<p><strong>ಮಲಪ್ಪುರಂ(ಕೇರಳ):</strong> ಕೇರಳ ರಾಜ್ಯದ ಸಾಕ್ಷರತಾ ಅಭಿಯಾನದಲ್ಲಿ ಸಕ್ರಿಯ ಪಾತ್ರ ವಹಿಸುವ ಮೂಲಕ ಹೆಸರಾಗಿದ್ದ ಮಲಪ್ಪುರಂ ಜಿಲ್ಲೆಯ ವಿಕಲಚೇತನ ಸಾಮಾಜಿಕ ಕಾರ್ಯಕರ್ತೆ ಕೆ.ವಿ. ರಬಿಯಾ ಅವರು ಅನಾರೋಗ್ಯದಿಂದ ಭಾನುವಾರ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಮೂಲಗಳು ತಿಳಿಸಿವೆ.</p><p>ಅವರಿಗೆ 59 ವರ್ಷ ವಯಸ್ಸಾಗಿತ್ತು. 2022ರಲ್ಲಿ ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳಿಗಾಗಿ ರಬಿಯಾ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು.</p><p>14ನೇ ವಯಸ್ಸಿನಲ್ಲಿ ಪೋಲಿಯೊದಿಂದ ಅಂಗವಿಕಲರಾದ ರಬಿಯಾ, ಗಾಲಿಕುರ್ಚಿಯಲ್ಲಿ ತನ್ನ ಅಧ್ಯಯನವನ್ನು ಮುಂದುವರಿಸಿದ್ದರು.</p><p>1992ರ ಜೂನ್ ತಿಂಗಳಲ್ಲಿ ಮಲಪ್ಪುರಂ ಜಿಲ್ಲೆಯ ವೆಲ್ಲಿಲಕ್ಕಾಡ್ ಎಂಬ ತನ್ನ ಹುಟ್ಟೂರು ಬಳಿಯ ತಿರುರಂಗಡಿಯಲ್ಲಿ ಎಲ್ಲ ವಯಸ್ಸಿನ ಅನಕ್ಷರಸ್ಥರಿಗೆ ವಯಸ್ಕ ಸಾಕ್ಷರತಾ ಅಭಿಯಾನವನ್ನು ಪ್ರಾರಂಭಿಸಿದರು. ತಮ್ಮ ಕೆಲಸದ ಮೂಲಕ ಅವರು ನೂರಾರು ಅನಕ್ಷರಸ್ಥರು ಅಕ್ಷರಸ್ಥರಾಗಲು ನೆರವಾದರು.</p><p>ಶಿಕ್ಷಣ, ಆರೋಗ್ಯ, ಅಂಗವಿಕಲರ ಪುನಶ್ಚೇತನಕ್ಕಾಗಿ ‘ಚಲನಂ’ ಎಂಬ ಸ್ವಯಂಸೇವಾ ಸಂಸ್ಥೆ ಸ್ಥಾಪಿಸಿದ್ದರು.</p><p>2002ರಲ್ಲಿ ಕ್ಯಾನ್ಸರ್ ಮಹಾಮಾರಿಯಿಂದ ತತ್ತರಿಸಿದರೂ ಯಶಸ್ವಿಯಾಗಿ ಕಿಮೋಥೆರಫಿ ಪಡೆದು ಸಾಮಾಜಿಕ ಸೇವೆಗೆ ಮರಳಿದ್ದರು. 2009ರಲ್ಲಿ ‘ಸ್ವಪ್ನಂಗಳ್ಕು ಚಿರಕುಕಲ್ ಉಂಡು’ ಎಂಬ ಆತ್ಮಚರಿತ್ರೆ ಬರೆದಿದ್ದಾರೆ.</p><p>1994ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ನ್ಯಾಶನಲ್ ಯೂತ್ ಅವಾರ್ಡ್ ಪಡೆದಿದ್ದರು.</p><p>2002ರಲ್ಲಿ 73ನೇ ಗಣರಾಜ್ಯೋತ್ಸವದ ಸಂಬರ್ಭ ಪದ್ಮಶ್ರಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.