‘ಇಂಡಿಯಾ’ ಕೂಟಕ್ಕೆ ‘ಮಹಾ’ ಸಂಕಟ
ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಮಿತ್ರಪಕ್ಷಗಳಿಗಿಂತ ಹೆಚ್ಚು ಸ್ಥಾನ ಗೆದ್ದಿರುವ ಕಾಂಗ್ರೆಸ್ ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿಯೂ ಹೆಚ್ಚು ಸ್ಥಾನಗಳನ್ನು ಕೇಳುವ ಸಂಭವವಿದೆ. ಆಗ ಲೋಕಸಭಾ ಚುನಾವಣೆಯಲ್ಲಿ ನಡೆದ ರೀತಿಯಲ್ಲಿಯೇ ಸೀಟು ಹಂಚಿಕೆಯ ವಿಚಾರದಲ್ಲಿ ದೀರ್ಘ ಮಾತುಕತೆಗಳು ನಡೆಯಲಿವೆ. ಇನ್ನೊಂದೆಡೆ ಶಿವಸೇನಾ (ಯುಬಿಟಿ) ಮತ್ತು ಎನ್ಸಿಪಿ (ಶರದ್ ಪವಾರ್ ಬಣ) ತಮ್ಮ ಪಕ್ಷ ಬಿಟ್ಟು ಹೊರಹೋಗಿದ್ದವರನ್ನು ಮತ್ತೆ ಸೆಳೆಯುವ ಪ್ರಯತ್ನದಲ್ಲಿದ್ದು ಈಗಾಗಲೇ ಹಲವರು ಉದ್ಧವ್ ಹಾಗೂ ಶರದ್ ಪವಾರ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ. ಇದೆಲ್ಲದರಿಂದಾಗಿ ‘ಇಂಡಿಯಾ’ ಕೂಟಕ್ಕೆ ಮಹಾರಾಷ್ಟ್ರದಲ್ಲಿ ಮುಂದಿನ ದಿನಗಳು ತುಂಬಾ ಸವಾಲಿನದ್ದಾಗಿರಲಿವೆ.