<p><strong>ತಿರುವನಂತಪುರ: </strong>ಕಾಸರಗೋಡು ಸೇರಿದಂತೆ ಕೋವಿಡ್ ಹಾಟ್ಸ್ಪಾಟ್ ಪ್ರದೇಶಗಳನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಏಪ್ರಿಲ್ 20ರಿಂದ ಲಾಕ್ಡೌನ್ ನಿಯಮಗಳನ್ನು ಸಡಿಲಿಸಲು ಕೇರಳ ಸರ್ಕಾರ ಮುಂದಾಗಿದೆ.</p>.<p>ಸೋಂಕಿನ ತೀವ್ರತೆ ಆಧಾರದಲ್ಲಿ ಜಿಲ್ಲೆಗಳನ್ನು 4 ವಲಯಗಳನ್ನಾಗಿ (ರೆಡ್, ಆರೆಂಜ್–ಎ, ಆರೆಂಜ್–ಬಿ ಮತ್ತು ಗ್ರೀನ್) ವಿಭಾಗಿಸಲಾಗಿದೆ. ಈ ಪೈಕಿ ಆರೆಂಜ್–ಬಿ ಮತ್ತು ಗ್ರೀನ್ ವಲಯಗಳಲ್ಲಿ ನಾಳೆಯಿಂದ ಲಾಕ್ಡೌನ್ ಭಾಗಶಃ ತೆರವಾಗಲಿದೆ ಎಂದು <em><strong>ಮಲಯಾಳ ಮನೋರಮಾ </strong></em>ವರದಿ ಮಾಡಿದೆ.</p>.<p>ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ಮಲಪ್ಪುರಂ ರೆಡ್ ಝೋನ್ ವ್ಯಾಪ್ತಿಯಲ್ಲಿ ಬರುತ್ತವೆ. ಈ ಜಿಲ್ಲೆಗಳ ಪ್ರವೇಶಕ್ಕೆ ಮತ್ತು ನಿರ್ಗಮನಕ್ಕೆ ಎರಡೇ ಕಡೆ ಅವಕಾಶವಿದ್ದು ಅಗತ್ಯ ವಸ್ತು ಸಾಗಾಟಕ್ಕೆ ಮಾತ್ರ ಅನುಮತಿ ನೀಡಲಾಗುತ್ತದೆ. ಇಲ್ಲಿ ಮೇ 3ರವರೆಗೂ ಲಾಕ್ಡೌನ್ ಮುಂದುವರಿಯಲಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/business/commerce-news/lockdown-govt-reverses-order-for-e-commerce-companies-delivery-of-non-essential-items-to-remain-721006.html" target="_blank">ಲಾಕ್ಡೌನ್|ಅಗತ್ಯವಲ್ಲದ ವಸ್ತುಗಳ ಪೂರೈಕೆಗೆ ಇ-ಕಾಮರ್ಸ್ ಕಂಪನಿಗಳಿಗೆ ಅನುಮತಿ ಇಲ್ಲ</a></p>.<p>ಪತ್ತನಂತಿಟ್ಟ, ಎರ್ನಾಕುಳಂ ಮತ್ತು ಕೊಲ್ಲಂ ಆರೆಂಜ್–ಎ ಝೋನ್ ವ್ಯಾಪ್ತಿಯಲ್ಲಿ ಬರುತ್ತವೆ. ಈ ಜಿಲ್ಲೆಗಳಲ್ಲಿ ಏಪ್ರಿಲ್ 24ರವರೆಗೂ ಲಾಕ್ಡೌನ್ ಮುಂದುವರಿಯಲಿದ್ದು, ನಂತರ ಭಾಗಶಃ ತೆರವಾಗಲಿದೆ.</p>.<p><strong>ಈ ಜಿಲ್ಲೆಗಳಲ್ಲಿ ಲಾಕ್ಡೌನ್ ಭಾಗಶಃ ತೆರವು...</strong></p>.