‘ಈ ಹಿಂದಿನ ಸರ್ವಾಧಿಕಾರಿ ಸರ್ಕಾರ ಸಂವಿಧಾನದ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡಿತ್ತು. ತೆಲಂಗಾಣದ ಜನರು 10 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದರು ’ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೇಳಿದ್ದರು.
‘ತೆಲಂಗಾಣದಲ್ಲಿ ಕಳೆದ 10 ವರ್ಷದಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರ ಇತ್ತು. ರಾಜ್ಯಪಾಲರ ಭಾಷಣವು ಖಂಡನೆಗೆ ಅರ್ಹ. ರಾಜಭವನದಿಂದ ಇಂದು ಬೆಳಿಗ್ಗೆ ಬಂದ ಭಾಷಣಗಳು, ಪದಗಳು ಅಸಂಬದ್ಧವಾಗಿತ್ತು. ರಾಜ್ಯಪಾಲರು ಬಳಸಿದ ಪದವು ತೆಲಂಗಾಣದ ಜನರಿಗೆ ಮಾಡಿದ ಅವಮಾನವಾಗಿದೆ’ ಎಂದು ಕೆ.ಟಿ. ರಾಮರಾವ್ ಹೇಳಿದ್ದಾರೆ.