‘ಡಾರ್ಜಿಲಿಂಗ್ಗೆ ಹೊರಗಿನವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿರುವುದು ಇದು ನಾಲ್ಕನೇ ಬಾರಿ. ಇಂಥವರು ಜನರ ನೈಜ ಸಮಸ್ಯೆಯ ಬಗ್ಗೆ ಧ್ವನಿ ಎತ್ತುವುದಿಲ್ಲ. ಇದು ಡಾರ್ಜಿಲಿಂಗ್ನ 17 ಲಕ್ಷ ಮತದಾರರಿಗೆ ದೊಡ್ಡ ಹೊಡೆತ’ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಮಿಕ್ ಭಟ್ಟಾಚಾರ್ಯ, ‘ಬಿಸ್ತಾ ಅವರನ್ನು ಮತ್ತೆ ಕಣಕ್ಕಿಳಿಸಿರುವ ನಿರ್ಧಾರ ಅಂತಿಮ. ಪಕ್ಷ ಈ ಬಗ್ಗೆ ಒಗ್ಗಟ್ಟಾಗಿದೆ. ಹಿಂದಿಗಿಂತ ಹೆಚ್ಚು ಅಂತರದಿಂದ ಬಿಸ್ತಾ ಗೆಲ್ಲಲಿದ್ದಾರೆ’ ಎಂದು ಹೇಳಿದ್ದಾರೆ.