‘ರಾಜ್ಯ ಸರ್ಕಾರದ ವಿಮಾನವನ್ನು ಮುಂಚಿತವಾಗಿಯೇ ಬುಕ್ ಮಾಡಲಾಗಿತ್ತು. ಆದರೆ ಕೊನೆಯ ಕ್ಷಣದವರೆಗೆ ಇದಕ್ಕೆ ಅನುಮತಿ ಸಿಕ್ಕಿರಲಿಲ್ಲ. ಸಾಮಾನ್ಯವಾಗಿ ರಾಜ್ಯಪಾಲರು ಅನುಮತಿಗಾಗಿ ಕಾಯುವುದಿಲ್ಲ. ಆದರೆ ಇಂದು ರಾಜ್ಯಪಾಲರು ವಿಮಾನದಲ್ಲಿ ಕುಳಿತಾಗ, ಪೈಲಟ್, ನಿಮ್ಮ ಪ್ರಯಾಣಕ್ಕೆ ಅನುಮತಿ ಸಿಕ್ಕಿಲ್ಲ ಎಂಬುದಾಗಿ ಹೇಳಿದ್ದಾರೆ. ಬಳಿಕ ಮಧ್ಯಾಹ್ನ 12.15ಕ್ಕೆ ಕೋಶಿಯಾರಿ ಅವರು ವಾಣಿಜ್ಯ ಬಳಕೆಯ ವಿಮಾನದ ಮೂಲಕ ಡೆಹ್ರಾಡೂನ್ನತ್ತ ಪ್ರಯಾಣ ಬೆಳೆಸಿದರು’ ಎಂದು ಮೂಲಗಳು ಮಾಹಿತಿ ನೀಡಿವೆ.