<p>ಆಲಪ್ಪುಳ, ತ್ರಿಶೂರ್, ಪಾಲಕ್ಕಾಡ್, ತಿರುವನಂತಪುರ ಮತ್ತು ವಯನಾಡ್ಗಳು ಆರೆಂಜ್–ಬಿ ಝೋನ್ ವ್ಯಾಪ್ತಿಯಲ್ಲಿದ್ದು, ಈ ಜಿಲ್ಲೆಗಳಲ್ಲಿ ನಾಳೆಯಿಂದ ಲಾಕ್ಡೌನ್ ಭಾಗಶಃ ತೆರವಾಗಲಿದೆ. ಇನ್ನು ಗ್ರೀನ್ ಝೋನ್ ವ್ಯಾಪ್ತಿಯಲ್ಲಿ ಬರುವ ಕೊಟ್ಟಾಯಂ ಮತ್ತು ಇಡುಕ್ಕಿಯಲ್ಲಿ ಲಾಕ್ಡೌನ್ ನಿಯಮಗಳು ಬಹುತೇಕ ತೆರವಾಗಲಿವೆ.</p>.<p>ಆದಾಗ್ಯೂ, ಗ್ರೀನ್ ಝೋನ್ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿಯೂ ಸಾಮೂಹಿಕವಾಗಿ ಒಂದೆಡೆ ಸೇರುವುದು, ಉತ್ಸವ, ಧಾರ್ಮಿಕ ಆಚರಣೆ, ಶೈಕ್ಷಣಿಕ ಸಂಸ್ಥೆಗಳ ತೆರೆಯುವಿಕೆ, ಜಿಲ್ಲೆಯಿಂದ ಹೊರ ಹೋಗುವುದಕ್ಕೆ ಅನುಮತಿ ಇರುವುದಿಲ್ಲ.</p>.<p><strong>ಯಾವುದಕ್ಕೆಲ್ಲ ಅನುಮತಿ?</strong></p>.<p>* ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಸ ಸಂಖ್ಯೆಯ ವಾಹನಗಳಿಗೂ ಮಂಗಳವಾರ, ಗುರುವಾರ, ಶನಿವಾರ ಸಮ ಸಂಖ್ಯೆಯ ವಾಹನಗಳ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ.</p>.<p>* 50–60 ಕಿ.ಮೀ ವ್ಯಾಪ್ತಿಯೊಳಗೆ ಕಾರ್ಯಾಚರಿಸುವ ಬಸ್ಸುಗಳ ಓಡಾಕ್ಕೆ ಅನುಮತಿ ನೀಡಲಾಗಿದೆ. ಪ್ರಯಾಣಿಕರು ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಮತ್ತು ಸ್ಯಾನಿಟೈಸರ್ ಬಳಸುವುದು ಕಡ್ಡಾಯ. ನಿಂತುಕೊಂಡು ಪ್ರಯಾಣಿಸುವಂತಿಲ್ಲ. ಮೂರು ಆಸನಗಳ ಬಸ್ಸಿನಲ್ಲಿ ಮಧ್ಯದ ಆಸನ ಬಿಟ್ಟು ಕುಳಿತುಕೊಳ್ಳಬೇಕು.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/prakash-javadekar-says-no-decision-on-resuming-rail-air-travel-after-3-may-721011.html" target="_blank">ರೈಲು, ವಿಮಾನ ಸೇವೆ ಪುನರಾರಂಭಿಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ: ಜಾವಡೇಕರ್</a></p>.<p>* ಶನಿವಾರ ಮತ್ತು ಭಾನುವಾರಗಳಂದು ಕ್ಷೌರದಂಗಡಿಗಳು ಕಾರ್ಯಾಚರಿಸಬಹುದು</p>.<p>* ಹೋಟೆಲ್, ರೆಸ್ಟೋರೆಂಟ್ಗಳು ಸಂಜೆ 7ರವರೆಗೆ ಕಾರ್ಯಾಚರಿಸಬಹುದು. ಪಾರ್ಸೆಲ್ ಕೌಂಟರ್ಗಳಿಗೆ ರಾತ್ರಿ 8ರವರೆಗೂ ಕಾರ್ಯಾಚರಣೆಗೆ ಅನುಮತಿ.</p>.