<p><strong>ಗಂಗಾಸಾಗರ/ಕೋಲ್ಕತ್ತ:</strong> ‘ಬಿಜೆಪಿ ಐಟಿ ಸೆಲ್ ರೂಪಿಸಿದ ಮೊಬೈಲ್ ಆ್ಯಪ್ ಬಳಿಸಿಕೊಂಡು ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಸುತ್ತಿದೆ. ಇದು ಅಕ್ರಮ, ಅಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪ ಮಾಡಿದರು.</p>.<p>ಈ ಆರೋಪದ ಮೂಲಕ ಎಸ್ಐಆರ್ ಕುರಿತ ವಿವಾದಗಳಿಗೆ ಮಮತಾ ಅವರು ಹೊಸ ಆಯಾಮ ನೀಡಿದಂತಾಗಿದೆ. ಈ ಆರೋಪವನ್ನು ಬಿಜೆಪಿ ತಳ್ಳಿಹಾಕಿದ್ದು, ‘ಇಂಥ ಆರೋಪಗಳು ಆಧಾರರಹಿತವಾದವು ಮತ್ತು ರಾಜಕೀಯ ಪ್ರೇರಿತವಾದವು’ ಎಂದು ಪ್ರತಿಕ್ರಿಯಿಸಿದೆ.</p>.<p>ಸಾಗರ ದ್ವೀಪಕ್ಕೆ ಕೈಗೊಂಡ 2 ದಿನಗಳ ಪ್ರವಾಸ ಮುಗಿಸಿ ಮಂಗಳವಾರ ಮರಳುವ ವೇಳೆ ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು. ‘ಎಸ್ಐಆರ್ ನಡೆಸುವುದಕ್ಕಾಗಿ ಆಯೋಗವು ಯಾವೆಲ್ಲ ತಪ್ಪುಗಳನ್ನು ಮಾಡಬಹುದೋ ಆ ಎಲ್ಲವನ್ನೂ ಮಾಡುತ್ತಿದೆ. ಬದುಕಿರುವ ಅರ್ಹ ಮತದಾರರನ್ನು ಮೃತಪಟ್ಟಿದ್ದಾರೆ ಎಂದು ತೋರಿಸುತ್ತಿದ್ದಾರೆ. ವೃದ್ಧರನ್ನು, ಅನಾರೋಗ್ಯ ಪೀಡಿತರನ್ನು ಪೌರತ್ವ ಸಾಬೀತು ಮಾಡುವುದಕ್ಕೆ ವಿಚಾರಣೆಗೆ ಬನ್ನಿ ಎಂದು ಕರೆಯುತ್ತಿದ್ದಾರೆ’ ಎಂದು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾಸಾಗರ/ಕೋಲ್ಕತ್ತ:</strong> ‘ಬಿಜೆಪಿ ಐಟಿ ಸೆಲ್ ರೂಪಿಸಿದ ಮೊಬೈಲ್ ಆ್ಯಪ್ ಬಳಿಸಿಕೊಂಡು ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಸುತ್ತಿದೆ. ಇದು ಅಕ್ರಮ, ಅಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪ ಮಾಡಿದರು.</p>.<p>ಈ ಆರೋಪದ ಮೂಲಕ ಎಸ್ಐಆರ್ ಕುರಿತ ವಿವಾದಗಳಿಗೆ ಮಮತಾ ಅವರು ಹೊಸ ಆಯಾಮ ನೀಡಿದಂತಾಗಿದೆ. ಈ ಆರೋಪವನ್ನು ಬಿಜೆಪಿ ತಳ್ಳಿಹಾಕಿದ್ದು, ‘ಇಂಥ ಆರೋಪಗಳು ಆಧಾರರಹಿತವಾದವು ಮತ್ತು ರಾಜಕೀಯ ಪ್ರೇರಿತವಾದವು’ ಎಂದು ಪ್ರತಿಕ್ರಿಯಿಸಿದೆ.</p>.<p>ಸಾಗರ ದ್ವೀಪಕ್ಕೆ ಕೈಗೊಂಡ 2 ದಿನಗಳ ಪ್ರವಾಸ ಮುಗಿಸಿ ಮಂಗಳವಾರ ಮರಳುವ ವೇಳೆ ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು. ‘ಎಸ್ಐಆರ್ ನಡೆಸುವುದಕ್ಕಾಗಿ ಆಯೋಗವು ಯಾವೆಲ್ಲ ತಪ್ಪುಗಳನ್ನು ಮಾಡಬಹುದೋ ಆ ಎಲ್ಲವನ್ನೂ ಮಾಡುತ್ತಿದೆ. ಬದುಕಿರುವ ಅರ್ಹ ಮತದಾರರನ್ನು ಮೃತಪಟ್ಟಿದ್ದಾರೆ ಎಂದು ತೋರಿಸುತ್ತಿದ್ದಾರೆ. ವೃದ್ಧರನ್ನು, ಅನಾರೋಗ್ಯ ಪೀಡಿತರನ್ನು ಪೌರತ್ವ ಸಾಬೀತು ಮಾಡುವುದಕ್ಕೆ ವಿಚಾರಣೆಗೆ ಬನ್ನಿ ಎಂದು ಕರೆಯುತ್ತಿದ್ದಾರೆ’ ಎಂದು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>