ಜಮ್ಮು : ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಕದನ ವಿರಾಮ ಉಲ್ಲಂಘಿಸಿದ್ದು,ಮಂಗಳವಾರವೂ ಗುಂಡಿನ ದಾಳಿ ಮುಂದುವರಿಸಿದೆ.
ಪೂಂಛ್ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭಾರತದ ಯೋಧರೊಬ್ಬರು ಹುತಾತ್ಮರಾಗಿದ್ದು, ನಾಲ್ವರು ಯೋಧರು ಗಾಯಗೊಂಡಿದ್ದಾರೆ. ಹುತಾತ್ಮ ಯೋಧ ನಾಯಕ್ ರವಿ ರಂಜನ್ ಕುಮಾರ್ ಸಿಂಗ್ (36)ಬಿಹಾರದ ಗೋಪಿ ಬಿಘ ಗ್ರಾಮದವರು.
ಮೆಂದರ್ ಮತ್ತು ಕೃಷ್ಣಘಾಟಿ ವಿಭಾಗದಲ್ಲೂನಾಗರಿಕರು ಮತ್ತು ಸೇನೆಯ ಗಡಿ ಠಾಣೆಗಳನ್ನುಗುರಿಯಾಗಿಸಿ ಪಾಕ್ ದಾಳಿ ನಡೆಸಿದೆ. ಭಾರತದ ಯೋಧರು ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.