<p><strong>ತಿರುವನಂತಪುರ:</strong> ಕೊಚ್ಚಿ ನಗರದ ಜೌಗು ಪ್ರದೇಶವೊಂದರಲ್ಲಿ ಕಳೆದ ನವೆಂಬರ್ 30ರಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ದೇಹವು ಬೆಂಗಳೂರು ಮೂಲದ ಸೂರಜ್ ಲಾಮ (59) ಅವರದು ಎಂಬುದು ಖಚಿತವಾಗಿದೆ. </p>.<p>ದೇಹವನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿದಾಗ, ಅವರ ಗುರುತು ದೃಢಪಟ್ಟಿದೆ.</p>.<p>‘ತಂದೆಯ ದೇಹ ಸಂಪೂರ್ಣ ಕೊಳೆತು ಹೋಗಿರುವ ಕಾರಣ, ನಗರದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗುವುದು’ ಎಂದು ಸೂರಜ್ ಅವರ ಪುತ್ರ ಸಂತೋನ್ ಲಾಮಅವರು ಕೊಚ್ಚಿ ನಗರದಲ್ಲಿ ಶುಕ್ರವಾರ ಹೇಳಿದರು.</p>.<p><strong>ವಿವರ:</strong> ಬೆಂಗಳೂರಿನ ಕೊತ್ತನೂರಿನವರಾದ ಸೂರಜ್, ಕುವೈತ್ನಲ್ಲಿ 20ಕ್ಕೂ ಹೆಚ್ಚು ವರ್ಷಗಳಿಂದ ರೆಸ್ಟೋರೆಂಟ್ ನಡೆಸುತ್ತಿದ್ದರು.</p>.<p>ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಅವರಿಗೆ ಮರೆವಿನ ಕಾಯಿಲೆ ಕಾಣಿಸಿಕೊಂಡಿತ್ತು. ಅವರ ವೀಸಾ ಅವಧಿಯೂ ಮುಗಿದಿದ್ದ ಕಾರಣ, ಅಕ್ಟೋಬರ್ 5ರಂದು ಗಡಿಪಾರು ಮಾಡಲಾಗಿತ್ತು. ಆದರೆ, ಬೆಂಗಳೂರಿನ ಬದಲಾಗಿ ಅವರನ್ನು ಕೊಚ್ಚಿಗೆ ಕಳುಹಿಸಲಾಗಿತ್ತು.</p>.<p>ಕೊಚ್ಚಿ ನಗರದ ಬೀದಿಯೊಂದರಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಸೂರಜ್ ಅವರನ್ನು ಪೊಲೀಸರು ಸ್ಥಳೀಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ನೀಡಿದ ಕೆಲ ದಿನಗಳ ಬಳಿಕ ಅವರು ಆಸ್ಪತ್ರೆಯನ್ನು ತೊರೆದಿದ್ದರು. ಇದು ಅಲ್ಲಿನ ಸಿಬ್ಬಂದಿಯ ಗಮನಕ್ಕೂ ಬಂದಿರಲಿಲ್ಲ.</p>.<p>ಅಕ್ಟೋಬರ್ 7ರಂದು ಕೊಚ್ಚಿಗೆ ತೆರಳಿದ್ದ ಪುತ್ರ ಸಂತೋನ್, ತಂದೆಗಾಗಿ ಹುಡುಕಾಟ ನಡೆಸಿದ್ದರು. ತಂದೆ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದುದು ಗೊತ್ತಿದ್ದರೂ ಸಹ, ಅವರ ಕುರಿತು ಕಾಳಜಿ ವಹಿಸದ ವಿಮಾನ ನಿಲ್ದಾಣ, ಆಸ್ಪತ್ರೆ ಹಾಗೂ ಪೊಲೀಸರ ವರ್ತನೆ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.</p>.<p>ನಂತರ ಅವರು, ಕೇರಳ ಹೈಕೋರ್ಟ್ನಲ್ಲಿ ಈ ಕುರಿತು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ನ ವಿಭಾಗೀಯ ಪೀಠ,‘ಸೂರಜ್ ಪ್ರಕರಣದಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ವೈಫಲ್ಯಗಳು ಕಂಡುಬರುತ್ತವೆ’ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. </p>.<p>‘ಸರ್ಕಾರಿ ಸಂಸ್ಥೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ್ದಲ್ಲಿ, ಸೂರಜ್ ಅವರು ಬದುಕಿರುತ್ತಿದ್ದರು. ಇಂಥ ಘಟನೆ ನಡೆಯಲೇಬಾರದು. ಇಡೀ ವ್ಯವಸ್ಥೆಯ ಪರವಾಗಿ ನಾವು ಸೂರಜ್ ಕುಟುಂಬದವರಲ್ಲಿ ಕ್ಷಮೆ ಕೇಳಬಹುದಷ್ಟೆ’ ಎಂದು ನ್ಯಾಯಮೂರ್ತಿಗಳಾದ ದೇವನ್ ರಾಮಚಂದ್ರನ್ ಹಾಗೂ ಎಂ.ಬಿ.