<p><strong>ಮುಂಬೈ</strong>: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗೆ ಕೆಲ ದಿನಗಳು ಬಾಕಿ ಉಳಿದಿದ್ದು, ರಾಜ್ಯದಾದ್ಯಂತ ಪುರಸಭೆ ಮತ್ತು ನಗರಸಭೆಗಳಲ್ಲಿ ಬಿಜೆಪಿಯ 100 ಕೌನ್ಸಿಲರ್ಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ರವೀಂದ್ರ ಚವಾಣ್ ಹೇಳಿದ್ದಾರೆ.</p><p>ಪುರಸಭೆಗಳ ಅಧ್ಯಕ್ಷರಾಗಿ ಮೂವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ.</p><p>‘ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ನಾಯಕತ್ವದಿಂದಾಗಿ, ಮತದಾನಕ್ಕೂ ಮುಂಚೆಯೇ ಬಿಜೆಪಿಯ 100 ಅಭ್ಯರ್ಥಿಗಳು ಕೌನ್ಸಿಲರ್ಗಳಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ’ಎಂದು ಚವಾಣ್ ನಾಮಪತ್ರ ಹಿಂಪಡೆಯಲು ಕೊನೆಯ ದಿನ ಹೇಳಿದರು.</p><p>100 ಕೌನ್ಸಿಲರ್ಗಳಲ್ಲಿ, ನಾಲ್ವರು ಕರಾವಳಿ ಕೊಂಕಣ ಪ್ರದೇಶದಿಂದ, 49 ಮಂದಿ ಉತ್ತರ ಮಹಾರಾಷ್ಟ್ರದಿಂದ, 41 ಮಂದಿ ಪಶ್ಚಿಮ ಮಹಾರಾಷ್ಟ್ರದಿಂದ ಮತ್ತು ತಲಾ ಮೂವರು ಮರಾಠವಾಡ ಹಾಗೂ ವಿದರ್ಭ ಪ್ರದೇಶಗಳಿಂದ ಆಯ್ಕೆಯಾಗಿದ್ದಾರೆ.</p><p>ಡಿಸೆಂಬರ್ 2ರಂದು 246 ಪುರಸಭೆಗಳು ಮತ್ತು 42 ನಗರಸಭೆಗಳಿಗೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಮತಗಳ ಎಣಿಕೆ ನಡೆಯಲಿದೆ.</p><p>ಅವಿರೋಧವಾಗಿ ಆಯ್ಕೆಯಾದವರ ಪೈಕಿ ಅನೇಕರು ಬಿಜೆಪಿ ನಾಯಕರ ಸಂಬಂಧಿಕರಾಗಿದ್ದಾರೆ. ಬಿಜೆಪಿಯ ವಂಶಪಾರಂಪರ್ಯ ರಾಜಕಾರಣದ ಸಂಪ್ರದಾಯವು ಈಗ ತಳಮಟ್ಟದ ಚುನಾವಣೆಗಳನ್ನು ತಲುಪಿದೆ ಮತ್ತು ನಾಯಕರ ಸಂಬಂಧಿಕರು ಅವಿರೋಧ ಗೆಲುವು ಸಾಧಿಸಲು ಪೊಲೀಸರನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.</p><p>ಜಾಮ್ನೇರ್ನಲ್ಲಿ, ಕಾಂಗ್ರೆಸ್ ಅಭ್ಯರ್ಥಿ ರೂಪಾಲಿ ಲಾಲ್ವಾನಿ ಮತ್ತು ಇಬ್ಬರು ಎನ್ಸಿಪಿ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದ ನಂತರ ಜಲಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಅವರ ಪತ್ನಿ ಸಾಧನಾ ಮಹಾಜನ್ ಅವರು ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದರು.</p><p>ವಿರೋಧ ಪಕ್ಷದ ಅಭ್ಯರ್ಥಿ ಶರ್ಯು ಭಾವ್ಸರ್ ಅವರ ನಾಮಪತ್ರ ತಿರಸ್ಕೃತವಾದ ನಂತರ ಮಾರುಕಟ್ಟೆ ಸಚಿವ ಜಯಕುಮಾರ್ ರಾವಲ್ ಅವರ ತಾಯಿ ನಯನ್ ಕುನ್ವರ್ ರಾವಲ್ ಅವರು ಧುಲೆ ಜಿಲ್ಲೆಯ ದೊಂಡೈಚಾ-ವರ್ವಾಡೆ ಪುರಸಭೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.</p><p>ಸಚಿವರ ಒತ್ತಡದ ಮೇರೆಗೆ ನಾಮಪತ್ರ ತಿರಸ್ಕೃತವಾಗಿದೆ ಎಂದು ಭಾವ್ಸರ್ ಆರೋಪಿಸಿದ್ದಾರೆ.