<p><strong>ಕೋಲ್ಕತ್ತ</strong>: ‘ತಪ್ಪು ಭಾವಿಸಿ ದೂರು ದಾಖಲಿಸಿದ್ದೇನೆ’ ಎಂದು ದೂರುದಾರ ಮಹಿಳೆ ಹೇಳಿಕೆ ನೀಡಿದ ನಂತರ ಅತ್ಯಾಚಾರ ಪ್ರಕರಣವೊಂದರ ಆರೋಪಿಯನ್ನು ಕೋಲ್ಕತ್ತದ ಕೋರ್ಟೊಂದು ಖುಲಾಸೆಗೊಳಿಸಿದೆ.</p>.<p>2020ರ ನವೆಂಬರ್ 24ರಂದು ಪ್ರಕರಣ ದಾಖಲಾದ ನಂತರ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಕೋರ್ಟ್ ಜಾಮೀನು ನೀಡುವುದಕ್ಕೂ ಮೊದಲು ಅವರು 51 ದಿನ ಜೈಲಿನಲ್ಲಿ ಕಳೆದಿದ್ದರು.</p>.<p>ಮಹಿಳೆ ತನ್ನ ದೂರಿನಲ್ಲಿ, ತಾನು ಆ ವ್ಯಕ್ತಿಯೊಂದಿಗೆ 2017ರಿಂದ ಸಂಬಂಧ ಹೊಂದಿರುವುದಾಗಿ ಹೇಳಿದ್ದಾರೆ. ವ್ಯಕ್ತಿಯು ಮದುವೆಯಾಗುವುದಾಗಿ ಭರವಸೆ ನೀಡಿದ ಮೇರೆಗೆ ಸಾಲ್ಟ್ ಲೇಕ್ನ ಹೋಟೆಲ್ನಲ್ಲಿ ಅವರೊಂದಿಗೆ ರಾತ್ರಿ ಕಳೆದಿದ್ದಾಗಿ ಮತ್ತು ಅಲ್ಲಿ ದೈಹಿಕ ಸಂಬಂಧ ಬೆಳೆಸಿದ್ದಾಗಿ ಹೇಳಿದ್ದಾರೆ.</p>.<p>ಆದಾಗ್ಯೂ, ಮರುದಿನ ಬೆಳಿಗ್ಗೆ ವ್ಯಕ್ತಿಯು ಮದುವೆಯಾಗಲು ನಿರಾಕರಿಸಿ ಪರಾರಿಯಾಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು. ತಾನು ನಿರಪರಾಧಿ ಎಂದೇ ವ್ಯಕ್ತಿಯು ಹೇಳುತ್ತಾ ಬಂದಿದ್ದರು.</p>.<p>ಪ್ರಕರಣದ ವಿಚಾರಣೆಯ ಸಮಯದಲ್ಲಿ, ತಪ್ಪು ತಿಳಿವಳಿಕೆಯಿಂದಾಗಿ ತಾನು ದೂರು ದಾಖಲಿಸಿದ್ದು, ತನಗೆ ಬೇರೆ ಏನೂ ನೆನಪಿಲ್ಲ ಎಂದು ಮಹಿಳೆ ಹೇಳಿದ್ದಾರೆ ಎಂದು ನ್ಯಾಯಾಲಯದ ದಾಖಲೆಗಳು ತಿಳಿಸಿವೆ. ದೂರನ್ನು ತನ್ನ ಸ್ನೇಹಿತ ಬರೆದಿದ್ದು, ಅದರ ವಿಷಯಗಳನ್ನು ತಿಳಿಯದೆ ಸಹಿ ಮಾಡಿದ್ದಾಗಿಯೂ ಮಹಿಳೆ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ‘ತಪ್ಪು ಭಾವಿಸಿ ದೂರು ದಾಖಲಿಸಿದ್ದೇನೆ’ ಎಂದು ದೂರುದಾರ ಮಹಿಳೆ ಹೇಳಿಕೆ ನೀಡಿದ ನಂತರ ಅತ್ಯಾಚಾರ ಪ್ರಕರಣವೊಂದರ ಆರೋಪಿಯನ್ನು ಕೋಲ್ಕತ್ತದ ಕೋರ್ಟೊಂದು ಖುಲಾಸೆಗೊಳಿಸಿದೆ.</p>.<p>2020ರ ನವೆಂಬರ್ 24ರಂದು ಪ್ರಕರಣ ದಾಖಲಾದ ನಂತರ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಕೋರ್ಟ್ ಜಾಮೀನು ನೀಡುವುದಕ್ಕೂ ಮೊದಲು ಅವರು 51 ದಿನ ಜೈಲಿನಲ್ಲಿ ಕಳೆದಿದ್ದರು.</p>.<p>ಮಹಿಳೆ ತನ್ನ ದೂರಿನಲ್ಲಿ, ತಾನು ಆ ವ್ಯಕ್ತಿಯೊಂದಿಗೆ 2017ರಿಂದ ಸಂಬಂಧ ಹೊಂದಿರುವುದಾಗಿ ಹೇಳಿದ್ದಾರೆ. ವ್ಯಕ್ತಿಯು ಮದುವೆಯಾಗುವುದಾಗಿ ಭರವಸೆ ನೀಡಿದ ಮೇರೆಗೆ ಸಾಲ್ಟ್ ಲೇಕ್ನ ಹೋಟೆಲ್ನಲ್ಲಿ ಅವರೊಂದಿಗೆ ರಾತ್ರಿ ಕಳೆದಿದ್ದಾಗಿ ಮತ್ತು ಅಲ್ಲಿ ದೈಹಿಕ ಸಂಬಂಧ ಬೆಳೆಸಿದ್ದಾಗಿ ಹೇಳಿದ್ದಾರೆ.</p>.<p>ಆದಾಗ್ಯೂ, ಮರುದಿನ ಬೆಳಿಗ್ಗೆ ವ್ಯಕ್ತಿಯು ಮದುವೆಯಾಗಲು ನಿರಾಕರಿಸಿ ಪರಾರಿಯಾಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು. ತಾನು ನಿರಪರಾಧಿ ಎಂದೇ ವ್ಯಕ್ತಿಯು ಹೇಳುತ್ತಾ ಬಂದಿದ್ದರು.</p>.<p>ಪ್ರಕರಣದ ವಿಚಾರಣೆಯ ಸಮಯದಲ್ಲಿ, ತಪ್ಪು ತಿಳಿವಳಿಕೆಯಿಂದಾಗಿ ತಾನು ದೂರು ದಾಖಲಿಸಿದ್ದು, ತನಗೆ ಬೇರೆ ಏನೂ ನೆನಪಿಲ್ಲ ಎಂದು ಮಹಿಳೆ ಹೇಳಿದ್ದಾರೆ ಎಂದು ನ್ಯಾಯಾಲಯದ ದಾಖಲೆಗಳು ತಿಳಿಸಿವೆ. ದೂರನ್ನು ತನ್ನ ಸ್ನೇಹಿತ ಬರೆದಿದ್ದು, ಅದರ ವಿಷಯಗಳನ್ನು ತಿಳಿಯದೆ ಸಹಿ ಮಾಡಿದ್ದಾಗಿಯೂ ಮಹಿಳೆ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>