ಲೇಹ್ನಲ್ಲಿ ಬುಧವಾರ ನಡೆದ ಪ್ರತಿಭಟನೆ ವೇಳೆ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ
–ಪಿಟಿಐ ಚಿತ್ರ
ಲಡಾಖ್ ಉತ್ಸವ ರದ್ದು
ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ಸಂಘರ್ಷ ಉಲ್ಬಣಗೊಂಡ ಕಾರಣ ಲಡಾಖ್ ಉತ್ಸವದ ಕೊನೆಯ ದಿನದ ಕಾರ್ಯಕ್ರಮಗಳು ರದ್ದುಗೊಂಡಿವೆ. ಉತ್ಸವವು ಭಾನುವಾರದಿಂದ ಆರಂಭಗೊಂಡಿದ್ದು ಸಮಾರೋಪ ಸಮಾರಂಭದಲ್ಲಿ ಲೆಫ್ಟಿನೆಂಟ್ ಗವರ್ನರ್ ಕವಿಂದರ್ ಗುಪ್ತಾ ಅವರು ಪಾಲ್ಗೊಳ್ಳಬೇಕಿತ್ತು. ‘ಅನಿವಾರ್ಯ ಕಾರಣಗಳಿಂದ ಲಡಾಖ್ ಉತ್ಸವದ ಸಮಾರೋಪ ಸಮಾರಂಭವನ್ನು ರದ್ದು ಮಾಡಲಾಗಿದೆ’ ಎಂದು ಆಡಳಿತ ವ್ಯವಸ್ಥೆ ಘೋಷಿಸಿದೆ. ‘ಸ್ಥಳೀಯ ಕಲಾವಿದರು ಸಾಂಸ್ಕೃತಿಕ ತಂಡಗಳು ಪ್ರವಾಸಿಗರು ಮತ್ತು ಲಡಾಖ್ ಜನತೆಗೆ ಉಂಟಾದ ಅನನುಕೂಲಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇವೆ’ ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೇಳಿಕೆ ಬಿಡುಗಡೆ ಮಾಡಿದೆ.