<p>* ಶನಿವಾರ, ಭಾನುವಾರ ಹೊರತುಪಡಿಸಿ ಉಳಿದೆಲ್ಲ ದಿನ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಸಹಕಾರ ಸಂಘಗಳಲ್ಲಿ ಶೇ 33ರಷ್ಟು ಮತ್ತು ಪಂಚಾಯತ್, ವಿಲೇಜ್ ಆಫೀಸ್ಗಳಲ್ಲಿ ಶೇ 35ರಷ್ಟು ಉದ್ಯೋಗಿಗಳು ಮಾತ್ರ ಕಾರ್ಯನಿರ್ವಹಿಸಬಹುದು.</p>.<p>* ವಲಸೆ ಮತ್ತು ಕಟ್ಟಡ ಕಾರ್ಮಿಕರು ಕೆಲಸ ಮಾಡಬಹುದು</p>.<p>* ವೈದ್ಯರು, ಶುಶ್ರೂಷಕಿಯರು, ವಿಜ್ಞಾನಿಗಳು ರಾಜ್ಯದ ಒಳಗೆ ಮತ್ತು ಹೊರ ರಾಜ್ಯಗಳಿಗೆ ಪ್ರಯಾಣಿಸಬಹುದು. ಆಂಬುಲೆನ್ಸ್ಗಳಿಗೂ ಈ ವಿನಾಯಿತಿ ಇದೆ.</p>.<p>* ಖಾದ್ಯ ತೈಲ, ಆಹಾರ ತಯಾರಿಕಾ ಘಟಕಗಳು, ಅಕ್ಕಿ ಮಿಲ್ಗಳು ಕಾರ್ಯಾಚರಿಸಬಹುದು. ಮೀನುಗಾರಿಕೆ, ಮೀನು ಸಾಗಾಟಕ್ಕೆ ಅನುಮತಿ ಇದೆ. ಅಂಚೆ, ಕೊರಿಯರ್ ಸೇವೆಗೂ ವಿನಾಯಿತಿ ಇದೆ.</p>.<p>ಕೃಷಿ ಚಟುವಟಿಕೆ ಮತ್ತು ಕೃಷಿ ಕಾರ್ಮಿಕರಿಗೂ ಕೇರಳ ಸರ್ಕಾರ ಲಾಕ್ಡೌನ್ನಿಂದ ವಿನಾಯಿತಿ ನೀಡಿದೆ ಎಂದು <em><strong>ಮಲಯಾಳ ಮನೋರಮಾ </strong></em>ವರದಿ ಉಲ್ಲೇಖಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ: </strong>ಕಾಸರಗೋಡು ಸೇರಿದಂತೆ ಕೋವಿಡ್ ಹಾಟ್ಸ್ಪಾಟ್ ಪ್ರದೇಶಗಳನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಏಪ್ರಿಲ್ 20ರಿಂದ ಲಾಕ್ಡೌನ್ ನಿಯಮಗಳನ್ನು ಸಡಿಲಿಸಲು ಕೇರಳ ಸರ್ಕಾರ ಮುಂದಾಗಿದೆ.</p>.<p>ಸೋಂಕಿನ ತೀವ್ರತೆ ಆಧಾರದಲ್ಲಿ ಜಿಲ್ಲೆಗಳನ್ನು 4 ವಲಯಗಳನ್ನಾಗಿ (ರೆಡ್, ಆರೆಂಜ್–ಎ, ಆರೆಂಜ್–ಬಿ ಮತ್ತು ಗ್ರೀನ್) ವಿಭಾಗಿಸಲಾಗಿದೆ. ಈ ಪೈಕಿ ಆರೆಂಜ್–ಬಿ ಮತ್ತು ಗ್ರೀನ್ ವಲಯಗಳಲ್ಲಿ ನಾಳೆಯಿಂದ ಲಾಕ್ಡೌನ್ ಭಾಗಶಃ ತೆರವಾಗಲಿದೆ ಎಂದು <em><strong>ಮಲಯಾಳ ಮನೋರಮಾ </strong></em>ವರದಿ ಮಾಡಿದೆ.</p>.<p>ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ಮಲಪ್ಪುರಂ ರೆಡ್ ಝೋನ್ ವ್ಯಾಪ್ತಿಯಲ್ಲಿ ಬರುತ್ತವೆ. ಈ ಜಿಲ್ಲೆಗಳ ಪ್ರವೇಶಕ್ಕೆ ಮತ್ತು ನಿರ್ಗಮನಕ್ಕೆ ಎರಡೇ ಕಡೆ ಅವಕಾಶವಿದ್ದು ಅಗತ್ಯ ವಸ್ತು ಸಾಗಾಟಕ್ಕೆ ಮಾತ್ರ ಅನುಮತಿ ನೀಡಲಾಗುತ್ತದೆ. ಇಲ್ಲಿ ಮೇ 3ರವರೆಗೂ ಲಾಕ್ಡೌನ್ ಮುಂದುವರಿಯಲಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/business/commerce-news/lockdown-govt-reverses-order-for-e-commerce-companies-delivery-of-non-essential-items-to-remain-721006.html" target="_blank">ಲಾಕ್ಡೌನ್|ಅಗತ್ಯವಲ್ಲದ ವಸ್ತುಗಳ ಪೂರೈಕೆಗೆ ಇ-ಕಾಮರ್ಸ್ ಕಂಪನಿಗಳಿಗೆ ಅನುಮತಿ ಇಲ್ಲ</a></p>.<p>ಪತ್ತನಂತಿಟ್ಟ, ಎರ್ನಾಕುಳಂ ಮತ್ತು ಕೊಲ್ಲಂ ಆರೆಂಜ್–ಎ ಝೋನ್ ವ್ಯಾಪ್ತಿಯಲ್ಲಿ ಬರುತ್ತವೆ. ಈ ಜಿಲ್ಲೆಗಳಲ್ಲಿ ಏಪ್ರಿಲ್ 24ರವರೆಗೂ ಲಾಕ್ಡೌನ್ ಮುಂದುವರಿಯಲಿದ್ದು, ನಂತರ ಭಾಗಶಃ ತೆರವಾಗಲಿದೆ.</p>.<p><strong>ಈ ಜಿಲ್ಲೆಗಳಲ್ಲಿ ಲಾಕ್ಡೌನ್ ಭಾಗಶಃ ತೆರವು...</strong></p>.<p>ಆಲಪ್ಪುಳ, ತ್ರಿಶೂರ್, ಪಾಲಕ್ಕಾಡ್, ತಿರುವನಂತಪುರ ಮತ್ತು ವಯನಾಡ್ಗಳು ಆರೆಂಜ್–ಬಿ ಝೋನ್ ವ್ಯಾಪ್ತಿಯಲ್ಲಿದ್ದು, ಈ ಜಿಲ್ಲೆಗಳಲ್ಲಿ ನಾಳೆಯಿಂದ ಲಾಕ್ಡೌನ್ ಭಾಗಶಃ ತೆರವಾಗಲಿದೆ. ಇನ್ನು ಗ್ರೀನ್ ಝೋನ್ ವ್ಯಾಪ್ತಿಯಲ್ಲಿ ಬರುವ ಕೊಟ್ಟಾಯಂ ಮತ್ತು ಇಡುಕ್ಕಿಯಲ್ಲಿ ಲಾಕ್ಡೌನ್ ನಿಯಮಗಳು ಬಹುತೇಕ ತೆರವಾಗಲಿವೆ.</p>.<p>ಆದಾಗ್ಯೂ, ಗ್ರೀನ್ ಝೋನ್ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿಯೂ ಸಾಮೂಹಿಕವಾಗಿ ಒಂದೆಡೆ ಸೇರುವುದು, ಉತ್ಸವ, ಧಾರ್ಮಿಕ ಆಚರಣೆ, ಶೈಕ್ಷಣಿಕ ಸಂಸ್ಥೆಗಳ ತೆರೆಯುವಿಕೆ, ಜಿಲ್ಲೆಯಿಂದ ಹೊರ ಹೋಗುವುದಕ್ಕೆ ಅನುಮತಿ ಇರುವುದಿಲ್ಲ.</p>.<p><strong>ಯಾವುದಕ್ಕೆಲ್ಲ ಅನುಮತಿ?</strong></p>.<p>* ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಸ ಸಂಖ್ಯೆಯ ವಾಹನಗಳಿಗೂ ಮಂಗಳವಾರ, ಗುರುವಾರ, ಶನಿವಾರ ಸಮ ಸಂಖ್ಯೆಯ ವಾಹನಗಳ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ.</p>.<p>* 50–60 ಕಿ.