ಈ ಕುರಿತು ಪ್ರತಿಕ್ರಿಯಿಸಿರುವ ಬಾಲಕನ ತಂದೆ ಹರಿ ಪಾಸ್ವಾನ್, ’ಮಗ ಸಿಕ್ಕಿದ್ದು ಸಂತಸ ತಂದಿದೆ. ಕುಟುಂಬದ ಇತರ ಮೂವರು ಸದಸ್ಯರೊಂದಿಗೆ ರಾಮನಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಉಳಿದವರೆಲ್ಲರೂ ಮೃತಪಟ್ಟಿದ್ದಾರೆ. ಆದರೆ ರಾಮನಂದ ಒಂದಷ್ಟು ಗಾಯಗಳೊಂದಿಗೆ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದಾನೆ‘ ಎಂದಿದ್ದಾರೆ.
ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಅಧಿಕಾರಿ ಡಾ. ಬಿ.ಎನ್.ಮೋಹರಾಣಾ ಪ್ರತಿಕ್ರಿಯಿಸಿ, ’ಬಾಲಕ ತನ್ನ ಪಾಲಕರನ್ನು ಗುರುತಿಸಿದ ತಕ್ಷಣ ಟಿ.ವಿ. ಚಾನಲ್ ಅನ್ನು ಸಂಪರ್ಕಿಸಲಾಯಿತು. ಅದರ ವಿಡಿಯೊ ತರಿಸಿ ಮತ್ತೊಮ್ಮೆ ತೋರಿಸಲಾಯಿತು. ತನ್ನ ಪಾಲಕರನ್ನು ರಾಮದಾನ್ ಗುರುತಿಸಿದ. ಹೀಗಾಗಿ ಆತನ ಪಾಲಕರನ್ನು ಆಸ್ಪತ್ರೆಗೆ ಕರೆಯಿಸಲಾಯಿತು‘ ಎಂದರು.