ಇಡುಕ್ಕಿ(ಪಿಟಿಐ): ಇಲ್ಲಿನ ತೊಡುಪುಳದಲ್ಲಿ ನಿರ್ಮಿಸಿರುವ ಸಂಬಾರ ಪದಾರ್ಥಗಳ ಪಾರ್ಕ್ ಅನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ ಉದ್ಘಾಟಿಸಿದರು.
ಸಂಬಾರ ಪದಾರ್ಥಗಳ ಸಂಸ್ಕರಣೆಗೆ ಮತ್ತು ಅವುಗಳ ಉತ್ಪನ್ನಗಳ ಮೌಲ್ಯವರ್ಧನೆಗೆ ಉತ್ತೇಜನ ನೀಡಲಾಗುವುದು ಎಂದು ಅವರು ಹೇಳಿದರು.
ತೊಡುಪುಳದ ಮುಟ್ಟಂ ಗ್ರಾಮದಲ್ಲಿರುವ 15.29 ಎಕರೆ ವ್ಯಾಪ್ತಿಯ ಸಂಬಾರ ಪದಾರ್ಥಗಳ ಪಾರ್ಕ್ನ ಮೊದಲ ಹಂತದ ಕಾಮಗಾರಿಗಳನ್ನು ಕೇರಳ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮವು ಪೂರ್ಣಗೊಳಿಸಿದೆ ಎಂದು ಪಿಣರಾಯಿ ವಿಜಯನ್ ಅವರು ಫೇಸ್ಬುಕ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಎರಡನೇ ಹಂತದ ಕಾಮಗಾರಿಯು ಆರಂಭಗೊಂಡಿದೆ ಎಂದೂ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.