<p><strong>ಪುಣೆ</strong>: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮಂಗಳವಾರ ಸೋಲಾಪುರ ಜಿಲ್ಲೆಯ ಪಂಢರಾಪುರ ಪಟ್ಟಣದ ದೇವಸ್ಥಾನವೊಂದರಲ್ಲಿ ಆಶಾಡ ಏಕಾದಶಿ ಸಂದರ್ಭದಲ್ಲಿ ವಿಠ್ಹಲ ಮತ್ತು ರುಕ್ಮಿಣಿ ದೇವರಿಗೆ ಮಹಾ ಪೂಜೆ ಸಲ್ಲಿಸಿದರು. ಈ ವೇಳೆ ಕೋವಿಡ್ ಬಿಕ್ಕಟ್ಟು ಆದಷ್ಟು ಬೇಗ ತೊಲಗಲಿ ಹಾಗೂ ಎಲ್ಲರೂ ಆರೋಗ್ಯದಿಂದ ಇರಲಿ ಎಂದು ಅವರು ಪ್ರಾರ್ಥಿಸಿದರು.</p>.<p>ಹಲವು ವರ್ಷಗಳ ಸಂಪ್ರದಾಯದಂತೆ ‘ಆಷಾಢ ಏಕಾದಶಿ’ಯಂದು ಮುಖ್ಯಮಂತ್ರಿಗಳು ತಮ್ಮ ಪತ್ನಿ ರಶ್ಮಿ ಠಾಕ್ರೆ ಅವರೊಂದಿಗೆ ಬೆಳಿಗ್ಗೆ 2.30ಕ್ಕೆ ಮಹಾ ಪೂಜೆ ನೆರವೇರಿಸಿದರು. ‘ಆಷಾಢ ಏಕಾದಶಿ’ಯು ಹಿಂದೂ ಹಬ್ಬಗಳಲ್ಲಿ ಪ್ರಮುಖವಾದದ್ದು. ಈ ದಿನದಂದು ರಾಜ್ಯದಾದ್ಯಂತ ಭಕ್ತಾದಿಗಳು ಕಾಲ್ನಡಿಗೆ ಮೂಲಕ (ವಾರಿ ಯಾತ್ರೆ) ಪಂಢರಪುರ ದೇವಸ್ಥಾನಕ್ಕೆ ಬರುತ್ತಾರೆ. ಈ ದಿನದಂದೇ ವಾರಿ ಯಾತ್ರೆ ಪ್ರಾರಂಭಗೊಳ್ಳುತ್ತದೆ. ಈ ಯಾತ್ರೆಗೆ ಬರುವ ಭಕ್ತರನ್ನು ವಾರ್ಕಾರಿಗಳು ಎಂದೂ ಕರೆಯಲಾಗುತ್ತದೆ.</p>.<p>ಪೂಜೆ ಬಳಿಕ ಮಾತನಾಡಿದ ಠಾಕ್ರೆ, ‘ಪಂಢರಾಪುರದಲ್ಲಿ ಭಕ್ತಿ ಸಾಗರ ಹರಿಯಲಿ. ವಾರ್ಕಾರಿಗಳು ಕಾಲ್ನಡಿಗೆ ಮೂಲಕ ದೇವಸ್ಥಾನಕ್ಕೆ ಬರಲು ದೇವರು ಅವಕಾಶ ಕಲ್ಪಿಸಲಿ. ಕೋವಿಡ್–19 ಆದಷ್ಟು ಬೇಗ ನಿವಾರಣೆ ಆಗಲಿ ಹಾಗೂ ಜನರು ಆರೋಗ್ಯವಂತರಾಗಿರಲಿ ಎಂದು ಪ್ರಾರ್ಥಿಸಿದ್ದೇನೆ’ ಎಂದರು.</p>.<p>‘ಪ್ರತಿವರ್ಷ ಹಲವಾರು ಭಕ್ತರು ಕಾಲ್ನಡಿಗೆ ಮೂಲಕ ಇಲ್ಲಿಗೆ ಭೇಟಿ ನೀಡುತ್ತಾರೆ. ಇದರಿಂದ ಅವರಲ್ಲಿ ಭಕ್ತಿ ಮತ್ತು ಆತ್ಮ ವಿಶ್ವಾಸ ಹೆಚ್ಚುತ್ತದೆ. ಜೀವನದ ಸವಾಲುಗಳನ್ನು ಎದುರಿಸಲು ಜನರಿಗೆ ಆತ್ಮ ವಿಶ್ವಾಸ ಅತಿ ಅಗತ್ಯವಾಗಿದೆ’ ಎಂದು ಅವರು ಹೇಳಿದರು.</p>.