<p><strong>ನವದೆಹಲಿ</strong>: ‘ಮೊದಲನೇ ಪರೀಕ್ಷೆಯನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಬರಿಯಲೇಬೇಕು. ಇಲ್ಲವಾದಲ್ಲಿ ಎರಡನೇ ಪರೀಕ್ಷೆಗೆ ಅವಕಾಶವಿಲ್ಲ’ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್ಇ) ಸೋಮವಾರ ಸ್ಪಷ್ಟನೆ ನೀಡಿದೆ.</p>.<p>ಮೊದಲನೇ ಪರೀಕ್ಷೆ ಬರೆಯದ ವಿದ್ಯಾರ್ಥಿಗಳಿಗೆ ಎರಡನೇ ಪರೀಕ್ಷೆ ಬರೆಯಲು ಅವಕಾಶ ನೀಡಬಹುದೇ ಎನ್ನುವ ಬಗ್ಗೆ ಸ್ಪಷ್ಟನೆ ಕೋರಿ ಸಿಬಿಎಸ್ಇಗೆ ಮನವಿಗಳನ್ನು ಸಲ್ಲಿಸಲಾಗಿತ್ತು. 10ನೇ ತರಗತಿಗೆ ನಡೆಯಲಿರುವ ಎರಡು ಪಬ್ಲಿಕ್ ಪರೀಕ್ಷೆಗಳಿಗೆ ಸಂಬಂಧಿಸಿ ಇರುವ ನಿಯಮಗಳ ಕುರಿತು ಉದ್ಭವಿಸಿರುವ ಕೆಲವು ಗೊಂದಲಗಳಿಗೆ ಸಿಬಿಎಸ್ಇ ಈ ಸ್ಪಷ್ಟನೆ ನೀಡಿದೆ.</p>.<p>‘ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳನ್ನು ಮೊದಲನೇ ಪರೀಕ್ಷೆಯಲ್ಲಿ ಬರೆಯದಿದ್ದರೆ, ಅಂಥ ವಿದ್ಯಾರ್ಥಿಯು ಎರಡನೇ ಪರೀಕ್ಷೆ ಬರೆಯುವುದಕ್ಕೆ ಅವಕಾಶವಿಲ್ಲ. ಇಂಥವರನ್ನು ‘ಪುನರಾವರ್ತಿತ ಅಭ್ಯರ್ಥಿ’ ಎಂದು ವಿಭಾಗೀಕರಿಸಲಾಗುವುದು. ಮತ್ತು ಈ ವಿದ್ಯಾರ್ಥಿಯು ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಡೆಯುವ ಮೊದಲೇ ಪರೀಕ್ಷೆಯಲ್ಲಿ, ಪರೀಕ್ಷೆ ಬರೆಯಬಹುದಾಗಿದೆ’ ಎಂದು ಮಂಡಳಿ ವಿವರಿಸಿದೆ.</p>.<p>ಮೊದಲನೆಯದು ಅಂತಿಮ ಪರೀಕ್ಷೆಯಾಗಿರಲಿದ್ದು, ಎರಡನೆಯದು ಅಂಕಗಳನ್ನು ಉತ್ತಮಪಡಿಸಿಕೊಳ್ಳುವ ಅವಕಾಶ ಇರುವ ಮತ್ತೊಂದು ಪರೀಕ್ಷೆಯಾಗಿರಲಿದೆ. ಮಂಗಳವಾರದಿಂದ 10ನೇ ಮತ್ತು 12ನೇ ತರಗತಿಗೆ ಮೊದಲನೇ ಪರೀಕ್ಷೆ ಆರಂಭವಾಗಲಿದೆ. ಶಿಕ್ಷಣ ನೀತಿ 2020ರಲ್ಲಿ ಪರೀಕ್ಷಾ ಪದ್ಧತಿಯನ್ನು ಬದಲಾವಣೆ ಮಾಡಲಾಗಿತ್ತು.</p>.<p><strong>‘ಪ್ರಶ್ನೆ ಪತ್ರಿಕೆ ಸೋರಿಕೆ ಎಂಬ ಸುಳ್ಳು ಸುದ್ದಿ: ಇರಲಿ ಎಚ್ಚರ’</strong></p><p>ಪರೀಕ್ಷೆಗಳು ನಡೆಯುವ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬಂಥ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತವೆ. ಇಂಥ ಸುದ್ದಿಗಳಿಗೆ ಕಿವಿಗೊಡಬಾರದು. ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಹಾದಿ ತಪ್ಪಿಸುವ ಘಟನೆಗಳು ಈ ಹಿಂದೆ ನಡೆದಿವೆ. ಶಾಲೆಗಳು ಕೂಡ ಇಂಥ ಸುದ್ದಿಗಳನ್ನು ನಂಬಬಾರದು ಮತ್ತು ಇಂಥ ಸುದ್ದಿಗಳ ಬಗ್ಗ ಎಚ್ಚರದಿಂದ ಇರಬೇಕು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ)</p>.<p>* ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಗಳಲ್ಲಿ ಯಾವುದಾದರೂ ಮೂರು ವಿಷಯಗಳಲ್ಲಿ ಮಾತ್ರವೇ ಅಂಕಗಳನ್ನು ಉತ್ತಮ ಪಡಿಸಿಕೊಳ್ಳಲು ಎರಡನೇ ಪರೀಕ್ಷೆ ಬರೆಯಬಹುದು</p><p>* ಒಂದು ವೇಳೆ ಮೊದಲನೇ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಎರಡನೇ ಪರೀಕ್ಷೆ ವೇಳೆ ‘ಅನುತ್ತೀರ್ಣ’ ವಿಭಾಗದಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಮೊದಲನೇ ಪರೀಕ್ಷೆಯನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಬರಿಯಲೇಬೇಕು. ಇಲ್ಲವಾದಲ್ಲಿ ಎರಡನೇ ಪರೀಕ್ಷೆಗೆ ಅವಕಾಶವಿಲ್ಲ’ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್ಇ) ಸೋಮವಾರ ಸ್ಪಷ್ಟನೆ ನೀಡಿದೆ.