ಲೋಕಸಭೆಯಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ಸಹಜೀವನ ಎಂಬ ಹೊಸ ಪಿಡುಗು ಸಮಾಜದಲ್ಲಿ ತಲೆಯೆತ್ತಿದೆ. ಪಾಶ್ಚಾತ್ಯ ದೇಶಗಳಲ್ಲಿ ಸಾಮಾನ್ಯವಾಗಿರುವ ಇಂತಹ ಸಂಬಂಧ ನಮ್ಮ ಸಮಾಜದಲ್ಲೂ ವೇಗವಾಗಿ ಪ್ರಚಾರ ಪಡೆಯುತ್ತಿದ್ದು, ಅದರ ಪರಿಣಾಮಗಳು ಭಯಾನಕವಾಗಿವೆ. ದೆಹಲಿಯಲ್ಲಿ ಆಫ್ತಾಬ್ ಪೂನಾವಾಲಾ ತನ್ನ ಸಹಜೀವನ ಸಂಗಾತಿ ಶ್ರದ್ಧಾ ವಾಲಕರ್ ಅವರನ್ನು ಹತ್ಯೆ ಮಾಡಿದ್ದು ಎಲ್ಲರಿಗೂ ತಿಳಿದಿದೆ. ಅಂತಹ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತಿವೆ’ ಎಂದು ಎಚ್ಚರಿಸಿದರು.