ವಿರೋಧಪಕ್ಷಗಳ ಕೆಲವು ಸದಸ್ಯರು ವ್ಯಕ್ತಪಡಿಸಿದ ಕಳವಳಕ್ಕೆ ಸ್ಪಷ್ಟನೆ ನೀಡಿದ ಗೃಹಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್, ‘ಇದು ಯಾವುದೇ ಧರ್ಮ ಅಥವಾ ಎನ್ಜಿಒ ವಿರುದ್ಧದ ಮಸೂದೆಯಲ್ಲ. ವಿದೇಶಿ ದೇಣಿಗೆಯನ್ನು ದುರ್ಬಳಕೆ ಮಾಡುವುದನ್ನು ತಡೆಯಲು ಸಹಾಯಕವಾಗಲಿದೆ. ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಈ ಮಸೂದೆಯ ಅಗತ್ಯವಿದೆ’ ಎಂದರು.