<p><strong>ಶೆಗಾಂವ್ (ಮಹಾರಾಷ್ಟ್ರ):</strong> ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ, ವಿಚಾರವಾದಿ ತುಷಾರ್ ಗಾಂಧಿ ಅವರು ಶುಕ್ರವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಇಲ್ಲಿ ‘ಭಾರತ್ ಜೋಡೊ ಯಾತ್ರೆ’ಯಲ್ಲಿ ಹೆಜ್ಜೆ ಹಾಕಿದರು. ಇಬ್ಬರ ಈ ನಡಿಗೆಯನ್ನು ‘ಐತಿಹಾಸಿಕ’ ಎಂದುಕಾಂಗ್ರೆಸ್ ಬಣ್ಣಿಸಿದೆ.</p>.<p>‘ಜವಾಹರಲಾಲ್ ನೆಹರೂ ಅವರ ಮರಿ ಮೊಮ್ಮಗ ಹಾಗೂ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ಭಾರತವನ್ನು ಒಗ್ಗೂಡಿಸುವ ಈ ನಡಿಗೆಯಲ್ಲಿ ಪಾಲ್ಗೊಂಡಿದ್ದು, ಇಬ್ಬರೂ ಹಿರಿಯ ನಾಯಕರ ಪರಂಪರೆಯ ಮುಂದುವರಿಸಿದ್ದಾರೆ’ ಎಂದು ಪಕ್ಷ ಅಭಿಪ್ರಾಯಪಟ್ಟಿದೆ.</p>.<p>‘ಆಡಳಿತಾರೂಢರು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಒಡ್ಡಬಹುದೇ ಹೊರೆತು ದಮನ ಮಾಡಲು ಸಾಧ್ಯವಿಲ್ಲ ಎಂದು ಈ ಇಬ್ಬರ ನಡಿಗೆಯು ಸಾರಿದೆ’ ಎಂದು ಕಾಂಗ್ರೆಸ್ ಹೇಳಿದೆ.</p>.<p>ಯಾತ್ರೆಯಲ್ಲಿ ಪಾಲ್ಗೊಳ್ಳುವ ಕುರಿತು ತುಷಾರ್ ಗಾಂಧಿ ಅವರು ಗುರುವಾರ ಟ್ವೀಟ್ ಮಾಡಿದ್ದರು. ‘ಶೆಗಾಂವ್ ನನ್ನ ಹುಟ್ಟೂರಾಗಿದೆ. ಆದ್ದರಿಂದ ನಾನು ಭಾರತ್ ಜೋಡೊ ಯಾತ್ರೆಯಲ್ಲಿ ಈ ಊರಿನಿಂದಲೇ ಪಾಲ್ಗೊಳ್ಳುವೆ’ ಎಂದಿದ್ದರು. ನೆಹರೂ ಹಾಗೂ ಮಹಾತ್ಮ ಗಾಂಧಿ ಅವರಿಬ್ಬರೂ ಒಟ್ಟಿಗಿದ್ದ ಫೋಟೊವನ್ನೂ ತುಷಾರ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು.</p>.<p>ಕಾರ್ಗಿಲ್ ಯುದ್ಧದ ಹೀರೊ ಎಂದೇ ಖ್ಯಾತರಾಗಿರುವ ನಾಯಕ್ ದೀಪ್ಚಂದ್ ಮತ್ತು ಬಾಲಿವುಡ್ ನಟಿ ಮೋನಾ ಅಂಬೇಗಾವ್ಕರ್ ಅವರು ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಅವರ ಜೊತೆ ಯಾತ್ರೆಯಲ್ಲಿ ಪಾಲ್ಗೊಂಡರು.</p>.<p><strong>ಮಹಿಳೆಯರ ಹೆಜ್ಜೆ:</strong> ‘ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನದ ಅಂಗವಾಗಿ ಶನಿವಾರ (ನ.19) ರಾಹುಲ್ ಗಾಂಧಿ ಅವರೊಂದಿಗೆ ಕೇವಲ ಮಹಿಳೆಯರು ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ.</p>.