<p>ಈ ವೇಳೆ ಅವರ ಪುತ್ರ ಆದಿತ್ಯ ಠಾಕ್ರೆ ಅವರೂ ಉಪಸ್ಥಿತರಿದ್ದರು. ವಾರ್ಕಾರಿ ದಂಪತಿ ಕೇಶವ ಕೊಲ್ಟೆ ಮತ್ತು ಇಂದೂಭಾಯಿ ಕೊಲ್ಟೆ ಅವರು ಠಾಕ್ರೆ ಕುಟುಂಬದೊಂದಿಗೆ ದೇವರಿಗೆ ಪೂಜೆ ಸಲ್ಲಿಸಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುಣೆ</strong>: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮಂಗಳವಾರ ಸೋಲಾಪುರ ಜಿಲ್ಲೆಯ ಪಂಢರಾಪುರ ಪಟ್ಟಣದ ದೇವಸ್ಥಾನವೊಂದರಲ್ಲಿ ಆಶಾಡ ಏಕಾದಶಿ ಸಂದರ್ಭದಲ್ಲಿ ವಿಠ್ಹಲ ಮತ್ತು ರುಕ್ಮಿಣಿ ದೇವರಿಗೆ ಮಹಾ ಪೂಜೆ ಸಲ್ಲಿಸಿದರು. ಈ ವೇಳೆ ಕೋವಿಡ್ ಬಿಕ್ಕಟ್ಟು ಆದಷ್ಟು ಬೇಗ ತೊಲಗಲಿ ಹಾಗೂ ಎಲ್ಲರೂ ಆರೋಗ್ಯದಿಂದ ಇರಲಿ ಎಂದು ಅವರು ಪ್ರಾರ್ಥಿಸಿದರು.</p>.<p>ಹಲವು ವರ್ಷಗಳ ಸಂಪ್ರದಾಯದಂತೆ ‘ಆಷಾಢ ಏಕಾದಶಿ’ಯಂದು ಮುಖ್ಯಮಂತ್ರಿಗಳು ತಮ್ಮ ಪತ್ನಿ ರಶ್ಮಿ ಠಾಕ್ರೆ ಅವರೊಂದಿಗೆ ಬೆಳಿಗ್ಗೆ 2.30ಕ್ಕೆ ಮಹಾ ಪೂಜೆ ನೆರವೇರಿಸಿದರು. ‘ಆಷಾಢ ಏಕಾದಶಿ’ಯು ಹಿಂದೂ ಹಬ್ಬಗಳಲ್ಲಿ ಪ್ರಮುಖವಾದದ್ದು. ಈ ದಿನದಂದು ರಾಜ್ಯದಾದ್ಯಂತ ಭಕ್ತಾದಿಗಳು ಕಾಲ್ನಡಿಗೆ ಮೂಲಕ (ವಾರಿ ಯಾತ್ರೆ) ಪಂಢರಪುರ ದೇವಸ್ಥಾನಕ್ಕೆ ಬರುತ್ತಾರೆ. ಈ ದಿನದಂದೇ ವಾರಿ ಯಾತ್ರೆ ಪ್ರಾರಂಭಗೊಳ್ಳುತ್ತದೆ. ಈ ಯಾತ್ರೆಗೆ ಬರುವ ಭಕ್ತರನ್ನು ವಾರ್ಕಾರಿಗಳು ಎಂದೂ ಕರೆಯಲಾಗುತ್ತದೆ.</p>.<p>ಪೂಜೆ ಬಳಿಕ ಮಾತನಾಡಿದ ಠಾಕ್ರೆ, ‘ಪಂಢರಾಪುರದಲ್ಲಿ ಭಕ್ತಿ ಸಾಗರ ಹರಿಯಲಿ. ವಾರ್ಕಾರಿಗಳು ಕಾಲ್ನಡಿಗೆ ಮೂಲಕ ದೇವಸ್ಥಾನಕ್ಕೆ ಬರಲು ದೇವರು ಅವಕಾಶ ಕಲ್ಪಿಸಲಿ. ಕೋವಿಡ್–19 ಆದಷ್ಟು ಬೇಗ ನಿವಾರಣೆ ಆಗಲಿ ಹಾಗೂ ಜನರು ಆರೋಗ್ಯವಂತರಾಗಿರಲಿ ಎಂದು ಪ್ರಾರ್ಥಿಸಿದ್ದೇನೆ’ ಎಂದರು.</p>.<p>‘ಪ್ರತಿವರ್ಷ ಹಲವಾರು ಭಕ್ತರು ಕಾಲ್ನಡಿಗೆ ಮೂಲಕ ಇಲ್ಲಿಗೆ ಭೇಟಿ ನೀಡುತ್ತಾರೆ. ಇದರಿಂದ ಅವರಲ್ಲಿ ಭಕ್ತಿ ಮತ್ತು ಆತ್ಮ ವಿಶ್ವಾಸ ಹೆಚ್ಚುತ್ತದೆ. ಜೀವನದ ಸವಾಲುಗಳನ್ನು ಎದುರಿಸಲು ಜನರಿಗೆ ಆತ್ಮ ವಿಶ್ವಾಸ ಅತಿ ಅಗತ್ಯವಾಗಿದೆ’ ಎಂದು ಅವರು ಹೇಳಿದರು.</p>.<p>ಈ ವೇಳೆ ಅವರ ಪುತ್ರ ಆದಿತ್ಯ ಠಾಕ್ರೆ ಅವರೂ ಉಪಸ್ಥಿತರಿದ್ದರು. ವಾರ್ಕಾರಿ ದಂಪತಿ ಕೇಶವ ಕೊಲ್ಟೆ ಮತ್ತು ಇಂದೂಭಾಯಿ ಕೊಲ್ಟೆ ಅವರು ಠಾಕ್ರೆ ಕುಟುಂಬದೊಂದಿಗೆ ದೇವರಿಗೆ ಪೂಜೆ ಸಲ್ಲಿಸಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>