<p><strong>ನವದೆಹಲಿ:</strong> 1999ರ ಕಾರ್ಗಿಲ್ ಯುದ್ಧದ ಗೆಲುವಿನ 26ನೇ ವರ್ಷದ ಸಂಭ್ರಮಾಚರಣೆಗೆ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಲಡಾಖ್ನ ದ್ರಾಸ್ನಲ್ಲಿ ಶನಿವಾರ 1 ಸಾವಿರ ಯುವ ಸ್ವಯಂ ಸೇವಕರು, ಮಾಜಿ ಸೈನಿಕರು, ಸಶಸ್ತ್ರ ಪಡೆಗಳ ಸಿಬ್ಬಂದಿ, ಮಡಿದ ಸೈನಿಕರ ಕುಟುಂಬಗಳು ಮತ್ತು ನಾಗರಿಕ ಸಮಾಜದ ಸದಸ್ಯರೊಂದಿಗೆ ಪಾದಯಾತ್ರೆ ಮಾಡಲಿದ್ದಾರೆ.</p>.ಕಾರ್ಗಿಲ್ ವಿಜಯ ದಿವಸ: ಹುತಾತ್ಮ ಯೋಧರಿಗೆ 'ಇ-ಶ್ರದ್ಧಾಂಜಲಿ' ಸಲ್ಲಿಸಲು ಪೋರ್ಟಲ್.<p>‘ಮೇರಾ ಯುವ ಭಾರತ್’ ಸಂಘಟಿಸಿರುವ ‘ಕಾರ್ಗಿಲ್ ವಿಜಯ ದಿವಸ ಪಾದಯಾತ್ರೆ’ಯಲ್ಲಿ ರಕ್ಷಣಾ ಇಲಾಖೆಯ ರಾಜ್ಯ ಸಚಿವ ಸಂಜಯ್ ಸೇಥ್ ಕೂಡ ಭಾಗಿಯಾಗಲಿದ್ದಾರೆ.</p><p>1.5 ಕಿ.ಮೀ ಪಾದಯಾತ್ರೆ ನಡೆಯಲಿದ್ದು, ದ್ರಾಸ್ನ ಹಿಮಬಸ್ಸ್ ಪಬ್ಲಿಕ್ ಹೈಸ್ಕೂಟ್ ಮೈದಾನದಿಂದ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿ, ಭೀಮ್ಬೆಟ್ನ ಸರ್ಕಾರಿ ಹೈಯರ್ ಸೆಕೆಂಡರ್ ಶಾಲೆಯಲ್ಲಿ ಅಂತ್ಯವಾಗಲಿದೆ ಎಂದು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ.</p>.ಕಾರ್ಗಿಲ್ ವಿಜಯ ದಿವಸ: ‘ಹುತಾತ್ಮರಿಗೆ ಘರ್ ಸಮ್ಮಾನ ಶ್ಲಾಘನೀಯ’.<p>ಆ ಬಳಿಕ ಉಭಯ ಸಚಿವರು 100 ಯುವ ಸ್ವಯಂ ಸೇವಕರೊಂದಿಗೆ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ತೆರಳಿ, ಹೂಗುಚ್ಛ ಅರ್ಪಿಸುವ ಮೂಲಕ ಯುದ್ಧದಲ್ಲಿ ಮಡಿದ ಸೈನಿಕರಿಗೆ ಗೌರವ ಸಲ್ಲಿಸಲಿದ್ದಾರೆ.</p><p>ಪ್ರಾಣ ಕಳೆದುಕೊಂಡ ಸೈನಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಬೈಕ್ ಯಾತ್ರೆ ಮೂಲಕ ಯುದ್ಧ ಸ್ಮಾರಕಕ್ಕೆ ಆಗಮಿಸಲಿರುವ ಶಕ್ತಿ ಉದ್ಘೋಷ್ ಫೌಂಡೇಶನ್ನ 26 ಮಹಿಳಾ ಬೈಕರ್ಗಳನ್ನು ಮಾಂಡವೀಯಾ ಅವರು ಸನ್ಮಾನಿಸಲಿದ್ದಾರೆ.</p> .ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾತ್ರವನ್ನು ಕೊನೆಗೂ ಒಪ್ಪಿಕೊಂಡ ಪಾಕ್ ಸೇನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> 1999ರ ಕಾರ್ಗಿಲ್ ಯುದ್ಧದ ಗೆಲುವಿನ 26ನೇ ವರ್ಷದ ಸಂಭ್ರಮಾಚರಣೆಗೆ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಲಡಾಖ್ನ ದ್ರಾಸ್ನಲ್ಲಿ ಶನಿವಾರ 1 ಸಾವಿರ ಯುವ ಸ್ವಯಂ ಸೇವಕರು, ಮಾಜಿ ಸೈನಿಕರು, ಸಶಸ್ತ್ರ ಪಡೆಗಳ ಸಿಬ್ಬಂದಿ, ಮಡಿದ ಸೈನಿಕರ ಕುಟುಂಬಗಳು ಮತ್ತು ನಾಗರಿಕ ಸಮಾಜದ ಸದಸ್ಯರೊಂದಿಗೆ ಪಾದಯಾತ್ರೆ ಮಾಡಲಿದ್ದಾರೆ.</p>.ಕಾರ್ಗಿಲ್ ವಿಜಯ ದಿವಸ: ಹುತಾತ್ಮ ಯೋಧರಿಗೆ 'ಇ-ಶ್ರದ್ಧಾಂಜಲಿ' ಸಲ್ಲಿಸಲು ಪೋರ್ಟಲ್.<p>‘ಮೇರಾ ಯುವ ಭಾರತ್’ ಸಂಘಟಿಸಿರುವ ‘ಕಾರ್ಗಿಲ್ ವಿಜಯ ದಿವಸ ಪಾದಯಾತ್ರೆ’ಯಲ್ಲಿ ರಕ್ಷಣಾ ಇಲಾಖೆಯ ರಾಜ್ಯ ಸಚಿವ ಸಂಜಯ್ ಸೇಥ್ ಕೂಡ ಭಾಗಿಯಾಗಲಿದ್ದಾರೆ.</p><p>1.5 ಕಿ.ಮೀ ಪಾದಯಾತ್ರೆ ನಡೆಯಲಿದ್ದು, ದ್ರಾಸ್ನ ಹಿಮಬಸ್ಸ್ ಪಬ್ಲಿಕ್ ಹೈಸ್ಕೂಟ್ ಮೈದಾನದಿಂದ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿ, ಭೀಮ್ಬೆಟ್ನ ಸರ್ಕಾರಿ ಹೈಯರ್ ಸೆಕೆಂಡರ್ ಶಾಲೆಯಲ್ಲಿ ಅಂತ್ಯವಾಗಲಿದೆ ಎಂದು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ.</p>.ಕಾರ್ಗಿಲ್ ವಿಜಯ ದಿವಸ: ‘ಹುತಾತ್ಮರಿಗೆ ಘರ್ ಸಮ್ಮಾನ ಶ್ಲಾಘನೀಯ’.<p>ಆ ಬಳಿಕ ಉಭಯ ಸಚಿವರು 100 ಯುವ ಸ್ವಯಂ ಸೇವಕರೊಂದಿಗೆ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ತೆರಳಿ, ಹೂಗುಚ್ಛ ಅರ್ಪಿಸುವ ಮೂಲಕ ಯುದ್ಧದಲ್ಲಿ ಮಡಿದ ಸೈನಿಕರಿಗೆ ಗೌರವ ಸಲ್ಲಿಸಲಿದ್ದಾರೆ.</p><p>ಪ್ರಾಣ ಕಳೆದುಕೊಂಡ ಸೈನಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಬೈಕ್ ಯಾತ್ರೆ ಮೂಲಕ ಯುದ್ಧ ಸ್ಮಾರಕಕ್ಕೆ ಆಗಮಿಸಲಿರುವ ಶಕ್ತಿ ಉದ್ಘೋಷ್ ಫೌಂಡೇಶನ್ನ 26 ಮಹಿಳಾ ಬೈಕರ್ಗಳನ್ನು ಮಾಂಡವೀಯಾ ಅವರು ಸನ್ಮಾನಿಸಲಿದ್ದಾರೆ.</p> .ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾತ್ರವನ್ನು ಕೊನೆಗೂ ಒಪ್ಪಿಕೊಂಡ ಪಾಕ್ ಸೇನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>