ನವದೆಹಲಿ: ಗಾಜಾದಲ್ಲಿ ಹಮಾಸ್ ಒತ್ತಾಯಾಳಾಗಿರುವ ಇಸ್ರೇಲ್ ನಾಗರಿಕರ ಬಿಡುಗಡೆಗಾಗಿ ಈ ದೀಪಾವಳಿಯಲ್ಲಿ ದೀಪ ಬೆಳಗಿಸಿ ಎಂದು ಭಾರತದಲ್ಲಿರುವ ಇಸ್ರೆಲ್ ರಾಯಭಾರಿ ನೌರ್ ಗಿಲೋನ್ ಅವರು ಭಾರತೀಯರಲ್ಲಿ ಮನವಿ ಮಾಡಿದ್ದಾರೆ.
ದೇಶವು ಹಮಾಸ್ ಉಗ್ರರನ್ನು ನಾಶ ಮಾಡಿದರೆ, ಜನರ ಮೇಲಾಗುವ ಕೆಟ್ಟ ಪರಿಣಾಮವನ್ನು ಕಡಿಮೆ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.
X ತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಗಿಲೋನ್ ‘ 240 ಜನರನ್ನು ಹಮಾಸ್ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದೆ. ಪ್ರತಿ ವರ್ಷ ದೀಪಗಳನ್ನು ಬೆಳಗುವುದರಿಂದ ಶ್ರೀ ರಾಮನು ದೀಪಾವಳಿ ಆಚರಣೆಗೆ ಆಗಮಿಸುತ್ತಾರೆ ಎನ್ನುವ ನಂಬಿಕೆಯಿದೆ. ಅದೇ ರೀತಿ ದೀಪ ಬೆಳಗಿಸುವುದರಿಂದ ನಮ್ಮ ಪ್ರೀತಿ ಪಾತ್ರರು ಸುರಕ್ಷಿತವಾಗಿ ಮರಳಬಹುದು’ ಎಂದು ಬರೆದುಕೊಂಡಿದ್ದಾರೆ.