<p><strong>ತಿರುವನಂತಪುರ(ಕೇರಳ):</strong> ಕೊಚ್ಚಿಯ ಮಲಯತ್ತೂರು ಅರಣ್ಯ ವಿಭಾಗದ ನದಿಯಲ್ಲಿ ಆನೆಗಳ ಕಳೇಬರ ಪದೇ ಪದೇ ಪತ್ತೆಯಾಗುತ್ತಿದ್ದು, ಕಾರಣ ನಿಗೂಢವಾಗಿದೆ. ಕಳೆದ 2 ತಿಂಗಳುಗಳಲ್ಲಿ ಪೂಯಂಕುಟ್ಟಿ ನದಿಯಲ್ಲಿ 9 ಕಾಡಾನೆಗಳ ಕಳೇಬರ ಪತ್ತೆಯಾಗಿವೆ ಎಂದು ವರದಿಯಾಗಿದೆ.</p>.<p>ಪ್ರಕರಣದ ತನಿಖೆಗಾಗಿ 11 ಸದಸ್ಯರ ಸಮಿತಿಯನ್ನು ರಚಿಸಿ ವನ್ಯಜೀವಿ ಮುಖ್ಯ ವಾರ್ಡನ್ (CWW) ಪ್ರಮೋದ್ ಜಿ. ಕೃಷ್ಣನ್ ಆದೇಶಿಸಿದ್ದಾರೆ. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಕೆ. ವಿನೋದ್ ಕುಮಾರ್ ಸಮಿತಿಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.</p>.<p>ಅರಣ್ಯ ಪ್ರದೇಶಗಳಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಆನೆಗಳ ಹಿಂಡು ಕೊಚ್ಚಿ ಹೋಗಿರಬಹುದು ಎಂಬುದು ಅರಣ್ಯ ಇಲಾಖೆಯ ಪ್ರಾಥಮಿಕ ಅಂದಾಜು. ಆದರೆ ಈ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ಮತ್ತು ಅತಿಕ್ರಮಣಗಳು ವ್ಯಾಪಕವಾಗಿ ನಡೆಯುತ್ತಿದ್ದು, ಈ ನಡುವೆ ಆನೆಗಳ ಸಾವು ಅನುಮಾನ ಮೂಡಿಸುವಂತಿದೆ ಎಂಬುವುದು ವನ್ಯಜೀವಿ ಕಾರ್ಯಕರ್ತರ ಆರೋಪ.</p>.<p>ಅರಣ್ಯದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆಯೇ ಅಥವಾ ಅರಣ್ಯ ಅಧಿಕಾರಿಗಳ ಕಡೆಯಿಂದ ಲೋಪಗಳಾಗಿವೆಯೇ ಎಂಬುವುದನ್ನು ಪರಿಶೀಲಿಸಲು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಕೆ ವಿನೋದ್ ಕುಮಾರ್ ನೇತೃತ್ವದ ತಂಡಕ್ಕೆ ನಿರ್ದೇಶಿಸಲಾಗಿದೆ.</p>.<p>ಹಠಾತ್ ಪ್ರವಾಹದಲ್ಲಿ ಆನೆಗಳ ಹಿಂಡು ಕೊಚ್ಚಿ ಹೋಗಿವೆ ಎಂಬುದು ಪ್ರಾಥಮಿಕ ಅಂದಾಜಾದರೂ, ತನಿಖೆಯ ವೇಳೆ ಎಲ್ಲಾ ಅಂಶಗಳನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಪ್ರಮೋದ್ ತಿಳಿಸಿದ್ದಾರೆ.</p>.<p>ವನ್ಯಜೀವಿ ಕಾರ್ಯಕರ್ತ ಎಂ.ಎನ್. ಜಯಚಂದ್ರನ್ ಮಾತನಾಡಿ, ಪ್ರವಾಹದಲ್ಲಿ ಕಾಡು ಆನೆಗಳು ಕೊಚ್ಚಿ ಹೋಗಿವೆ ಎಂದು ನಂಬುವುದು ಕಷ್ಟ. ಕಾಡಾನೆಗಳ ಸಾವು ನಿಗೂಢವಾಗಿದ್ದು, ಸತ್ಯ ಹೊರಬರಲು ನ್ಯಾಯಯುತ ತನಿಖೆ ಅತ್ಯಗತ್ಯ ಎಂದು ಹೇಳಿದ್ದಾರೆ.</p>.