<p>‘ಪಕ್ಷದ ಶಾಸಕಿಯರು, ಮಹಿಳಾ ಸಂಸದರು ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳ ಕಾಂಗ್ರಸ್ನ ಮಹಿಳಾ ಸದಸ್ಯರು, ಮಹಿಳಾ ಕಾರ್ಯಕರ್ತೆಯರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ’ ಎಂದರು.</p>.<p class="Briefhead"><strong>ಮಹಾರಾಷ್ಟ್ರದಲ್ಲಿ ಮುಕ್ತಾಯಗೊಂಡ ಯಾತ್ರೆ<br />ಮ</strong>ಹಾರಾಷ್ಟ್ರದಲ್ಲಿ 12 ದಿನಗಳ ‘ಭಾರತ್ ಜೋಡೊ ಯಾತ್ರೆ’ಯು ಪೂರ್ಣಗೊಂಡಿದೆ. ಈ ವೇಳೆ ಬುಲ್ದಾನ ಜಿಲ್ಲೆಯ ಶೆಗಾಂವ್ನಲ್ಲಿ ರಾಹುಲ್ ಗಾಂಧಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದರು.</p>.<p>‘ತಮ್ಮ ಬೆಳೆಗೆ ಉತ್ತಮ ಬೆಲೆ ಸಿಗದೆ, ಬೆಲೆ ವಿಮೆ ಸೌಲಭ್ಯ ಇಲ್ಲದೆ ಮಹಾರಾಷ್ಟ್ರದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ರಾಹುಲ್ ಗಾಂಧಿ ಹೇಳಿದರು.</p>.<p>‘ಪ್ರಧಾನಿ ಮೋದಿ ಮತ್ತು ಇಲ್ಲಿನ ಮುಖ್ಯಮಂತ್ರಿ, ಜನರ ಕಷ್ಟಗಳನ್ನು ಪ್ರೀತಿಯಿಂದ ಕೇಳಿದರೆ, ಯಾವ ರೈತನು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶೆಗಾಂವ್ (ಮಹಾರಾಷ್ಟ್ರ):</strong> ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ, ವಿಚಾರವಾದಿ ತುಷಾರ್ ಗಾಂಧಿ ಅವರು ಶುಕ್ರವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಇಲ್ಲಿ ‘ಭಾರತ್ ಜೋಡೊ ಯಾತ್ರೆ’ಯಲ್ಲಿ ಹೆಜ್ಜೆ ಹಾಕಿದರು. ಇಬ್ಬರ ಈ ನಡಿಗೆಯನ್ನು ‘ಐತಿಹಾಸಿಕ’ ಎಂದುಕಾಂಗ್ರೆಸ್ ಬಣ್ಣಿಸಿದೆ.</p>.<p>‘ಜವಾಹರಲಾಲ್ ನೆಹರೂ ಅವರ ಮರಿ ಮೊಮ್ಮಗ ಹಾಗೂ ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಗ ಭಾರತವನ್ನು ಒಗ್ಗೂಡಿಸುವ ಈ ನಡಿಗೆಯಲ್ಲಿ ಪಾಲ್ಗೊಂಡಿದ್ದು, ಇಬ್ಬರೂ ಹಿರಿಯ ನಾಯಕರ ಪರಂಪರೆಯ ಮುಂದುವರಿಸಿದ್ದಾರೆ’ ಎಂದು ಪಕ್ಷ ಅಭಿಪ್ರಾಯಪಟ್ಟಿದೆ.</p>.<p>‘ಆಡಳಿತಾರೂಢರು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಒಡ್ಡಬಹುದೇ ಹೊರೆತು ದಮನ ಮಾಡಲು ಸಾಧ್ಯವಿಲ್ಲ ಎಂದು ಈ ಇಬ್ಬರ ನಡಿಗೆಯು ಸಾರಿದೆ’ ಎಂದು ಕಾಂಗ್ರೆಸ್ ಹೇಳಿದೆ.</p>.