<p><strong>ಮುಂಬೈ</strong>: 2008ರ ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್,‘ಎನ್ಐಎ ಕೋರ್ಟ್ ಸಂತ್ರಸ್ತರ ಕುಟುಂಬದವರನ್ನು ಸಾಕ್ಷಿಗಳಾಗಿ ಪರಿಗಣಿಸಿ, ಅವರನ್ನು ಪರೀಕ್ಷೆಗೆ ಒಳಪಡಿಸಿದ್ದರ ಕುರಿತ ವಿವರಗಳನ್ನು ಸಲ್ಲಿಸುವಂತೆ’ ಮಂಗಳವಾರ ಸೂಚಿಸಿದೆ.</p>.<p>ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ, ಸ್ಫೋಟದಲ್ಲಿ ಮೃತಪಟ್ಟ 6 ಜನರ ಕುಟುಂಬಗಳ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಶ್ರೀ ಚಂದ್ರಶೇಖರ ಹಾಗೂ ನ್ಯಾಯಮೂರ್ತಿ ಗೌತಮ ಅಂಖಡ ಅವರು ಇದ್ದ ನ್ಯಾಯಪೀಠ ನಡೆಸಿತು.</p>.<p>ಸಂತ್ರಸ್ತರ ಕುಟುಂಬದ ಸದಸ್ಯರು ಜಮಿಯಾತ್ ಉಲೇಮಾ ಮಹಾರಾಷ್ಟ್ರ(ಅರ್ಷದ್ ಮದನಿ) ಕಾನೂನು ನೆರವು ಸಮಿತಿ ಮೂಲಕ ಈ ಮೇಲ್ಮನವಿ ಸಲ್ಲಿಸಿದ್ದಾರೆ. ಮೇಲ್ಮನವಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.</p>.<p>‘ಮೊದಲನೇ ಮೇಲ್ಮನವಿದಾರನ (ನಿಸಾರ್ ಅಹ್ಮದ್) ಪುತ್ರ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ. ಆದರೆ, ಪ್ರಕರಣದ ವಿಚಾರಣೆ ವೇಳೆ ನಿಸಾರ್ ಅಹ್ಮದ್ ಅವರನ್ನು ಸಾಕ್ಷಿಯನ್ನಾಗಿ ಮಾಡಿರಲಿಲ್ಲ. ಪ್ರಕರಣ ಕುರಿತ ವಿವರಗಳನ್ನು ಅವರು ಬುಧವಾರ ಸಲ್ಲಿಸುವರು’ ಎಂದು ನಿಸಾರ್ ಅಹ್ಮದ್ ಪರ ವಕೀಲರು ಪೀಠಕ್ಕೆ ತಿಳಿಸಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಮೇಲ್ಮನವಿದಾರನ ಪುತ್ರ ಸ್ಫೋಟದಲ್ಲಿ ಮೃತಪಟ್ಟಿದ್ದಲ್ಲಿ, ಅವರು (ನಿಸಾರ್ ಅಹ್ಮದ್) ಸಾಕ್ಷಿಯಾಗಬೇಕಿತ್ತು. ಅವರನ್ನು ಸಾಕ್ಷಿಗಳನ್ನಾಗಿ ಮಾಡಲಾಗಿತ್ತೇ ಅಥವಾ ಇಲ್ಲವೇ ಎಂಬ ಬಗ್ಗೆ ನೀವೆಲ್ಲಾ (ಉಳಿದ ಮೇಲ್ಮನವಿದಾರರು) ತಿಳಿಸಬೇಕು’ ಎಂದು ಹೇಳಿತು.</p>.<p>ಅಲ್ಲದೇ, ‘ಆರೋಪಿಗಳನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಪ್ರತಿಯೊಬ್ಬರೂ ಮೇಲ್ಮನವಿ ಸಲ್ಲಿಸುವುದಕ್ಕೆ ಮುಕ್ತ ಅವಕಾಶ ಸಾಧ್ಯ ಇಲ್ಲ ಎಂದೂ ಪೀಠ ಹೇಳಿತು.</p>.<p>2008ರ ಸೆಪ್ಟೆಂಬರ್ 29ರಂದು ಮಾಲೇಗಾಂವ್ನಲ್ಲಿ ಮಸೀದಿಯೊಂದರ ಬಳಿ ನಿಲ್ಲಿಸಿದ್ದ ಬೈಕ್ನಲ್ಲಿ ಅಳವಡಿಸಿದ್ದ ಸಾಧನವೊಂದು ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ 6 ಮಂದಿ ಮೃತಪಟ್ಟು ಇತರ 101 ಜನರು ಗಾಯಗೊಂಡಿದ್ದರು.</p>.