ಅಸ್ಸಾಂ: ಮನಸ್ ರಾಷ್ಟ್ರೀಯ ಉದ್ಯಾನದಲ್ಲಿ ಮೂರು ಆನೆಗಳ ಕಳೇಬರ ಪತ್ತೆ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ(ಕೇರಳ):</strong> ಕೊಚ್ಚಿಯ ಮಲಯತ್ತೂರು ಅರಣ್ಯ ವಿಭಾಗದ ನದಿಯಲ್ಲಿ ಆನೆಗಳ ಕಳೇಬರ ಪದೇ ಪದೇ ಪತ್ತೆಯಾಗುತ್ತಿದ್ದು, ಕಾರಣ ನಿಗೂಢವಾಗಿದೆ. ಕಳೆದ 2 ತಿಂಗಳುಗಳಲ್ಲಿ ಪೂಯಂಕುಟ್ಟಿ ನದಿಯಲ್ಲಿ 9 ಕಾಡಾನೆಗಳ ಕಳೇಬರ ಪತ್ತೆಯಾಗಿವೆ ಎಂದು ವರದಿಯಾಗಿದೆ.</p>.<p>ಪ್ರಕರಣದ ತನಿಖೆಗಾಗಿ 11 ಸದಸ್ಯರ ಸಮಿತಿಯನ್ನು ರಚಿಸಿ ವನ್ಯಜೀವಿ ಮುಖ್ಯ ವಾರ್ಡನ್ (CWW) ಪ್ರಮೋದ್ ಜಿ. ಕೃಷ್ಣನ್ ಆದೇಶಿಸಿದ್ದಾರೆ. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಕೆ. ವಿನೋದ್ ಕುಮಾರ್ ಸಮಿತಿಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.</p>.<p>ಅರಣ್ಯ ಪ್ರದೇಶಗಳಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಆನೆಗಳ ಹಿಂಡು ಕೊಚ್ಚಿ ಹೋಗಿರಬಹುದು ಎಂಬುದು ಅರಣ್ಯ ಇಲಾಖೆಯ ಪ್ರಾಥಮಿಕ ಅಂದಾಜು. ಆದರೆ ಈ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ಮತ್ತು ಅತಿಕ್ರಮಣಗಳು ವ್ಯಾಪಕವಾಗಿ ನಡೆಯುತ್ತಿದ್ದು, ಈ ನಡುವೆ ಆನೆಗಳ ಸಾವು ಅನುಮಾನ ಮೂಡಿಸುವಂತಿದೆ ಎಂಬುವುದು ವನ್ಯಜೀವಿ ಕಾರ್ಯಕರ್ತರ ಆರೋಪ.</p>.<p>ಅರಣ್ಯದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆಯೇ ಅಥವಾ ಅರಣ್ಯ ಅಧಿಕಾರಿಗಳ ಕಡೆಯಿಂದ ಲೋಪಗಳಾಗಿವೆಯೇ ಎಂಬುವುದನ್ನು ಪರಿಶೀಲಿಸಲು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಕೆ ವಿನೋದ್ ಕುಮಾರ್ ನೇತೃತ್ವದ ತಂಡಕ್ಕೆ ನಿರ್ದೇಶಿಸಲಾಗಿದೆ.</p>.<p>ಹಠಾತ್ ಪ್ರವಾಹದಲ್ಲಿ ಆನೆಗಳ ಹಿಂಡು ಕೊಚ್ಚಿ ಹೋಗಿವೆ ಎಂಬುದು ಪ್ರಾಥಮಿಕ ಅಂದಾಜಾದರೂ, ತನಿಖೆಯ ವೇಳೆ ಎಲ್ಲಾ ಅಂಶಗಳನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಪ್ರಮೋದ್ ತಿಳಿಸಿದ್ದಾರೆ.</p>.<p>ವನ್ಯಜೀವಿ ಕಾರ್ಯಕರ್ತ ಎಂ.ಎನ್. ಜಯಚಂದ್ರನ್ ಮಾತನಾಡಿ, ಪ್ರವಾಹದಲ್ಲಿ ಕಾಡು ಆನೆಗಳು ಕೊಚ್ಚಿ ಹೋಗಿವೆ ಎಂದು ನಂಬುವುದು ಕಷ್ಟ. ಕಾಡಾನೆಗಳ ಸಾವು ನಿಗೂಢವಾಗಿದ್ದು, ಸತ್ಯ ಹೊರಬರಲು ನ್ಯಾಯಯುತ ತನಿಖೆ ಅತ್ಯಗತ್ಯ ಎಂದು ಹೇಳಿದ್ದಾರೆ.</p>.ಅಸ್ಸಾಂ: ಮನಸ್ ರಾಷ್ಟ್ರೀಯ ಉದ್ಯಾನದಲ್ಲಿ ಮೂರು ಆನೆಗಳ ಕಳೇಬರ ಪತ್ತೆ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>