<p><strong>ನವದೆಹಲಿ:</strong> ರಾಜಧಾನಿ ದೆಹಲಿಯಲ್ಲಿ ಕೋವಿಡ್–19 ಪಿಡುಗು ಹದಗೆಡುತ್ತಿರುವುದದನ್ನು ಗಮನದಲ್ಲಿಟ್ಟುಕೊಂಡು, ಐತಿಹಾಸಿಕ ಜಾಮಾ ಮಸೀದಿಯನ್ನು ಮತ್ತೆ ಮುಚ್ಚಬೇಕಾಗಬಹುದು ಎಂದು ಮಸೀದಿಯ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಬುಧವಾರ ಹೇಳಿದ್ದಾರೆ.</p>.<p>ಕೊರೊನಾ ವೈರಸ್ ಸೋಂಕಿನಿಂದ ಶಾಹಿ ಇಮಾಮ್ ಅವರ ಕಾರ್ಯದರ್ಶಿ ಅಮಾನುಲ್ಲಾ ಅವರು ಮಂಗಳವಾರ ರಾತ್ರಿ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಬೆಳವಣಿಗೆಯಿಂದ ಈ ಕುರಿತ ಚರ್ಚೆ ಆರಂಭವಾಗಿದೆ.</p>.<p>ದೆಹಲಿಯಲ್ಲಿ ಮಂಗಳವಾರ ಹೊಸದಾಗಿ 1,366 ಸೋಂಕು ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 31,309ಕ್ಕೆ ತಲುಪಿದಂತಾಗಿದೆ. ಸಾವಿನ ಸಂಖ್ಯೆ 905ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಜಾಮಾ ಮಸೀದಿಯನ್ನು ಮತ್ತೆ ಮುಚ್ಚುವ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಕೋರಲಾಗಿದೆ. ಜನರು ಸಾಮಾಜಿಕ ಜಾಲತಾಣಗಳು ಹಾಗೂ ಟಿ.ವಿ ವಾಹಿನಿಗಳ ಮೂಲಕ ಅಭಿಪ್ರಾಯ ತಿಳಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.</p>.<p>‘ನಾವು ಮಸೀದಿಯನ್ನು ಮತ್ತೆ ಮುಚ್ಚಬಹುದು ಅಥವಾ ಸೀಮಿತ ಜನರಿಗೆ ನಮಾಜ್ ಮಾಡಲು ಕೆಲ ದಿನಗಳ ಮಟ್ಟಿಗೆ ಅವಕಾಶ ನೀಡಬಹುದು’ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.</p>.<p>ಕೋವಿಡ್ ನಿಯಂತ್ರಣಕ್ಕೆ ತರುವ ಸಲುವಾಗಿ ಹೇರಲಾಗಿದ್ದ ಲಾಕ್ಡೌನ್ ಅನ್ನು ಹಂತ ಹಂತವಾಗಿ ತೆರವುಗೊಳಿಸುತ್ತಿರುವ ಸರ್ಕಾರ, ಜೂನ್ 8ರಿಂದ ಮಸೀದಿಗಳನ್ನು ತೆರೆಯಲು ಅವಕಾಶ ನೀಡಿತ್ತು.</p>.<p>‘ದೆಹಲಿಯಲ್ಲಿ ಕೊರೊನಾ ವೈರಸ್ ಹರಡುವಿಕೆಯು ಉತ್ತುಂಗಕ್ಕೇರಿರುವ ಈ ಸಮಯದಲ್ಲಿ ಮಸೀದಿಗಳಿಗೆ ಭೇಟಿ ನೀಡುವುದರ ಅರ್ಥವೇನು? ಮನೆಯಲ್ಲಿಯೇ ಪ್ರಾರ್ಥನೆ ಮಾಡಬಹುದಲ್ಲವೇ? ಲಾಕ್ಡೌನ್ ಕಾರಣ ರಂಜಾನ್ ಮತ್ತು ಈದ್ ಸಮಯದಲ್ಲಿ ನಾವು ಹಾಗೆ ಮಾಡಿದ್ದೇವಲ್ಲವೇ’ ಎಂದು ಬುಖಾರಿ ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ರಾಜಧಾನಿ ದೆಹಲಿಯಲ್ಲಿ ಕೋವಿಡ್–19 ಪಿಡುಗು ಹದಗೆಡುತ್ತಿರುವುದದನ್ನು ಗಮನದಲ್ಲಿಟ್ಟುಕೊಂಡು, ಐತಿಹಾಸಿಕ ಜಾಮಾ ಮಸೀದಿಯನ್ನು ಮತ್ತೆ ಮುಚ್ಚಬೇಕಾಗಬಹುದು ಎಂದು ಮಸೀದಿಯ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಬುಧವಾರ ಹೇಳಿದ್ದಾರೆ.</p>.<p>ಕೊರೊನಾ ವೈರಸ್ ಸೋಂಕಿನಿಂದ ಶಾಹಿ ಇಮಾಮ್ ಅವರ ಕಾರ್ಯದರ್ಶಿ ಅಮಾನುಲ್ಲಾ ಅವರು ಮಂಗಳವಾರ ರಾತ್ರಿ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಬೆಳವಣಿಗೆಯಿಂದ ಈ ಕುರಿತ ಚರ್ಚೆ ಆರಂಭವಾಗಿದೆ.</p>.<p>ದೆಹಲಿಯಲ್ಲಿ ಮಂಗಳವಾರ ಹೊಸದಾಗಿ 1,366 ಸೋಂಕು ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 31,309ಕ್ಕೆ ತಲುಪಿದಂತಾಗಿದೆ. ಸಾವಿನ ಸಂಖ್ಯೆ 905ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಜಾಮಾ ಮಸೀದಿಯನ್ನು ಮತ್ತೆ ಮುಚ್ಚುವ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಕೋರಲಾಗಿದೆ. ಜನರು ಸಾಮಾಜಿಕ ಜಾಲತಾಣಗಳು ಹಾಗೂ ಟಿ.ವಿ ವಾಹಿನಿಗಳ ಮೂಲಕ ಅಭಿಪ್ರಾಯ ತಿಳಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.</p>.<p>‘ನಾವು ಮಸೀದಿಯನ್ನು ಮತ್ತೆ ಮುಚ್ಚಬಹುದು ಅಥವಾ ಸೀಮಿತ ಜನರಿಗೆ ನಮಾಜ್ ಮಾಡಲು ಕೆಲ ದಿನಗಳ ಮಟ್ಟಿಗೆ ಅವಕಾಶ ನೀಡಬಹುದು’ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.</p>.<p>ಕೋವಿಡ್ ನಿಯಂತ್ರಣಕ್ಕೆ ತರುವ ಸಲುವಾಗಿ ಹೇರಲಾಗಿದ್ದ ಲಾಕ್ಡೌನ್ ಅನ್ನು ಹಂತ ಹಂತವಾಗಿ ತೆರವುಗೊಳಿಸುತ್ತಿರುವ ಸರ್ಕಾರ, ಜೂನ್ 8ರಿಂದ ಮಸೀದಿಗಳನ್ನು ತೆರೆಯಲು ಅವಕಾಶ ನೀಡಿತ್ತು.</p>.<p>‘ದೆಹಲಿಯಲ್ಲಿ ಕೊರೊನಾ ವೈರಸ್ ಹರಡುವಿಕೆಯು ಉತ್ತುಂಗಕ್ಕೇರಿರುವ ಈ ಸಮಯದಲ್ಲಿ ಮಸೀದಿಗಳಿಗೆ ಭೇಟಿ ನೀಡುವುದರ ಅರ್ಥವೇನು? ಮನೆಯಲ್ಲಿಯೇ ಪ್ರಾರ್ಥನೆ ಮಾಡಬಹುದಲ್ಲವೇ? ಲಾಕ್ಡೌನ್ ಕಾರಣ ರಂಜಾನ್ ಮತ್ತು ಈದ್ ಸಮಯದಲ್ಲಿ ನಾವು ಹಾಗೆ ಮಾಡಿದ್ದೇವಲ್ಲವೇ’ ಎಂದು ಬುಖಾರಿ ಪ್ರಶ್ನಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>