<p><strong>ತಿರುವನಂತಪುರ:</strong> ಸಾರ್ವಜನಿಕರ ದೂರು ಅಥವಾ ಅರ್ಜಿಗಳಿಗೆ ಉತ್ತರಿಸುವಾಗ ಮುಖ್ಯಮಂತ್ರಿ, ಸಚಿವರ ಹೆಸರಿನ ಮುಂದೆ ‘ಗೌರವಾನ್ವಿತ’ ಎನ್ನುವ ಪದ ಬಳಸಬೇಕು ಎಂದು ಕೇರಳ ಸರ್ಕಾರದ ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆ ಹೊರಡಿಸಿದೆ.</p>.ಕೇರಳ | ಮೆದುಳು ತಿನ್ನುವ ಅಮೀಬಾ ಸೋಂಕಿಗೆ ವ್ಯಕ್ತಿ ಸಾವು .<p>ಈ ಬಗ್ಗೆ ಆಗಸ್ಟ್ 30ರಂದು ಸುತ್ತೋಲೆ ಹೊರಡಿಸಲಾಗಿದ್ದು, ದೂರುಗಳಿಗೆ ನೀಡುವ ಉತ್ತರದಲ್ಲಿ ಮುಖ್ಯಮಂತ್ರಿ ಅಥವಾ ಸಚಿವರ ಹೆಸರಿನ ಮುಂದೆ ‘ಬಹುಮಾನಪೆಟ್ಟ’ (ಗೌರವಾನ್ವಿತ) ಎಂದು ಬಳಸಬೇಕು ಎಂದು ಇಲಾಖೆಯ ಕಾರ್ಯದರ್ಶಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಹಾಗೂ ಕಚೇರಿಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ.</p><p>ಉತ್ತರಗಳನ್ನು ಬರೆಯುವಾಗ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕ್ರಮ ಎದುರಿಸಬೇಕಾದೀತು ಎಂದೂ ಎಚ್ಚರಿಕೆ ನೀಡಲಾಗಿದೆ.</p>.ಕೇರಳ | ಪತ್ನಿಯ ಸಹಜೀವನ ಸಂಗಾತಿಯಿಂದ ಚಾಕು ಇರಿತ: ಕೊನೆಯುಸಿರೆಳೆದ ಪತಿ.<p>ಅಧಿಕೃತ ಸಂವಹನದಲ್ಲಿ ಗೌರವದಿಂದ ಸಂಬೋಧಿಸುವ ಸಂಪ್ರದಾಯ ಕಡಿಮೆಯಾಗುತ್ತಿದೆ ಎನ್ನುವ ಅಭಿಪ್ರಾಯಗಳು ದೇಶದಾದ್ಯಂತ ಕೇಳಿ ಬರುತ್ತಿರುವಾಗಲೇ, ಕೇರಳ ಸರ್ಕಾರದಿಂದ ಈ ನಡೆ ಬಂದಿದೆ.</p><p>ಆಡಳಿತ ಸುಧಾರಣಾ ಇಲಾಖೆಯು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ, ಈ ಸುತ್ತೋಲೆಯು ಅವರ ಸೂಚನೆಗಳನ್ನು ಪ್ರತಿಬಿಂಬಿಸುತ್ತದೆ ಎನ್ನಲಾಗಿದೆ. ಆದರೆ ಸರ್ಕಾರ ಈ ನಿರ್ಧಾರದ ಹಿಂದಿನ ಕಾರಣ ತಿಳಿಸಿಲ್ಲ.</p><p>ಸರ್ಕಾರದ ಈ ಸುತ್ತೋಲೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.</p> .ಕೇರಳ | ದೇವಸ್ಥಾನದ ಆನೆ ದಾಳಿ: ಒಬ್ಬ ಮಾವುತ ಸಾವು, ಮತ್ತೊಬ್ಬ ಗಂಭೀರ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ಸಾರ್ವಜನಿಕರ ದೂರು ಅಥವಾ ಅರ್ಜಿಗಳಿಗೆ ಉತ್ತರಿಸುವಾಗ ಮುಖ್ಯಮಂತ್ರಿ, ಸಚಿವರ ಹೆಸರಿನ ಮುಂದೆ ‘ಗೌರವಾನ್ವಿತ’ ಎನ್ನುವ ಪದ ಬಳಸಬೇಕು ಎಂದು ಕೇರಳ ಸರ್ಕಾರದ ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆ ಹೊರಡಿಸಿದೆ.</p>.ಕೇರಳ | ಮೆದುಳು ತಿನ್ನುವ ಅಮೀಬಾ ಸೋಂಕಿಗೆ ವ್ಯಕ್ತಿ ಸಾವು .<p>ಈ ಬಗ್ಗೆ ಆಗಸ್ಟ್ 30ರಂದು ಸುತ್ತೋಲೆ ಹೊರಡಿಸಲಾಗಿದ್ದು, ದೂರುಗಳಿಗೆ ನೀಡುವ ಉತ್ತರದಲ್ಲಿ ಮುಖ್ಯಮಂತ್ರಿ ಅಥವಾ ಸಚಿವರ ಹೆಸರಿನ ಮುಂದೆ ‘ಬಹುಮಾನಪೆಟ್ಟ’ (ಗೌರವಾನ್ವಿತ) ಎಂದು ಬಳಸಬೇಕು ಎಂದು ಇಲಾಖೆಯ ಕಾರ್ಯದರ್ಶಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಹಾಗೂ ಕಚೇರಿಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ.</p><p>ಉತ್ತರಗಳನ್ನು ಬರೆಯುವಾಗ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕ್ರಮ ಎದುರಿಸಬೇಕಾದೀತು ಎಂದೂ ಎಚ್ಚರಿಕೆ ನೀಡಲಾಗಿದೆ.</p>.ಕೇರಳ | ಪತ್ನಿಯ ಸಹಜೀವನ ಸಂಗಾತಿಯಿಂದ ಚಾಕು ಇರಿತ: ಕೊನೆಯುಸಿರೆಳೆದ ಪತಿ.<p>ಅಧಿಕೃತ ಸಂವಹನದಲ್ಲಿ ಗೌರವದಿಂದ ಸಂಬೋಧಿಸುವ ಸಂಪ್ರದಾಯ ಕಡಿಮೆಯಾಗುತ್ತಿದೆ ಎನ್ನುವ ಅಭಿಪ್ರಾಯಗಳು ದೇಶದಾದ್ಯಂತ ಕೇಳಿ ಬರುತ್ತಿರುವಾಗಲೇ, ಕೇರಳ ಸರ್ಕಾರದಿಂದ ಈ ನಡೆ ಬಂದಿದೆ.</p><p>ಆಡಳಿತ ಸುಧಾರಣಾ ಇಲಾಖೆಯು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ, ಈ ಸುತ್ತೋಲೆಯು ಅವರ ಸೂಚನೆಗಳನ್ನು ಪ್ರತಿಬಿಂಬಿಸುತ್ತದೆ ಎನ್ನಲಾಗಿದೆ. ಆದರೆ ಸರ್ಕಾರ ಈ ನಿರ್ಧಾರದ ಹಿಂದಿನ ಕಾರಣ ತಿಳಿಸಿಲ್ಲ.</p><p>ಸರ್ಕಾರದ ಈ ಸುತ್ತೋಲೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.</p> .ಕೇರಳ | ದೇವಸ್ಥಾನದ ಆನೆ ದಾಳಿ: ಒಬ್ಬ ಮಾವುತ ಸಾವು, ಮತ್ತೊಬ್ಬ ಗಂಭೀರ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>