<p>ಸುದೀರ್ಘ ವಿಚಾರಣೆ ಬಳಿಕ, ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ (ಈಗ ನಿವೃತ್ತ) ಸೇರಿ ಎಲ್ಲ 7 ಜನ ಆರೋಪಿಗಳನ್ನು ದೋಷಮುಕ್ತಗೊಳಿಸಿ ಎನ್ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಭಯ ಲಾಹೋಟಿ ಅವರು ಜುಲೈ 31ರಂದು ಆದೇಶಿಸಿದ್ದರು.</p>.<p><strong>ಮೇಲ್ಮನವಿದಾರರ ವಾದವೇನು? </strong></p><p>* ತಪ್ಪಾದ ತನಿಖೆ ಅಥವಾ ತನಿಖೆಯಲ್ಲಿನ ನ್ಯೂನತೆಗಳು ಆರೋಪಿಗಳನ್ನು ಖುಲಾಸೆ ಮಾಡುವುದಕ್ಕೆ ಆಧಾರವಾಗುವುದಿಲ್ಲ </p><p>* ಸ್ಫೋಟ ಕುರಿತು ರಹಸ್ಯವಾಗಿ ಸಂಚು ರೂಪಿಸಲಾಗಿತ್ತು. ಹೀಗಾಗಿ ಈ ಪ್ರಕರಣದಲ್ಲಿ ನೇರ ಸಾಕ್ಷ್ಯಗಳು ಇರಲು ಸಾಧ್ಯ ಇಲ್ಲ </p><p>* ವಿಚಾರಣಾ ನ್ಯಾಯಾಲಯವು ‘ಅಂಚೆ ಪೇದೆ ಇಲ್ಲವೇ ಮೂಕ ಪ್ರೇಕ್ಷಕ’ನಂತೆ ವರ್ತಿಸಿದೆ. ಪ್ರಾಸಿಕ್ಯೂಷನ್ನ ನ್ಯೂನತೆಗಳ ಲಾಭವನ್ನು ಆರೋಪಿಗಳಿಗೆ ಸಿಗುವಂತೆ ಮಾಡಿರುವುದು ದುರದೃಷ್ಟಕರ</p><p> * ಎನ್ಐಎ ತನಿಖೆ ಕೈಗೆತ್ತಿಕೊಂಡ ಬಳಿಕ ಆರೋಪಿಗಳ ವಿರುದ್ಧದ ಆಪಾದನೆಗಳನ್ನು ದುರ್ಬಲಗೊಳಿಸಿತು </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: 2008ರ ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗಳ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್,‘ಎನ್ಐಎ ಕೋರ್ಟ್ ಸಂತ್ರಸ್ತರ ಕುಟುಂಬದವರನ್ನು ಸಾಕ್ಷಿಗಳಾಗಿ ಪರಿಗಣಿಸಿ, ಅವರನ್ನು ಪರೀಕ್ಷೆಗೆ ಒಳಪಡಿಸಿದ್ದರ ಕುರಿತ ವಿವರಗಳನ್ನು ಸಲ್ಲಿಸುವಂತೆ’ ಮಂಗಳವಾರ ಸೂಚಿಸಿದೆ.</p>.<p>ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ, ಸ್ಫೋಟದಲ್ಲಿ ಮೃತಪಟ್ಟ 6 ಜನರ ಕುಟುಂಬಗಳ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಶ್ರೀ ಚಂದ್ರಶೇಖರ ಹಾಗೂ ನ್ಯಾಯಮೂರ್ತಿ ಗೌತಮ ಅಂಖಡ ಅವರು ಇದ್ದ ನ್ಯಾಯಪೀಠ ನಡೆಸಿತು.</p>.<p>ಸಂತ್ರಸ್ತರ ಕುಟುಂಬದ ಸದಸ್ಯರು ಜಮಿಯಾತ್ ಉಲೇಮಾ ಮಹಾರಾಷ್ಟ್ರ(ಅರ್ಷದ್ ಮದನಿ) ಕಾನೂನು ನೆರವು ಸಮಿತಿ ಮೂಲಕ ಈ ಮೇಲ್ಮನವಿ ಸಲ್ಲಿಸಿದ್ದಾರೆ. ಮೇಲ್ಮನವಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.</p>.<p>‘ಮೊದಲನೇ ಮೇಲ್ಮನವಿದಾರನ (ನಿಸಾರ್ ಅಹ್ಮದ್) ಪುತ್ರ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ. ಆದರೆ, ಪ್ರಕರಣದ ವಿಚಾರಣೆ ವೇಳೆ ನಿಸಾರ್ ಅಹ್ಮದ್ ಅವರನ್ನು ಸಾಕ್ಷಿಯನ್ನಾಗಿ ಮಾಡಿರಲಿಲ್ಲ. ಪ್ರಕರಣ ಕುರಿತ ವಿವರಗಳನ್ನು ಅವರು ಬುಧವಾರ ಸಲ್ಲಿಸುವರು’ ಎಂದು ನಿಸಾರ್ ಅಹ್ಮದ್ ಪರ ವಕೀಲರು ಪೀಠಕ್ಕೆ ತಿಳಿಸಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಮೇಲ್ಮನವಿದಾರನ ಪುತ್ರ ಸ್ಫೋಟದಲ್ಲಿ ಮೃತಪಟ್ಟಿದ್ದಲ್ಲಿ, ಅವರು (ನಿಸಾರ್ ಅಹ್ಮದ್) ಸಾಕ್ಷಿಯಾಗಬೇಕಿತ್ತು. ಅವರನ್ನು ಸಾಕ್ಷಿಗಳನ್ನಾಗಿ ಮಾಡಲಾಗಿತ್ತೇ ಅಥವಾ ಇಲ್ಲವೇ ಎಂಬ ಬಗ್ಗೆ ನೀವೆಲ್ಲಾ (ಉಳಿದ ಮೇಲ್ಮನವಿದಾರರು) ತಿಳಿಸಬೇಕು’ ಎಂದು ಹೇಳಿತು.</p>.<p>ಅಲ್ಲದೇ, ‘ಆರೋಪಿಗಳನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಪ್ರತಿಯೊಬ್ಬರೂ ಮೇಲ್ಮನವಿ ಸಲ್ಲಿಸುವುದಕ್ಕೆ ಮುಕ್ತ ಅವಕಾಶ ಸಾಧ್ಯ ಇಲ್ಲ ಎಂದೂ ಪೀಠ ಹೇಳಿತು.</p>.<p>2008ರ ಸೆಪ್ಟೆಂಬರ್ 29ರಂದು ಮಾಲೇಗಾಂವ್ನಲ್ಲಿ ಮಸೀದಿಯೊಂದರ ಬಳಿ ನಿಲ್ಲಿಸಿದ್ದ ಬೈಕ್ನಲ್ಲಿ ಅಳವಡಿಸಿದ್ದ ಸಾಧನವೊಂದು ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ 6 ಮಂದಿ ಮೃತಪಟ್ಟು ಇತರ 101 ಜನರು ಗಾಯಗೊಂಡಿದ್ದರು.</p>.<p>ಸುದೀರ್ಘ ವಿಚಾರಣೆ ಬಳಿಕ, ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ (ಈಗ ನಿವೃತ್ತ) ಸೇರಿ ಎಲ್ಲ 7 ಜನ ಆರೋಪಿಗಳನ್ನು ದೋಷಮುಕ್ತಗೊಳಿಸಿ ಎನ್ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಭಯ ಲಾಹೋಟಿ ಅವರು ಜುಲೈ 31ರಂದು ಆದೇಶಿಸಿದ್ದರು.</p>.<p><strong>ಮೇಲ್ಮನವಿದಾರರ ವಾದವೇನು? </strong></p><p>* ತಪ್ಪಾದ ತನಿಖೆ ಅಥವಾ ತನಿಖೆಯಲ್ಲಿನ ನ್ಯೂನತೆಗಳು ಆರೋಪಿಗಳನ್ನು ಖುಲಾಸೆ ಮಾಡುವುದಕ್ಕೆ ಆಧಾರವಾಗುವುದಿಲ್ಲ </p><p>* ಸ್ಫೋಟ ಕುರಿತು ರಹಸ್ಯವಾಗಿ ಸಂಚು ರೂಪಿಸಲಾಗಿತ್ತು. ಹೀಗಾಗಿ ಈ ಪ್ರಕರಣದಲ್ಲಿ ನೇರ ಸಾಕ್ಷ್ಯಗಳು ಇರಲು ಸಾಧ್ಯ ಇಲ್ಲ </p><p>* ವಿಚಾರಣಾ ನ್ಯಾಯಾಲಯವು ‘ಅಂಚೆ ಪೇದೆ ಇಲ್ಲವೇ ಮೂಕ ಪ್ರೇಕ್ಷಕ’ನಂತೆ ವರ್ತಿಸಿದೆ. ಪ್ರಾಸಿಕ್ಯೂಷನ್ನ ನ್ಯೂನತೆಗಳ ಲಾಭವನ್ನು ಆರೋಪಿಗಳಿಗೆ ಸಿಗುವಂತೆ ಮಾಡಿರುವುದು ದುರದೃಷ್ಟಕರ</p><p> * ಎನ್ಐಎ ತನಿಖೆ ಕೈಗೆತ್ತಿಕೊಂಡ ಬಳಿಕ ಆರೋಪಿಗಳ ವಿರುದ್ಧದ ಆಪಾದನೆಗಳನ್ನು ದುರ್ಬಲಗೊಳಿಸಿತು </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>