<p><strong>ನವದೆಹಲಿ:</strong> ಅಮೆರಿಕದಿಂದ ಆಮದು ಮಾಡಲಾಗುವ ವಸ್ತುಗಳ ಮೇಲೆ ಭಾರತ ಹೆಚ್ಚಿನ ಸುಂಕವನ್ನು ವಿಧಿಸಬೇಕೆಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ (ಎಎಪಿ) ಸಂಚಾಲಕ ಅರವಿಂದ ಕೇಜ್ರಿವಾಲ್ ಒತ್ತಾಯಿಸಿದ್ದಾರೆ. </p><p>ಒಂದು ವೇಳೆ ಈ ನಿರ್ಧಾರ ತೆಗೆದುಕೊಂಡಲ್ಲಿ ಇಡೀ ದೇಶವೇ ಬೆಂಬಲಿಸಲಿದೆ ಎಂದೂ ಕೇಜ್ರಿವಾಲ್ ಪ್ರತಿಪಾದಿಸಿದ್ದಾರೆ. </p><p>ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, 'ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಹತ್ತಿಯ ಮೇಲಿನ ಶೇ 11ರಷ್ಟು ಸುಂಕವನ್ನು ಮನ್ನಾಮಾಡಲು ನಿರ್ಧರಿಸಿದೆ. ಇದು ನಮ್ಮ ಸ್ಥಳೀಯ ರೈತರ ಮೇಲೆ ಪರಿಣಾಮ ಬೀರಲಿದೆ' ಎಂದು ಹೇಳಿದ್ದಾರೆ. </p><p>'ಅಮೆರಿಕದ ಒತ್ತಡದ ತಂತ್ರಕ್ಕೆ ಇತರೆ ದೇಶಗಳು ತಲೆ ಬಾಗಲಿಲ್ಲ. ಅಮೆರಿಕದ ಮೇಲೆ ಪ್ರತಿ ಸುಂಕ ವಿಧಿಸಿತ್ತು. ನಾವು ಸಹ ಹೆಚ್ಚುವರಿ ಸುಂಕಗಳನ್ನು ವಿಧಿಸಬೇಕು. ಅಮೆರಿಕ ಶೇ 50ರಷ್ಟು ಸುಂಕ ವಿಧಿಸಿದ್ದರೆ ನಾವು ಅದನ್ನು ಶೇ 100ಕ್ಕೆ ದ್ವಿಗುಣಗೊಳಿಸಬೇಕು. ಈ ನಿರ್ಧಾರವನ್ನು ಇಡೀ ದೇಶವೇ ಬೆಂಬಲಿಸಲಿದೆ. ಭಾರತದೊಂದಿಗೆ ಅನ್ಯಾಯ ಮಾಡಲು ಯಾವ ದೇಶಕ್ಕೂ ಸಾಧ್ಯವಿಲ್ಲ. ನಮ್ಮದ್ದು 140 ಕೋಟಿ ಜನರ ದೇಶವಾಗಿದೆ' ಎಂದಿದ್ದಾರೆ. </p><p>'ಅಮೆರಿಕದಿಂದ ಆಮದು ಮಾಡಿಕೊಳ್ಳುವ ಹತ್ತಿಯ ಮೇಲೆ ಭಾರತವು ಶೇ 11ರಷ್ಟು ಸುಂಕ ವಿಧಿಸುತ್ತಿತ್ತು. ಅಂದರೆ ಅಮೆರಿಕದ ಹತ್ತಿಯು ಸ್ವದೇಶಕ್ಕಿಂತ ದುಬಾರಿಯಾಗುತ್ತಿತ್ತು. ಆದರೆ ಪ್ರಧಾನಿ ಮೋದಿ ಸರ್ಕಾರವು ಆಗಸ್ಟ್ 19ರಿಂದ 30ರವರೆಗೆ ಈ ಸುಂಕವನ್ನು ಮನ್ನಾ ಮಾಡಲು ನಿರ್ಧರಿಸಿದೆ. ಇದರಿಂದ ಜವಳಿ ಕೈಗಾರಿಕೆಗಳಿಗೆ ಅಗ್ಗದಲ್ಲಿ ಹತ್ತಿ ಲಭ್ಯವಾಗಲಿದೆ. ಅಲ್ಲದೆ ನಮ್ಮ ಹತ್ತಿ ಮಾರುಕಟ್ಟೆಯ ಬೇಡಿಕೆ ಕುಸಿತವಾಗಲಿದೆ' ಎಂದು ಹೇಳಿದ್ದಾರೆ. </p><p>'ತೆಲಂಗಾಣ, ಪಂಜಾಬ್, ವಿದರ್ಭ ಮತ್ತು ಗುಜರಾತ್ ರಾಜ್ಯಗಳ ರೈತರಿಗೆ ಇದರಿಂದ ತೊಂದರೆ ಉಂಟಾಗಲಿದೆ' ಎಂದು ಕೇಜ್ರಿವಾಲ್ ಉಲ್ಲೇಖಿಸಿದ್ದಾರೆ. </p> .ಸುಂಕ ರಹಿತ ಹತ್ತಿ ಆಮದು: ಡಿಸೆಂಬರ್ವರೆಗೆ ವಿಸ್ತರಿಸಿದ ಕೇಂದ್ರ.