ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಡಿತರ ಚೀಟಿಗೆ ನಿಜವಾಗಿಯೂ ಅರ್ಹರಾದ ಫಲಾನುಭವಿಗಳನ್ನು ಪಟ್ಟಿಗೆ ಸೇರಿಸಲು ಸರ್ಕಾರವು ಆಧಾರ್ ಜೋಡಣೆಯನ್ನು ಕೈಗೊಂಡಿದೆ. ಜೋಡಣೆ ಬಳಿಕಸುಮಾರು 50 ಲಕ್ಷದಷ್ಟು ಫಲಾನುಭವಿಗಳು ಈ ಸೇವೆಯ ವ್ಯಾಪ್ತಿಯೊಳಗೆ ಬಂದಿಲ್ಲ. ಈ ಫಲಾನುಭವಿಗಳಲ್ಲಿ ಕೆಲವರು ಸಾವಿಗೀಡಾಗಿರಬಹುದು, ಮತ್ತೆ ಕೆಲವರು ಮದುವೆಯಾಗಿ ಬೇರೆಡೆ ಸ್ಥಳಾಂತರಗೊಂಡಿರಬಹುದು.ದುರದೃಷ್ಟವಶಾತ್ ಕೆಲವು ನಕಲಿ ಫಲಾನುಭವಿಗಳೂ ಇದ್ದಾರೆ’ ಎಂದು ಅವರು ವಿವರಿಸಿದ್ದಾರೆ.