<p><strong>ಪಟ್ನಾ</strong>: ಛತ್ ಪೂಜೆಯ ಅಂಗವಾಗಿ ಊರಿಗೆ ಮರಳುತ್ತಿರುವ ಬಿಹಾರಿಗಳನ್ನು ಅತ್ಯಂತ ಅಮಾನವೀಯ ಸ್ಥಿತಿಯಲ್ಲಿ ಪ್ರಯಾಣಿಸುವಂತೆ ಕೇಂದ್ರ ಸರ್ಕಾರ ಮಾಡಿದೆ. ಅಲ್ಲದೇ, ಬಿಹಾರಕ್ಕೆ ರೈಲುಗಳ ಸಮರ್ಪಕ ಸಂಚಾರಕ್ಕೆ ವ್ಯವಸ್ಥೆ ಮಾಡಿಲ್ಲ ಎಂದು ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಶನಿವಾರ ಆರೋಪಿಸಿದ್ದಾರೆ. </p>.<p>ರೈಲಿನಲ್ಲಿ ಜನರು ಇಡುಕಿರಿದಿದ್ದು, ವಿಪರೀತ ಕಷ್ಟ ಅನುಭವಿಸುತ್ತಲೇ ಪ್ರಯಾಣಿಸುತ್ತಿರುವ ವಿಡಿಯೊವನ್ನು ಲಾಲೂ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. </p>.<p>‘ದೇಶದಲ್ಲಿರುವ 13,198 ರೈಲುಗಳ ಪೈಕಿ 12000 ರೈಲುಗಳನ್ನು ಛತ್ ಪೂಜೆಯ ಸಲುವಾಗಿ ಬಿಹಾರದ ಪ್ರಯಾಣಕ್ಕೆ ನಿಯೋಜಿಸಲಾಗಿದೆ ಎಂದು ಸುಳ್ಳುಗಳ ಸರದಾರ, ಹುಸಿ ಭರವಸೆಗಳ ನಾಯಕರೊಬ್ಬರು ಹೇಳಿಕೊಂಡಿದ್ದಾರೆ. ಇದು ಕೂಡ ದೊಡ್ಡ ಸುಳ್ಳು. ನನ್ನ ಬಿಹಾರಿ ಜನರನ್ನು ಈ ರೀತಿ ಅಮಾನವೀಯವಾಗಿ ಪ್ರಯಾಣಿಸುವಂತೆ ಮಾಡಲಾಗಿದೆ’ ಎಂದು ಲಾಲೂ ಬರೆದಿದ್ದಾರೆ. </p>.<p>ಛತ್ ಪೂಜೆಗಾಗಿ 12000 ವಿಶೇಷ ರೈಲುಗಳನ್ನು ಬಿಹಾರದಲ್ಲಿ ಸಂಚಾರಕ್ಕಾಗಿ ಭಾರತೀಯ ರೈಲ್ವೆ ನಿಯೋಜಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ಇತ್ತೀಚೆಗಷ್ಟೇ ಬಿಹಾರದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಹೇಳಿದ್ದರು. </p>.<div><blockquote>ಬಿಹಾರದ ರೈಲುಗಳಲ್ಲಿ ಎಷ್ಟು ಜನ ಪಯಣಿಸಲು ಸಾಧ್ಯವೋ ಅದರ ದುಪ್ಪಟ್ಟು ಮಂದಿ ಸಂಚರಿಸುತ್ತಿದ್ದಾರೆ. ಇದು ಎನ್ಡಿಎ ಸರ್ಕಾರದ ಆಡಳಿತದ ವೈಖರಿಗೆ ಕನ್ನಡಿ ಹಿಡಿದಿದೆ</blockquote><span class="attribution">- ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟ್ನಾ</strong>: ಛತ್ ಪೂಜೆಯ ಅಂಗವಾಗಿ ಊರಿಗೆ ಮರಳುತ್ತಿರುವ ಬಿಹಾರಿಗಳನ್ನು ಅತ್ಯಂತ ಅಮಾನವೀಯ ಸ್ಥಿತಿಯಲ್ಲಿ ಪ್ರಯಾಣಿಸುವಂತೆ ಕೇಂದ್ರ ಸರ್ಕಾರ ಮಾಡಿದೆ. ಅಲ್ಲದೇ, ಬಿಹಾರಕ್ಕೆ ರೈಲುಗಳ ಸಮರ್ಪಕ ಸಂಚಾರಕ್ಕೆ ವ್ಯವಸ್ಥೆ ಮಾಡಿಲ್ಲ ಎಂದು ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಶನಿವಾರ ಆರೋಪಿಸಿದ್ದಾರೆ. </p>.<p>ರೈಲಿನಲ್ಲಿ ಜನರು ಇಡುಕಿರಿದಿದ್ದು, ವಿಪರೀತ ಕಷ್ಟ ಅನುಭವಿಸುತ್ತಲೇ ಪ್ರಯಾಣಿಸುತ್ತಿರುವ ವಿಡಿಯೊವನ್ನು ಲಾಲೂ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. </p>.<p>‘ದೇಶದಲ್ಲಿರುವ 13,198 ರೈಲುಗಳ ಪೈಕಿ 12000 ರೈಲುಗಳನ್ನು ಛತ್ ಪೂಜೆಯ ಸಲುವಾಗಿ ಬಿಹಾರದ ಪ್ರಯಾಣಕ್ಕೆ ನಿಯೋಜಿಸಲಾಗಿದೆ ಎಂದು ಸುಳ್ಳುಗಳ ಸರದಾರ, ಹುಸಿ ಭರವಸೆಗಳ ನಾಯಕರೊಬ್ಬರು ಹೇಳಿಕೊಂಡಿದ್ದಾರೆ. ಇದು ಕೂಡ ದೊಡ್ಡ ಸುಳ್ಳು. ನನ್ನ ಬಿಹಾರಿ ಜನರನ್ನು ಈ ರೀತಿ ಅಮಾನವೀಯವಾಗಿ ಪ್ರಯಾಣಿಸುವಂತೆ ಮಾಡಲಾಗಿದೆ’ ಎಂದು ಲಾಲೂ ಬರೆದಿದ್ದಾರೆ. </p>.<p>ಛತ್ ಪೂಜೆಗಾಗಿ 12000 ವಿಶೇಷ ರೈಲುಗಳನ್ನು ಬಿಹಾರದಲ್ಲಿ ಸಂಚಾರಕ್ಕಾಗಿ ಭಾರತೀಯ ರೈಲ್ವೆ ನಿಯೋಜಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ಇತ್ತೀಚೆಗಷ್ಟೇ ಬಿಹಾರದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಹೇಳಿದ್ದರು. </p>.<div><blockquote>ಬಿಹಾರದ ರೈಲುಗಳಲ್ಲಿ ಎಷ್ಟು ಜನ ಪಯಣಿಸಲು ಸಾಧ್ಯವೋ ಅದರ ದುಪ್ಪಟ್ಟು ಮಂದಿ ಸಂಚರಿಸುತ್ತಿದ್ದಾರೆ. ಇದು ಎನ್ಡಿಎ ಸರ್ಕಾರದ ಆಡಳಿತದ ವೈಖರಿಗೆ ಕನ್ನಡಿ ಹಿಡಿದಿದೆ</blockquote><span class="attribution">- ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>