</p>.<p>ಮೊದಲನೇ ಪರೀಕ್ಷೆ ಬರೆಯದ ವಿದ್ಯಾರ್ಥಿಗಳಿಗೆ ಎರಡನೇ ಪರೀಕ್ಷೆ ಬರೆಯಲು ಅವಕಾಶ ನೀಡಬಹುದೇ ಎನ್ನುವ ಬಗ್ಗೆ ಸ್ಪಷ್ಟನೆ ಕೋರಿ ಸಿಬಿಎಸ್ಇಗೆ ಮನವಿಗಳನ್ನು ಸಲ್ಲಿಸಲಾಗಿತ್ತು. 10ನೇ ತರಗತಿಗೆ ನಡೆಯಲಿರುವ ಎರಡು ಪಬ್ಲಿಕ್ ಪರೀಕ್ಷೆಗಳಿಗೆ ಸಂಬಂಧಿಸಿ ಇರುವ ನಿಯಮಗಳ ಕುರಿತು ಉದ್ಭವಿಸಿರುವ ಕೆಲವು ಗೊಂದಲಗಳಿಗೆ ಸಿಬಿಎಸ್ಇ ಈ ಸ್ಪಷ್ಟನೆ ನೀಡಿದೆ.</p>.<p>‘ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳನ್ನು ಮೊದಲನೇ ಪರೀಕ್ಷೆಯಲ್ಲಿ ಬರೆಯದಿದ್ದರೆ, ಅಂಥ ವಿದ್ಯಾರ್ಥಿಯು ಎರಡನೇ ಪರೀಕ್ಷೆ ಬರೆಯುವುದಕ್ಕೆ ಅವಕಾಶವಿಲ್ಲ. ಇಂಥವರನ್ನು ‘ಪುನರಾವರ್ತಿತ ಅಭ್ಯರ್ಥಿ’ ಎಂದು ವಿಭಾಗೀಕರಿಸಲಾಗುವುದು. ಮತ್ತು ಈ ವಿದ್ಯಾರ್ಥಿಯು ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಡೆಯುವ ಮೊದಲೇ ಪರೀಕ್ಷೆಯಲ್ಲಿ, ಪರೀಕ್ಷೆ ಬರೆಯಬಹುದಾಗಿದೆ’ ಎಂದು ಮಂಡಳಿ ವಿವರಿಸಿದೆ.</p>.<p>ಮೊದಲನೆಯದು ಅಂತಿಮ ಪರೀಕ್ಷೆಯಾಗಿರಲಿದ್ದು, ಎರಡನೆಯದು ಅಂಕಗಳನ್ನು ಉತ್ತಮಪಡಿಸಿಕೊಳ್ಳುವ ಅವಕಾಶ ಇರುವ ಮತ್ತೊಂದು ಪರೀಕ್ಷೆಯಾಗಿರಲಿದೆ. ಮಂಗಳವಾರದಿಂದ 10ನೇ ಮತ್ತು 12ನೇ ತರಗತಿಗೆ ಮೊದಲನೇ ಪರೀಕ್ಷೆ ಆರಂಭವಾಗಲಿದೆ. ಶಿಕ್ಷಣ ನೀತಿ 2020ರಲ್ಲಿ ಪರೀಕ್ಷಾ ಪದ್ಧತಿಯನ್ನು ಬದಲಾವಣೆ ಮಾಡಲಾಗಿತ್ತು.</p>.<p><strong>‘ಪ್ರಶ್ನೆ ಪತ್ರಿಕೆ ಸೋರಿಕೆ ಎಂಬ ಸುಳ್ಳು ಸುದ್ದಿ: ಇರಲಿ ಎಚ್ಚರ’</strong></p><p>ಪರೀಕ್ಷೆಗಳು ನಡೆಯುವ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬಂಥ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತವೆ. ಇಂಥ ಸುದ್ದಿಗಳಿಗೆ ಕಿವಿಗೊಡಬಾರದು. ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಹಾದಿ ತಪ್ಪಿಸುವ ಘಟನೆಗಳು ಈ ಹಿಂದೆ ನಡೆದಿವೆ. ಶಾಲೆಗಳು ಕೂಡ ಇಂಥ ಸುದ್ದಿಗಳನ್ನು ನಂಬಬಾರದು ಮತ್ತು ಇಂಥ ಸುದ್ದಿಗಳ ಬಗ್ಗ ಎಚ್ಚರದಿಂದ ಇರಬೇಕು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ)</p>.<p>* ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಗಳಲ್ಲಿ ಯಾವುದಾದರೂ ಮೂರು ವಿಷಯಗಳಲ್ಲಿ ಮಾತ್ರವೇ ಅಂಕಗಳನ್ನು ಉತ್ತಮ ಪಡಿಸಿಕೊಳ್ಳಲು ಎರಡನೇ ಪರೀಕ್ಷೆ ಬರೆಯಬಹುದು</p><p>* ಒಂದು ವೇಳೆ ಮೊದಲನೇ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಎರಡನೇ ಪರೀಕ್ಷೆ ವೇಳೆ ‘ಅನುತ್ತೀರ್ಣ’ ವಿಭಾಗದಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>