<p><strong>ತಿರುವನಂತಪುರ:</strong> ಶಿರೋವಸ್ತ್ರ (ಸ್ಕಾರ್ಫ್) ಧರಿಸಿದ ಶಿಕ್ಷಕಿಯೇ ಹಿಜಾಬ್ ಧರಿಸಿದ ವಿದ್ಯಾರ್ಥಿನಿಗೆ ಅವಕಾಶ ನೀಡದ್ದು ಅಚ್ಚರಿ ಹಾಗೂ ವ್ಯಂಗ್ಯ ಎಂದು ಕೇರಳ ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿ ಹೇಳಿದ್ದಾರೆ.</p>.ಕೇರಳ ಹಿಜಾಬ್ ವಿವಾದ: ಮಗಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ ಎಂದ ಪೋಷಕರು.<p>ಕೊಚ್ಚಿಯ ಪಳ್ಳುರುತ್ತಿ ಸಂತ ರೀಟಾ ಚರ್ಚ್ ಶಾಲೆಯ ಹಿಜಾಬ್ ವಿವಾದದ ಬಗ್ಗೆ ಅವರು ಪ್ರತಿಕ್ರಿಯಿಸಿದರು.</p><p>ಖಾಸಗಿ ಶಾಲಾ ಆಡಳಿತ ಮಂಡಳಿಗಳೂ ಕೇರಳ ಸರ್ಕಾರ ಶಿಕ್ಷಣ ಇಲಾಯ ನಿಯಮಗಳ ಅನ್ವಯವೇ ಕಾರ್ಯಾಚರಣೆ ಮಾಡಬೇಕು. ಯಾರೂ ನಿಯಮಗಳಿಗಿಂತ ಮಿಗಿಲಲ್ಲ ಎಂದು ಹೇಳಿದ್ದಾರೆ.</p><p>ಹಿಜಾಬ್ ಧರಿಸಿದ ಕಾರಣಕ್ಕೆ ವಿದ್ಯಾರ್ಥಿಗೆ ಶಾಲೆಯಲ್ಲಿ ಅವಕಾಶ ಕೊಡದೇ ಇದ್ದರೆ ಸರ್ಕಾರ ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.</p>.ಕೇರಳ ಶಾಲೆಯ ಹಿಜಾಬ್ ಗದ್ದಲ: 2ದಿನ ತುರ್ತು ರಜೆ; ನಿಯಮ ಪಾಲನೆಗೆ ಪಾಲಕ ಒಪ್ಪಿಗೆ.<p>ನಾವು ತನಿಖೆ ನಡೆಸಿದ್ದು, ಶಾಲೆಯಿಂದಾದ ಲೋಪಗಳನ್ನು ಪತ್ತೆಹಚ್ಚಿ ಅವುಗಳನ್ನು ಸರಿಪಡಿಸುವಂತೆ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.</p><p>ಶಾಲೆ ಆಡಳಿತ ಮಂಡಳಿ ಮೊಂಡುತನ ಹಾಗೂ ವೈಷಮ್ಯ ಬದಿಗಿಟ್ಟು ಶಾಂತಿಯುತ ವಾತಾವರಣ ನಿರ್ಮಾಣ ಮಾಡಿ, ವಿದ್ಯಾರ್ಥಿನಿಗೆ ಶಿಕ್ಷಣ ಮುಂದುವರಿಸಲು ಬೇಕಾದ ಅಗತ್ಯ ಕ್ರಮ ತೆಗೆದುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.</p><p>ಘಟನೆಯನ್ನು ಶಿಕ್ಷಣ ಸಚಿವರೇ ಉಲ್ಬಣಗೊಳಿಸುತ್ತಿದ್ದಾರೆ ಎನ್ನುವ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಿದ ಅವರು, ‘ಸಚಿವರು ಇದಕ್ಕೆ ಮಧ್ಯಪ್ರವೇಶ ಮಾಡಬಾರದು ಎಂದು ಶಾಲೆಯು ಸರ್ಕಾರಕ್ಕೆ ಸವಾಲೆಸೆಯುತ್ತಿರುವಾಗ ನಾವು ಸಮ್ಮನಿರಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.</p> .