ಸ್ನೇಹಲತಾ ಶುಕ್ರವಾರ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ:</strong> ಕೊಚ್ಚಿ ನಗರದ ಜೌಗು ಪ್ರದೇಶವೊಂದರಲ್ಲಿ ಕಳೆದ ನವೆಂಬರ್ 30ರಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ದೇಹವು ಬೆಂಗಳೂರು ಮೂಲದ ಸೂರಜ್ ಲಾಮ (59) ಅವರದು ಎಂಬುದು ಖಚಿತವಾಗಿದೆ. </p>.<p>ದೇಹವನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿದಾಗ, ಅವರ ಗುರುತು ದೃಢಪಟ್ಟಿದೆ.</p>.<p>‘ತಂದೆಯ ದೇಹ ಸಂಪೂರ್ಣ ಕೊಳೆತು ಹೋಗಿರುವ ಕಾರಣ, ನಗರದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗುವುದು’ ಎಂದು ಸೂರಜ್ ಅವರ ಪುತ್ರ ಸಂತೋನ್ ಲಾಮಅವರು ಕೊಚ್ಚಿ ನಗರದಲ್ಲಿ ಶುಕ್ರವಾರ ಹೇಳಿದರು.</p>.<p><strong>ವಿವರ:</strong> ಬೆಂಗಳೂರಿನ ಕೊತ್ತನೂರಿನವರಾದ ಸೂರಜ್, ಕುವೈತ್ನಲ್ಲಿ 20ಕ್ಕೂ ಹೆಚ್ಚು ವರ್ಷಗಳಿಂದ ರೆಸ್ಟೋರೆಂಟ್ ನಡೆಸುತ್ತಿದ್ದರು.</p>.<p>ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಅವರಿಗೆ ಮರೆವಿನ ಕಾಯಿಲೆ ಕಾಣಿಸಿಕೊಂಡಿತ್ತು. ಅವರ ವೀಸಾ ಅವಧಿಯೂ ಮುಗಿದಿದ್ದ ಕಾರಣ, ಅಕ್ಟೋಬರ್ 5ರಂದು ಗಡಿಪಾರು ಮಾಡಲಾಗಿತ್ತು. ಆದರೆ, ಬೆಂಗಳೂರಿನ ಬದಲಾಗಿ ಅವರನ್ನು ಕೊಚ್ಚಿಗೆ ಕಳುಹಿಸಲಾಗಿತ್ತು.</p>.<p>ಕೊಚ್ಚಿ ನಗರದ ಬೀದಿಯೊಂದರಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಸೂರಜ್ ಅವರನ್ನು ಪೊಲೀಸರು ಸ್ಥಳೀಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ನೀಡಿದ ಕೆಲ ದಿನಗಳ ಬಳಿಕ ಅವರು ಆಸ್ಪತ್ರೆಯನ್ನು ತೊರೆದಿದ್ದರು. ಇದು ಅಲ್ಲಿನ ಸಿಬ್ಬಂದಿಯ ಗಮನಕ್ಕೂ ಬಂದಿರಲಿಲ್ಲ.</p>.<p>ಅಕ್ಟೋಬರ್ 7ರಂದು ಕೊಚ್ಚಿಗೆ ತೆರಳಿದ್ದ ಪುತ್ರ ಸಂತೋನ್, ತಂದೆಗಾಗಿ ಹುಡುಕಾಟ ನಡೆಸಿದ್ದರು. ತಂದೆ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದುದು ಗೊತ್ತಿದ್ದರೂ ಸಹ, ಅವರ ಕುರಿತು ಕಾಳಜಿ ವಹಿಸದ ವಿಮಾನ ನಿಲ್ದಾಣ, ಆಸ್ಪತ್ರೆ ಹಾಗೂ ಪೊಲೀಸರ ವರ್ತನೆ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.</p>.<p>ನಂತರ ಅವರು, ಕೇರಳ ಹೈಕೋರ್ಟ್ನಲ್ಲಿ ಈ ಕುರಿತು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ನ ವಿಭಾಗೀಯ ಪೀಠ,‘ಸೂರಜ್ ಪ್ರಕರಣದಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ವೈಫಲ್ಯಗಳು ಕಂಡುಬರುತ್ತವೆ’ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. </p>.<p>‘ಸರ್ಕಾರಿ ಸಂಸ್ಥೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ್ದಲ್ಲಿ, ಸೂರಜ್ ಅವರು ಬದುಕಿರುತ್ತಿದ್ದರು. ಇಂಥ ಘಟನೆ ನಡೆಯಲೇಬಾರದು. ಇಡೀ ವ್ಯವಸ್ಥೆಯ ಪರವಾಗಿ ನಾವು ಸೂರಜ್ ಕುಟುಂಬದವರಲ್ಲಿ ಕ್ಷಮೆ ಕೇಳಬಹುದಷ್ಟೆ’ ಎಂದು ನ್ಯಾಯಮೂರ್ತಿಗಳಾದ ದೇವನ್ ರಾಮಚಂದ್ರನ್ ಹಾಗೂ ಎಂ.ಬಿ.ಸ್ನೇಹಲತಾ ಶುಕ್ರವಾರ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>