕ್ತಿ ಸಂಘರ್ಷದ ಸಮಸ್ಯೆ ಇರುತ್ತದೆ’ ಎಂದು ಆರೋಪಿಸಿದ್ದಾರೆ.</p>.<p>ಅಪಘಾತಕ್ಕೆ ಪೈಲಟ್ಗಳನ್ನು ದೂಷಿಸುವ ಪ್ರಾಥಮಿಕ ವರದಿಯ ಒಂದು ಸಾಲು ಪ್ರಪಂಚದಾದ್ಯಂತ ಮಾಧ್ಯಮಗಳಲ್ಲಿ ನಿರೂಪಣೆಯನ್ನು ನಿರ್ಮಿಸಲು ಕಾರಣವಾಯಿತು ಎಂದು ಈ ಹಿಂದೆಯೆ ಪ್ರಶಾಂತ್ ಭೂಷಣ್ ಹೇಳಿದ್ದರು.</p>.<p>ಜೂನ್ 12ಕ್ಕೆ ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿದ್ದ ಏರ್ ಇಂಡಿಯಾ ಅಪಘಾತದಲ್ಲಿ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 265 ಜನರು ಮೃತಪಟ್ಟಿದ್ದರು. ವಿಮಾನವು ಹಾರಾಟ ಪ್ರಾರಂಭಿಸಿದ ತಕ್ಷಣವೇ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ಗೆ ಅಪ್ಪಳಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಅಹಮದಾಬಾದ್ನಲ್ಲಿ ಜೂನ್ 12ರಂದು ಸಂಭವಿಸಿದ್ದ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತ ಪ್ರಾಥಮಿಕ ತನಿಖೆಯ ವರದಿಯ ಆಯ್ಧ ಭಾಗವನ್ನು ಬಿಡುಗಡೆ ಮಾಡಿರುವುದನ್ನು ‘ದುರದೃಷ್ಟಕರ ಮತ್ತು ಬೇಜವಾಬ್ದಾರಿತನ’ ಎಂದು ಸುಪ್ರೀಂಕೋರ್ಟ್ ಸೋಮವಾರ ಖಂಡಿಸಿದೆ. </p>.<p>ಪೈಲಟ್ಗಳ ಲೋಪದಿಂದಾಗಿ ವಿಮಾನ ಅಪಘಾತ ನಡೆದಿದೆ ಎಂದು ವಿವರಿಸುವ ವರದಿಯ ಈ ಆಯ್ದ ಭಾಗಗಳು ಮಾಧ್ಯಮಗಳು ನಿರೂಪಣೆ ರಚಿಸಲು ದಾರಿ ಮಾಡಿಕೊಡುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>.<p>ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರ ಪೀಠವು, ‘ವಿಚಾರಣೆ ಪೂರ್ಣಗೊಳ್ಳುವವರೆಗೆ ಈ ರೀತಿಯ ವರದಿಗಳು ಸಂಪೂರ್ಣವಾಗಿ ಗೌಪ್ಯವಾಗಿರಬೇಕು. ನಾವು ಅಂತಿಮ ವರದಿಗಾಗಿ ಕಾಯಬೇಕು. ಇದರಲ್ಲಿ ಅಪಘಾತದಲ್ಲಿ ಮೃತಪಟ್ಟವರ ಗೌಪ್ಯತೆ ಮತ್ತು ಘನತೆಯ ಅಂಶವೂ ಒಳಗೊಂಡಿತ್ತು’ ಎಂದು ಹೇಳಿದೆ.</p>.<p>ಜುಲೈ 12ರಂದು ಬಿಡುಗಡೆಯಾದ ವಿಮಾನ ಅಪಘಾತ ತನಿಖಾ ಬ್ಯೂರೊ (ಎಎಐಬಿ) ಪ್ರಾಥಮಿಕ ವರದಿಯ ಕೆಲವು ಅಂಶಗಳನ್ನು ಪೀಠವು ಟಿಪ್ಪಣಿ ಮಾಡಿಕೊಂಡಿದ್ದು, ಮಾಧ್ಯಮ ನಿರೂಪಣೆಗೆ ಕಾರಣವಾದ ವರದಿಗಳಲ್ಲಿ ‘ತುಂಡು ಮತ್ತು ಆಯ್ಧ’ ಭಾಗಗಳನ್ನು ಪ್ರಕಟಿಸಿದ್ದು ಬೇಜವಾಬ್ದಾರಿತನ ಎಂದು ಟೀಕಿಸಿದೆ.</p>.<p>ಸೇಫ್ಟೀ ಮ್ಯಾಟರ್ಸ್ ಫೌಂಡೇಷನ್ ಎಂಬ ಎನ್ಜಿಒ ಪರವಾಗಿ ಹಾಜರಾದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು, ‘ಅಪಘಾತ ನಡೆದ ನಂತರ ರಚಿಸಲಾದ ತನಿಖಾ ಸಮಿತಿಯಲ್ಲಿ ಮೂವರು ಸದಸ್ಯರು ವಾಯುಯಾನ ನಿಯಂತ್ರಕದವರೇ ಇದ್ದು, ವರದಿಯಲ್ಲಿ ಹಿತಾಸಕ್ತಿ ಸಂಘರ್ಷದ ಸಮಸ್ಯೆ ಇರುತ್ತದೆ’ ಎಂದು ಆರೋಪಿಸಿದ್ದಾರೆ.</p>.<p>ಅಪಘಾತಕ್ಕೆ ಪೈಲಟ್ಗಳನ್ನು ದೂಷಿಸುವ ಪ್ರಾಥಮಿಕ ವರದಿಯ ಒಂದು ಸಾಲು ಪ್ರಪಂಚದಾದ್ಯಂತ ಮಾಧ್ಯಮಗಳಲ್ಲಿ ನಿರೂಪಣೆಯನ್ನು ನಿರ್ಮಿಸಲು ಕಾರಣವಾಯಿತು ಎಂದು ಈ ಹಿಂದೆಯೆ ಪ್ರಶಾಂತ್ ಭೂಷಣ್ ಹೇಳಿದ್ದರು.</p>.<p>ಜೂನ್ 12ಕ್ಕೆ ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿದ್ದ ಏರ್ ಇಂಡಿಯಾ ಅಪಘಾತದಲ್ಲಿ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 265 ಜನರು ಮೃತಪಟ್ಟಿದ್ದರು. ವಿಮಾನವು ಹಾರಾಟ ಪ್ರಾರಂಭಿಸಿದ ತಕ್ಷಣವೇ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ಗೆ ಅಪ್ಪಳಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>