ಐಫೆಲ್ ಟವರ್ಗೆ ಹಿಜಾಬ್: ಫ್ರಾನ್ಸ್ನಲ್ಲಿ ಮತ್ತೆ ಸದ್ದು ಮಾಡಿದ ಹಿಜಾಬ್ ವಿವಾದ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ಶಿರೋವಸ್ತ್ರ (ಸ್ಕಾರ್ಫ್) ಧರಿಸಿದ ಶಿಕ್ಷಕಿಯೇ ಹಿಜಾಬ್ ಧರಿಸಿದ ವಿದ್ಯಾರ್ಥಿನಿಗೆ ಅವಕಾಶ ನೀಡದ್ದು ಅಚ್ಚರಿ ಹಾಗೂ ವ್ಯಂಗ್ಯ ಎಂದು ಕೇರಳ ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿ ಹೇಳಿದ್ದಾರೆ.</p>.ಕೇರಳ ಹಿಜಾಬ್ ವಿವಾದ: ಮಗಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ ಎಂದ ಪೋಷಕರು.<p>ಕೊಚ್ಚಿಯ ಪಳ್ಳುರುತ್ತಿ ಸಂತ ರೀಟಾ ಚರ್ಚ್ ಶಾಲೆಯ ಹಿಜಾಬ್ ವಿವಾದದ ಬಗ್ಗೆ ಅವರು ಪ್ರತಿಕ್ರಿಯಿಸಿದರು.</p><p>ಖಾಸಗಿ ಶಾಲಾ ಆಡಳಿತ ಮಂಡಳಿಗಳೂ ಕೇರಳ ಸರ್ಕಾರ ಶಿಕ್ಷಣ ಇಲಾಯ ನಿಯಮಗಳ ಅನ್ವಯವೇ ಕಾರ್ಯಾಚರಣೆ ಮಾಡಬೇಕು. ಯಾರೂ ನಿಯಮಗಳಿಗಿಂತ ಮಿಗಿಲಲ್ಲ ಎಂದು ಹೇಳಿದ್ದಾರೆ.</p><p>ಹಿಜಾಬ್ ಧರಿಸಿದ ಕಾರಣಕ್ಕೆ ವಿದ್ಯಾರ್ಥಿಗೆ ಶಾಲೆಯಲ್ಲಿ ಅವಕಾಶ ಕೊಡದೇ ಇದ್ದರೆ ಸರ್ಕಾರ ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.</p>.ಕೇರಳ ಶಾಲೆಯ ಹಿಜಾಬ್ ಗದ್ದಲ: 2ದಿನ ತುರ್ತು ರಜೆ; ನಿಯಮ ಪಾಲನೆಗೆ ಪಾಲಕ ಒಪ್ಪಿಗೆ.<p>ನಾವು ತನಿಖೆ ನಡೆಸಿದ್ದು, ಶಾಲೆಯಿಂದಾದ ಲೋಪಗಳನ್ನು ಪತ್ತೆಹಚ್ಚಿ ಅವುಗಳನ್ನು ಸರಿಪಡಿಸುವಂತೆ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.</p><p>ಶಾಲೆ ಆಡಳಿತ ಮಂಡಳಿ ಮೊಂಡುತನ ಹಾಗೂ ವೈಷಮ್ಯ ಬದಿಗಿಟ್ಟು ಶಾಂತಿಯುತ ವಾತಾವರಣ ನಿರ್ಮಾಣ ಮಾಡಿ, ವಿದ್ಯಾರ್ಥಿನಿಗೆ ಶಿಕ್ಷಣ ಮುಂದುವರಿಸಲು ಬೇಕಾದ ಅಗತ್ಯ ಕ್ರಮ ತೆಗೆದುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.</p><p>ಘಟನೆಯನ್ನು ಶಿಕ್ಷಣ ಸಚಿವರೇ ಉಲ್ಬಣಗೊಳಿಸುತ್ತಿದ್ದಾರೆ ಎನ್ನುವ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಿದ ಅವರು, ‘ಸಚಿವರು ಇದಕ್ಕೆ ಮಧ್ಯಪ್ರವೇಶ ಮಾಡಬಾರದು ಎಂದು ಶಾಲೆಯು ಸರ್ಕಾರಕ್ಕೆ ಸವಾಲೆಸೆಯುತ್ತಿರುವಾಗ ನಾವು ಸಮ್ಮನಿರಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.</p> .ಐಫೆಲ್ ಟವರ್ಗೆ ಹಿಜಾಬ್: ಫ್ರಾನ್ಸ್ನಲ್ಲಿ ಮತ್ತೆ ಸದ್ದು ಮಾಡಿದ ಹಿಜಾಬ್ ವಿವಾದ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>