</p><p>ಚಿಕಲ್ದಾರಾ ಪುರಸಭೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಸೋದರಸಂಬಂಧಿ ಅಲ್ಹಾದ್ ಕಲೋಟಿ ಅವರ ಅವಿರೋಧ ಗೆಲುವು ಮತ್ತೊಂದು ಪ್ರಮುಖ ಅವಿರೋಧ ಆಯ್ಕೆಯಾಗಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗೆ ಕೆಲ ದಿನಗಳು ಬಾಕಿ ಉಳಿದಿದ್ದು, ರಾಜ್ಯದಾದ್ಯಂತ ಪುರಸಭೆ ಮತ್ತು ನಗರಸಭೆಗಳಲ್ಲಿ ಬಿಜೆಪಿಯ 100 ಕೌನ್ಸಿಲರ್ಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ರವೀಂದ್ರ ಚವಾಣ್ ಹೇಳಿದ್ದಾರೆ.</p><p>ಪುರಸಭೆಗಳ ಅಧ್ಯಕ್ಷರಾಗಿ ಮೂವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ.</p><p>‘ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ನಾಯಕತ್ವದಿಂದಾಗಿ, ಮತದಾನಕ್ಕೂ ಮುಂಚೆಯೇ ಬಿಜೆಪಿಯ 100 ಅಭ್ಯರ್ಥಿಗಳು ಕೌನ್ಸಿಲರ್ಗಳಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ’ಎಂದು ಚವಾಣ್ ನಾಮಪತ್ರ ಹಿಂಪಡೆಯಲು ಕೊನೆಯ ದಿನ ಹೇಳಿದರು.</p><p>100 ಕೌನ್ಸಿಲರ್ಗಳಲ್ಲಿ, ನಾಲ್ವರು ಕರಾವಳಿ ಕೊಂಕಣ ಪ್ರದೇಶದಿಂದ, 49 ಮಂದಿ ಉತ್ತರ ಮಹಾರಾಷ್ಟ್ರದಿಂದ, 41 ಮಂದಿ ಪಶ್ಚಿಮ ಮಹಾರಾಷ್ಟ್ರದಿಂದ ಮತ್ತು ತಲಾ ಮೂವರು ಮರಾಠವಾಡ ಹಾಗೂ ವಿದರ್ಭ ಪ್ರದೇಶಗಳಿಂದ ಆಯ್ಕೆಯಾಗಿದ್ದಾರೆ.</p><p>ಡಿಸೆಂಬರ್ 2ರಂದು 246 ಪುರಸಭೆಗಳು ಮತ್ತು 42 ನಗರಸಭೆಗಳಿಗೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3ರಂದು ಮತಗಳ ಎಣಿಕೆ ನಡೆಯಲಿದೆ.</p><p>ಅವಿರೋಧವಾಗಿ ಆಯ್ಕೆಯಾದವರ ಪೈಕಿ ಅನೇಕರು ಬಿಜೆಪಿ ನಾಯಕರ ಸಂಬಂಧಿಕರಾಗಿದ್ದಾರೆ. ಬಿಜೆಪಿಯ ವಂಶಪಾರಂಪರ್ಯ ರಾಜಕಾರಣದ ಸಂಪ್ರದಾಯವು ಈಗ ತಳಮಟ್ಟದ ಚುನಾವಣೆಗಳನ್ನು ತಲುಪಿದೆ ಮತ್ತು ನಾಯಕರ ಸಂಬಂಧಿಕರು ಅವಿರೋಧ ಗೆಲುವು ಸಾಧಿಸಲು ಪೊಲೀಸರನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.</p><p>ಜಾಮ್ನೇರ್ನಲ್ಲಿ, ಕಾಂಗ್ರೆಸ್ ಅಭ್ಯರ್ಥಿ ರೂಪಾಲಿ ಲಾಲ್ವಾನಿ ಮತ್ತು ಇಬ್ಬರು ಎನ್ಸಿಪಿ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದ ನಂತರ ಜಲಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಅವರ ಪತ್ನಿ ಸಾಧನಾ ಮಹಾಜನ್ ಅವರು ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದರು.</p><p>ವಿರೋಧ ಪಕ್ಷದ ಅಭ್ಯರ್ಥಿ ಶರ್ಯು ಭಾವ್ಸರ್ ಅವರ ನಾಮಪತ್ರ ತಿರಸ್ಕೃತವಾದ ನಂತರ ಮಾರುಕಟ್ಟೆ ಸಚಿವ ಜಯಕುಮಾರ್ ರಾವಲ್ ಅವರ ತಾಯಿ ನಯನ್ ಕುನ್ವರ್ ರಾವಲ್ ಅವರು ಧುಲೆ ಜಿಲ್ಲೆಯ ದೊಂಡೈಚಾ-ವರ್ವಾಡೆ ಪುರಸಭೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.</p><p>ಸಚಿವರ ಒತ್ತಡದ ಮೇರೆಗೆ ನಾಮಪತ್ರ ತಿರಸ್ಕೃತವಾಗಿದೆ ಎಂದು ಭಾವ್ಸರ್ ಆರೋಪಿಸಿದ್ದಾರೆ.</p><p>ಚಿಕಲ್ದಾರಾ ಪುರಸಭೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಸೋದರಸಂಬಂಧಿ ಅಲ್ಹಾದ್ ಕಲೋಟಿ ಅವರ ಅವಿರೋಧ ಗೆಲುವು ಮತ್ತೊಂದು ಪ್ರಮುಖ ಅವಿರೋಧ ಆಯ್ಕೆಯಾಗಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>