ಸುಂಕ ಹೇರಿಕೆ: ಅಮೆರಿಕಕ್ಕೆ ಅಂಚೆ ಸೇವೆ ಅಮಾನತುಗೊಳಿಸಿದ ಭಾರತ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಅಮೆರಿಕದಿಂದ ಆಮದು ಮಾಡಲಾಗುವ ವಸ್ತುಗಳ ಮೇಲೆ ಭಾರತ ಹೆಚ್ಚಿನ ಸುಂಕವನ್ನು ವಿಧಿಸಬೇಕೆಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ (ಎಎಪಿ) ಸಂಚಾಲಕ ಅರವಿಂದ ಕೇಜ್ರಿವಾಲ್ ಒತ್ತಾಯಿಸಿದ್ದಾರೆ. </p><p>ಒಂದು ವೇಳೆ ಈ ನಿರ್ಧಾರ ತೆಗೆದುಕೊಂಡಲ್ಲಿ ಇಡೀ ದೇಶವೇ ಬೆಂಬಲಿಸಲಿದೆ ಎಂದೂ ಕೇಜ್ರಿವಾಲ್ ಪ್ರತಿಪಾದಿಸಿದ್ದಾರೆ. </p><p>ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, 'ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಹತ್ತಿಯ ಮೇಲಿನ ಶೇ 11ರಷ್ಟು ಸುಂಕವನ್ನು ಮನ್ನಾಮಾಡಲು ನಿರ್ಧರಿಸಿದೆ. ಇದು ನಮ್ಮ ಸ್ಥಳೀಯ ರೈತರ ಮೇಲೆ ಪರಿಣಾಮ ಬೀರಲಿದೆ' ಎಂದು ಹೇಳಿದ್ದಾರೆ. </p><p>'ಅಮೆರಿಕದ ಒತ್ತಡದ ತಂತ್ರಕ್ಕೆ ಇತರೆ ದೇಶಗಳು ತಲೆ ಬಾಗಲಿಲ್ಲ. ಅಮೆರಿಕದ ಮೇಲೆ ಪ್ರತಿ ಸುಂಕ ವಿಧಿಸಿತ್ತು. ನಾವು ಸಹ ಹೆಚ್ಚುವರಿ ಸುಂಕಗಳನ್ನು ವಿಧಿಸಬೇಕು. ಅಮೆರಿಕ ಶೇ 50ರಷ್ಟು ಸುಂಕ ವಿಧಿಸಿದ್ದರೆ ನಾವು ಅದನ್ನು ಶೇ 100ಕ್ಕೆ ದ್ವಿಗುಣಗೊಳಿಸಬೇಕು. ಈ ನಿರ್ಧಾರವನ್ನು ಇಡೀ ದೇಶವೇ ಬೆಂಬಲಿಸಲಿದೆ. ಭಾರತದೊಂದಿಗೆ ಅನ್ಯಾಯ ಮಾಡಲು ಯಾವ ದೇಶಕ್ಕೂ ಸಾಧ್ಯವಿಲ್ಲ. ನಮ್ಮದ್ದು 140 ಕೋಟಿ ಜನರ ದೇಶವಾಗಿದೆ' ಎಂದಿದ್ದಾರೆ. </p><p>'ಅಮೆರಿಕದಿಂದ ಆಮದು ಮಾಡಿಕೊಳ್ಳುವ ಹತ್ತಿಯ ಮೇಲೆ ಭಾರತವು ಶೇ 11ರಷ್ಟು ಸುಂಕ ವಿಧಿಸುತ್ತಿತ್ತು. ಅಂದರೆ ಅಮೆರಿಕದ ಹತ್ತಿಯು ಸ್ವದೇಶಕ್ಕಿಂತ ದುಬಾರಿಯಾಗುತ್ತಿತ್ತು. ಆದರೆ ಪ್ರಧಾನಿ ಮೋದಿ ಸರ್ಕಾರವು ಆಗಸ್ಟ್ 19ರಿಂದ 30ರವರೆಗೆ ಈ ಸುಂಕವನ್ನು ಮನ್ನಾ ಮಾಡಲು ನಿರ್ಧರಿಸಿದೆ. ಇದರಿಂದ ಜವಳಿ ಕೈಗಾರಿಕೆಗಳಿಗೆ ಅಗ್ಗದಲ್ಲಿ ಹತ್ತಿ ಲಭ್ಯವಾಗಲಿದೆ. ಅಲ್ಲದೆ ನಮ್ಮ ಹತ್ತಿ ಮಾರುಕಟ್ಟೆಯ ಬೇಡಿಕೆ ಕುಸಿತವಾಗಲಿದೆ' ಎಂದು ಹೇಳಿದ್ದಾರೆ. </p><p>'ತೆಲಂಗಾಣ, ಪಂಜಾಬ್, ವಿದರ್ಭ ಮತ್ತು ಗುಜರಾತ್ ರಾಜ್ಯಗಳ ರೈತರಿಗೆ ಇದರಿಂದ ತೊಂದರೆ ಉಂಟಾಗಲಿದೆ' ಎಂದು ಕೇಜ್ರಿವಾಲ್ ಉಲ್ಲೇಖಿಸಿದ್ದಾರೆ. </p> .ಸುಂಕ ರಹಿತ ಹತ್ತಿ ಆಮದು: ಡಿಸೆಂಬರ್ವರೆಗೆ ವಿಸ್ತರಿಸಿದ ಕೇಂದ್ರ.ಸುಂಕ ಹೇರಿಕೆ: ಅಮೆರಿಕಕ್ಕೆ ಅಂಚೆ ಸೇವೆ ಅಮಾನತುಗೊಳಿಸಿದ ಭಾರತ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>