</p><p>ರಾಜ್ಯ ಪ್ರಶಸ್ತಿ ಸೇರಿ ಸಾಮಾಜಿಕ ಸೇವೆಗೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲಪ್ಪುರಂ(ಕೇರಳ):</strong> ಕೇರಳ ರಾಜ್ಯದ ಸಾಕ್ಷರತಾ ಅಭಿಯಾನದಲ್ಲಿ ಸಕ್ರಿಯ ಪಾತ್ರ ವಹಿಸುವ ಮೂಲಕ ಹೆಸರಾಗಿದ್ದ ಮಲಪ್ಪುರಂ ಜಿಲ್ಲೆಯ ವಿಕಲಚೇತನ ಸಾಮಾಜಿಕ ಕಾರ್ಯಕರ್ತೆ ಕೆ.ವಿ. ರಬಿಯಾ ಅವರು ಅನಾರೋಗ್ಯದಿಂದ ಭಾನುವಾರ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಮೂಲಗಳು ತಿಳಿಸಿವೆ.</p><p>ಅವರಿಗೆ 59 ವರ್ಷ ವಯಸ್ಸಾಗಿತ್ತು. 2022ರಲ್ಲಿ ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳಿಗಾಗಿ ರಬಿಯಾ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು.</p><p>14ನೇ ವಯಸ್ಸಿನಲ್ಲಿ ಪೋಲಿಯೊದಿಂದ ಅಂಗವಿಕಲರಾದ ರಬಿಯಾ, ಗಾಲಿಕುರ್ಚಿಯಲ್ಲಿ ತನ್ನ ಅಧ್ಯಯನವನ್ನು ಮುಂದುವರಿಸಿದ್ದರು.</p><p>1992ರ ಜೂನ್ ತಿಂಗಳಲ್ಲಿ ಮಲಪ್ಪುರಂ ಜಿಲ್ಲೆಯ ವೆಲ್ಲಿಲಕ್ಕಾಡ್ ಎಂಬ ತನ್ನ ಹುಟ್ಟೂರು ಬಳಿಯ ತಿರುರಂಗಡಿಯಲ್ಲಿ ಎಲ್ಲ ವಯಸ್ಸಿನ ಅನಕ್ಷರಸ್ಥರಿಗೆ ವಯಸ್ಕ ಸಾಕ್ಷರತಾ ಅಭಿಯಾನವನ್ನು ಪ್ರಾರಂಭಿಸಿದರು. ತಮ್ಮ ಕೆಲಸದ ಮೂಲಕ ಅವರು ನೂರಾರು ಅನಕ್ಷರಸ್ಥರು ಅಕ್ಷರಸ್ಥರಾಗಲು ನೆರವಾದರು.</p><p>ಶಿಕ್ಷಣ, ಆರೋಗ್ಯ, ಅಂಗವಿಕಲರ ಪುನಶ್ಚೇತನಕ್ಕಾಗಿ ‘ಚಲನಂ’ ಎಂಬ ಸ್ವಯಂಸೇವಾ ಸಂಸ್ಥೆ ಸ್ಥಾಪಿಸಿದ್ದರು.</p><p>2002ರಲ್ಲಿ ಕ್ಯಾನ್ಸರ್ ಮಹಾಮಾರಿಯಿಂದ ತತ್ತರಿಸಿದರೂ ಯಶಸ್ವಿಯಾಗಿ ಕಿಮೋಥೆರಫಿ ಪಡೆದು ಸಾಮಾಜಿಕ ಸೇವೆಗೆ ಮರಳಿದ್ದರು. 2009ರಲ್ಲಿ ‘ಸ್ವಪ್ನಂಗಳ್ಕು ಚಿರಕುಕಲ್ ಉಂಡು’ ಎಂಬ ಆತ್ಮಚರಿತ್ರೆ ಬರೆದಿದ್ದಾರೆ.</p><p>1994ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ನ್ಯಾಶನಲ್ ಯೂತ್ ಅವಾರ್ಡ್ ಪಡೆದಿದ್ದರು.</p><p>2002ರಲ್ಲಿ 73ನೇ ಗಣರಾಜ್ಯೋತ್ಸವದ ಸಂಬರ್ಭ ಪದ್ಮಶ್ರಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.</p><p>ರಾಜ್ಯ ಪ್ರಶಸ್ತಿ ಸೇರಿ ಸಾಮಾಜಿಕ ಸೇವೆಗೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>