<p>ಯಾತ್ರೆಯಲ್ಲಿ ಪಾಲ್ಗೊಳ್ಳುವ ಕುರಿತು ತುಷಾರ್ ಗಾಂಧಿ ಅವರು ಗುರುವಾರ ಟ್ವೀಟ್ ಮಾಡಿದ್ದರು. ‘ಶೆಗಾಂವ್ ನನ್ನ ಹುಟ್ಟೂರಾಗಿದೆ. ಆದ್ದರಿಂದ ನಾನು ಭಾರತ್ ಜೋಡೊ ಯಾತ್ರೆಯಲ್ಲಿ ಈ ಊರಿನಿಂದಲೇ ಪಾಲ್ಗೊಳ್ಳುವೆ’ ಎಂದಿದ್ದರು. ನೆಹರೂ ಹಾಗೂ ಮಹಾತ್ಮ ಗಾಂಧಿ ಅವರಿಬ್ಬರೂ ಒಟ್ಟಿಗಿದ್ದ ಫೋಟೊವನ್ನೂ ತುಷಾರ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದರು.</p>.<p>ಕಾರ್ಗಿಲ್ ಯುದ್ಧದ ಹೀರೊ ಎಂದೇ ಖ್ಯಾತರಾಗಿರುವ ನಾಯಕ್ ದೀಪ್ಚಂದ್ ಮತ್ತು ಬಾಲಿವುಡ್ ನಟಿ ಮೋನಾ ಅಂಬೇಗಾವ್ಕರ್ ಅವರು ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಅವರ ಜೊತೆ ಯಾತ್ರೆಯಲ್ಲಿ ಪಾಲ್ಗೊಂಡರು.</p>.<p><strong>ಮಹಿಳೆಯರ ಹೆಜ್ಜೆ:</strong> ‘ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನದ ಅಂಗವಾಗಿ ಶನಿವಾರ (ನ.19) ರಾಹುಲ್ ಗಾಂಧಿ ಅವರೊಂದಿಗೆ ಕೇವಲ ಮಹಿಳೆಯರು ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ.</p>.<p>‘ಪಕ್ಷದ ಶಾಸಕಿಯರು, ಮಹಿಳಾ ಸಂಸದರು ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳ ಕಾಂಗ್ರಸ್ನ ಮಹಿಳಾ ಸದಸ್ಯರು, ಮಹಿಳಾ ಕಾರ್ಯಕರ್ತೆಯರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ’ ಎಂದರು.</p>.<p class="Briefhead"><strong>ಮಹಾರಾಷ್ಟ್ರದಲ್ಲಿ ಮುಕ್ತಾಯಗೊಂಡ ಯಾತ್ರೆ<br />ಮ</strong>ಹಾರಾಷ್ಟ್ರದಲ್ಲಿ 12 ದಿನಗಳ ‘ಭಾರತ್ ಜೋಡೊ ಯಾತ್ರೆ’ಯು ಪೂರ್ಣಗೊಂಡಿದೆ. ಈ ವೇಳೆ ಬುಲ್ದಾನ ಜಿಲ್ಲೆಯ ಶೆಗಾಂವ್ನಲ್ಲಿ ರಾಹುಲ್ ಗಾಂಧಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದರು.</p>.<p>‘ತಮ್ಮ ಬೆಳೆಗೆ ಉತ್ತಮ ಬೆಲೆ ಸಿಗದೆ, ಬೆಲೆ ವಿಮೆ ಸೌಲಭ್ಯ ಇಲ್ಲದೆ ಮಹಾರಾಷ್ಟ್ರದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ರಾಹುಲ್ ಗಾಂಧಿ ಹೇಳಿದರು.</p>.<p>‘ಪ್ರಧಾನಿ ಮೋದಿ ಮತ್ತು ಇಲ್ಲಿನ ಮುಖ್ಯಮಂತ್ರಿ, ಜನರ ಕಷ್ಟಗಳನ್ನು ಪ್ರೀತಿಯಿಂದ ಕೇಳಿದರೆ, ಯಾವ ರೈತನು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>