<p><strong>ತಿರುವನಂತಪುರ:</strong> ಮುಂಜಾನೆ 3 ಗಂಟೆಗೆ ಹುಂಜವೊಂದು (ಕೋಳಿ) ಕೂಗುವ ಮೂಲಕ ನಿದ್ರೆಗೆ ಭಂಗ ಉಂಟು ಮಾಡುತ್ತಿದ್ದು, ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪಳ್ಳಿಕಲ್ ಗ್ರಾಮದ ವಯೋವೃದ್ಧರೊಬ್ಬರು ದೂರು ದಾಖಲಿಸಿದ್ದಾರೆ.</p><p>ಪ್ರತಿದಿನ ಮುಂಜಾನೆ 3 ಗಂಟೆ ಸುಮಾರಿಗೆ ನೆರೆಮನೆಯ ಹುಂಜವೊಂದು ಪಟ್ಟುಬಿಡದೆ ಕೂಗಲು ಪ್ರಾರಂಭಿಸುತ್ತದೆ. ಹುಂಜದ ಗದ್ದಲಕ್ಕೆ ನೆಮ್ಮದಿಯ ನಿದ್ರೆಯೇ ದುಸ್ತರವಾಗಿದ್ದು, ಶಾಂತಿಯುತ ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ಸಂತ್ರಸ್ತ ರಾಧಾಕೃಷ್ಣ ಕುರುಪ್ ಅಳಲು ತೊಡಿಕೊಂಡಿದ್ದಾರೆ. </p><p>ಅನಿಲ್ ಕುಮಾರ್ ಅವರಿಗೆ ಸೇರಿದ ಹುಂಜದ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ರಾಧಾಕೃಷ್ಣ ಅವರು ಅಡೂರು ಕಂದಾಯ ವಿಭಾಗೀಯ ಕಚೇರಿಯಲ್ಲಿ (ಆರ್ಡಿಒ) ದೂರು ದಾಖಲಿಸಿದ್ದಾರೆ.</p><p>ಪ್ರಕರಣ ಸಂಬಂಧ ತನಿಖೆ ನಡೆಸಲಾಯಿತು. ಹುಂಜದಿಂದ ರಾಧಾಕೃಷ್ಣ ಅವರಿಗೆ ನಿಜವಾಗಿಯೂ ತೊಂದರೆಯಾಗುತ್ತಿದೆ ಎಂಬುದು ದೃಢಪಟ್ಟಿದೆ ಎಂದು ಆರ್ಡಿಒ ಅಧಿಕಾರಿಗಳು ತಿಳಿಸಿದ್ದಾರೆ. </p><p>ತಕ್ಷಣವೇ ಕೋಳಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ನಿರ್ದೇಶಿಸಿರುವ ಆರ್ಡಿಒ ಅಧಿಕಾರಿಗಳು, ಇದಕ್ಕೆ 14 ದಿನಗಳ ಗಡುವು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ಮುಂಜಾನೆ 3 ಗಂಟೆಗೆ ಹುಂಜವೊಂದು (ಕೋಳಿ) ಕೂಗುವ ಮೂಲಕ ನಿದ್ರೆಗೆ ಭಂಗ ಉಂಟು ಮಾಡುತ್ತಿದ್ದು, ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪಳ್ಳಿಕಲ್ ಗ್ರಾಮದ ವಯೋವೃದ್ಧರೊಬ್ಬರು ದೂರು ದಾಖಲಿಸಿದ್ದಾರೆ.</p><p>ಪ್ರತಿದಿನ ಮುಂಜಾನೆ 3 ಗಂಟೆ ಸುಮಾರಿಗೆ ನೆರೆಮನೆಯ ಹುಂಜವೊಂದು ಪಟ್ಟುಬಿಡದೆ ಕೂಗಲು ಪ್ರಾರಂಭಿಸುತ್ತದೆ. ಹುಂಜದ ಗದ್ದಲಕ್ಕೆ ನೆಮ್ಮದಿಯ ನಿದ್ರೆಯೇ ದುಸ್ತರವಾಗಿದ್ದು, ಶಾಂತಿಯುತ ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ಸಂತ್ರಸ್ತ ರಾಧಾಕೃಷ್ಣ ಕುರುಪ್ ಅಳಲು ತೊಡಿಕೊಂಡಿದ್ದಾರೆ. </p><p>ಅನಿಲ್ ಕುಮಾರ್ ಅವರಿಗೆ ಸೇರಿದ ಹುಂಜದ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ರಾಧಾಕೃಷ್ಣ ಅವರು ಅಡೂರು ಕಂದಾಯ ವಿಭಾಗೀಯ ಕಚೇರಿಯಲ್ಲಿ (ಆರ್ಡಿಒ) ದೂರು ದಾಖಲಿಸಿದ್ದಾರೆ.</p><p>ಪ್ರಕರಣ ಸಂಬಂಧ ತನಿಖೆ ನಡೆಸಲಾಯಿತು. ಹುಂಜದಿಂದ ರಾಧಾಕೃಷ್ಣ ಅವರಿಗೆ ನಿಜವಾಗಿಯೂ ತೊಂದರೆಯಾಗುತ್ತಿದೆ ಎಂಬುದು ದೃಢಪಟ್ಟಿದೆ ಎಂದು ಆರ್ಡಿಒ ಅಧಿಕಾರಿಗಳು ತಿಳಿಸಿದ್ದಾರೆ. </p><p>ತಕ್ಷಣವೇ ಕೋಳಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ನಿರ್ದೇಶಿಸಿರುವ ಆರ್ಡಿಒ ಅಧಿಕಾರಿಗಳು, ಇದಕ್ಕೆ 14 ದಿನಗಳ ಗಡುವು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>