‘ನಾನು ಈಗಾಗಲೇ ಪ್ಯಾಂಗಾಂಗ್ಗೆ ಬಂದಿದ್ದೇನೆ. ನಂತರ, ನುಬ್ರಾ ಮತ್ತು ಕಾರ್ಗಿಲ್ಗೆ ಭೇಟಿ ನೀಡಲಿದ್ದೇನೆ. ಈ ಪ್ರವಾಸದ ಉದ್ದೇಶವೇನೆಂದರೆ ಇಲ್ಲಿನ ಜನರ ಏನು ಹೇಳುತ್ತಾರೆ ಮತ್ತು ಅವರ ಕಷ್ಟಗಳೇನು ಎಂಬುದನ್ನು ಆಲಿಸುವುದು. ಗೋಮಾಳ ವಶದ ಕುರಿತು ಜನರು ವಿಪರೀತ ಕಳವಳಗೊಂಡಿದ್ದಾರೆ. ಇಲ್ಲಿನ ಮತ್ತೊಂದು ಸಮಸ್ಯೆಯೇನೆಂದರೆ ಸಮರ್ಪಕ ದೂರವಾಣಿ ಸಂಪರ್ಕ ಇಲ್ಲದಿರುವುದು’ ಎಂದು ಅವರು ತಮ್ಮ ಅನುಭವ ಹಂಚಿಕೊಂಡರು.