ಮೀ ವ್ಯಾಪ್ತಿಯೊಳಗೆ ಕಾರ್ಯಾಚರಿಸುವ ಬಸ್ಸುಗಳ ಓಡಾಕ್ಕೆ ಅನುಮತಿ ನೀಡಲಾಗಿದೆ. ಪ್ರಯಾಣಿಕರು ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಮತ್ತು ಸ್ಯಾನಿಟೈಸರ್ ಬಳಸುವುದು ಕಡ್ಡಾಯ. ನಿಂತುಕೊಂಡು ಪ್ರಯಾಣಿಸುವಂತಿಲ್ಲ. ಮೂರು ಆಸನಗಳ ಬಸ್ಸಿನಲ್ಲಿ ಮಧ್ಯದ ಆಸನ ಬಿಟ್ಟು ಕುಳಿತುಕೊಳ್ಳಬೇಕು.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/national/prakash-javadekar-says-no-decision-on-resuming-rail-air-travel-after-3-may-721011.html" target="_blank">ರೈಲು, ವಿಮಾನ ಸೇವೆ ಪುನರಾರಂಭಿಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ: ಜಾವಡೇಕರ್</a></p>.<p>* ಶನಿವಾರ ಮತ್ತು ಭಾನುವಾರಗಳಂದು ಕ್ಷೌರದಂಗಡಿಗಳು ಕಾರ್ಯಾಚರಿಸಬಹುದು</p>.<p>* ಹೋಟೆಲ್, ರೆಸ್ಟೋರೆಂಟ್ಗಳು ಸಂಜೆ 7ರವರೆಗೆ ಕಾರ್ಯಾಚರಿಸಬಹುದು. ಪಾರ್ಸೆಲ್ ಕೌಂಟರ್ಗಳಿಗೆ ರಾತ್ರಿ 8ರವರೆಗೂ ಕಾರ್ಯಾಚರಣೆಗೆ ಅನುಮತಿ.</p>.<p>* ಶನಿವಾರ, ಭಾನುವಾರ ಹೊರತುಪಡಿಸಿ ಉಳಿದೆಲ್ಲ ದಿನ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಸಹಕಾರ ಸಂಘಗಳಲ್ಲಿ ಶೇ 33ರಷ್ಟು ಮತ್ತು ಪಂಚಾಯತ್, ವಿಲೇಜ್ ಆಫೀಸ್ಗಳಲ್ಲಿ ಶೇ 35ರಷ್ಟು ಉದ್ಯೋಗಿಗಳು ಮಾತ್ರ ಕಾರ್ಯನಿರ್ವಹಿಸಬಹುದು.</p>.<p>* ವಲಸೆ ಮತ್ತು ಕಟ್ಟಡ ಕಾರ್ಮಿಕರು ಕೆಲಸ ಮಾಡಬಹುದು</p>.<p>* ವೈದ್ಯರು, ಶುಶ್ರೂಷಕಿಯರು, ವಿಜ್ಞಾನಿಗಳು ರಾಜ್ಯದ ಒಳಗೆ ಮತ್ತು ಹೊರ ರಾಜ್ಯಗಳಿಗೆ ಪ್ರಯಾಣಿಸಬಹುದು. ಆಂಬುಲೆನ್ಸ್ಗಳಿಗೂ ಈ ವಿನಾಯಿತಿ ಇದೆ.</p>.<p>* ಖಾದ್ಯ ತೈಲ, ಆಹಾರ ತಯಾರಿಕಾ ಘಟಕಗಳು, ಅಕ್ಕಿ ಮಿಲ್ಗಳು ಕಾರ್ಯಾಚರಿಸಬಹುದು. ಮೀನುಗಾರಿಕೆ, ಮೀನು ಸಾಗಾಟಕ್ಕೆ ಅನುಮತಿ ಇದೆ. ಅಂಚೆ, ಕೊರಿಯರ್ ಸೇವೆಗೂ ವಿನಾಯಿತಿ ಇದೆ.</p>.<p>ಕೃಷಿ ಚಟುವಟಿಕೆ ಮತ್ತು ಕೃಷಿ ಕಾರ್ಮಿಕರಿಗೂ ಕೇರಳ ಸರ್ಕಾರ ಲಾಕ್ಡೌನ್ನಿಂದ ವಿನಾಯಿತಿ ನೀಡಿದೆ ಎಂದು <em><strong>ಮಲಯಾಳ ಮನೋರಮಾ </strong></em>ವರದಿ ಉಲ್ಲೇಖಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>