<p><strong>ಇಂಫಾಲ್:</strong> ಮಣಿಪುರದ ಇಂಫಾಲ್ ಕಣಿವೆ ವ್ಯಾಪ್ತಿಯ ಜಿಲ್ಲೆಗಳಲ್ಲಿ ಶಾಲಾ–ಕಾಲೇಜುಗಳು ಇಂದಿನಿಂದ (ನವೆಂಬರ್ 28) ಪುನರಾರಂಭಗೊಂಡಿವೆ. ಜಿರೀಬಾಮ್ನಲ್ಲಿ ನಾಳೆಯಿಂದ ತೆರೆಯಲಿವೆ ಎಂದು ರಾಜ್ಯ ಸರ್ಕಾರ ಗುರುವಾರ ಘೋಷಿಸಿದೆ.</p><p>ಮೂವರು ಮಹಿಳೆಯರು ಹಾಗೂ ಮೂರು ಮಕ್ಕಳ ಮೃತದೇಹಗಳು ಜಿರೀಬಾಮ್ನಲ್ಲಿ ನವೆಂಬರ್ 16ರಂದು ಪತ್ತೆಯಾದ ಬಳಿಕ, ಈ ಜಿಲ್ಲೆಗಳಲ್ಲಿ 13 ದಿನಗಳಿಂದ ಶಾಲಾ–ಕಾಲೇಜುಗಳು ಬಂದ್ ಆಗಿದ್ದವು.</p><p>ಮಣಿಪುರ ಹಾಗೂ ಅಸ್ಸಾಂನಲ್ಲಿ ಹರಿಯುವ ಜಿರಿ ಮತ್ತು ಬರಾಕ್ ನದಿ ತಟದಲ್ಲಿ ಮೃತ ದೇಹಗಳು ಸಿಕ್ಕಿದ್ದವು.</p><p>ಶಾಲೆಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ನಿರ್ದೇಶನಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, 'ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ, ಖಾಸಗಿ ಮತ್ತು ಕೇಂದ್ರೀಯ ಶಾಲೆಗಳಲ್ಲಿ ಸಾಮಾನ್ಯ ತರಗತಿಗಳು ನವೆಂಬರ್ 29ರಿಂದ ಆರಂಭವಾಗಲಿವೆ' ಎಂದು ತಿಳಿಸಿದೆ.</p><p>ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ, ರಾಜ್ಯ ವಿಶ್ವ ವಿದ್ಯಾಲಯಗಳು ಸೇರಿದಂತೆ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಅಥವಾ ಅನುದಾನಿತ ಕಾಲೇಜುಗಳು ನಾಳೆಯಿಂದ ಆರಂಭವಾಗಲಿವೆ ಎಂದು ಮತ್ತೊಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.</p><p>ಜಿರೀಬಾಮ್ನಲ್ಲಿ ಭದ್ರತಾ ಪಡೆಗಳು ಮತ್ತು ಶಂಕಿತ ಕುಕಿ ಉಗ್ರರ ನಡುವೆ ನವೆಂಬರ್ 11 ರಂದು ಗುಂಡಿನ ಚಕಮಕಿ ನಡೆದಿತ್ತು. ಪರಿಣಾಮವಾಗಿ 10 ಮಂದಿ ಆಗಂತುಕರು ಹತ್ಯೆಯಾಗಿದ್ದರು. ಆದರೆ, ಈ ಪ್ರಕರಣದ ಬೆನ್ನಲ್ಲೇ, ಮೈತೇಯಿ ಸಮುದಾಯಕ್ಕೆ ಸೇರಿದವರಿದ್ದ ಪರಿಹಾರ ಶಿಬಿರಗಳಿಂದ ಮಹಿಳೆಯರು ಮತ್ತು ಮಕ್ಕಳು ನಾಪತ್ತೆಯಾಗಿದ್ದರು. ಅವರೆಲ್ಲರ ಶವಗಳು ಪತ್ತೆಯಾಗುತ್ತಿದ್ದಂತೆ, ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿತ್ತು.</p>.ಮಣಿಪುರ ಉದ್ವಿಗ್ನ: ರಾಷ್ಟ್ರಪತಿ ಮುರ್ಮು ಮಧ್ಯಪ್ರವೇಶಕ್ಕೆ ಖರ್ಗೆ ಒತ್ತಾಯ.ಮಣಿಪುರ ಹಿಂಸಾಚಾರ | ಕಾಂಗ್ರೆಸ್ ವೈಫಲ್ಯವೇ ಕಾರಣ: ಖರ್ಗೆಗೆ ನಡ್ಡಾ ತಿರುಗೇಟು.<p>ಹೀಗಾಗಿ, ಇಂಫಾಲ್ ಕಣಿವೆ ಜಿಲ್ಲೆಗಳು ಮತ್ತು ಜಿರೀಬಾಮ್ನಲ್ಲಿ ಗುರುವಾರದವರೆಗೆ ನಿಷೇಧಾಜ್ಞೆ ಹೇರಲಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.</p><p>'ಶುಕ್ರವಾರದಿಂದ ಕರ್ಫ್ಯೂ ಸಡಿಲಿಸಲಾಗುತ್ತದೆಯೇ, ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆ ಸಂಬಂಧ ಹೊಸದಾಗಿ ಯಾವುದೇ ಆದೇಶ ಬಂದಿಲ್ಲ' ಎಂದೂ ತಿಳಿಸಿದ್ದಾರೆ.</p><p>ಮೀಸಲಾತಿಗೆ ಸಂಬಂಧಿಸಿದಂತೆ ಕುಕಿ ಹಾಗೂ ಮೈತೇಯಿ ಸಮುದಾಯದವರ ನಡುವೆ ಕಳೆದ ವರ್ಷ ಮೇ ತಿಂಗಳಲ್ಲಿ ಆರಂಭವಾದ ಹಿಂಸಾಚಾರದಲ್ಲಿ ನೂರಾರು ಜನರು ಹತ್ಯೆಯಾಗಿದ್ದಾರೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂಫಾಲ್:</strong> ಮಣಿಪುರದ ಇಂಫಾಲ್ ಕಣಿವೆ ವ್ಯಾಪ್ತಿಯ ಜಿಲ್ಲೆಗಳಲ್ಲಿ ಶಾಲಾ–ಕಾಲೇಜುಗಳು ಇಂದಿನಿಂದ (ನವೆಂಬರ್ 28) ಪುನರಾರಂಭಗೊಂಡಿವೆ. ಜಿರೀಬಾಮ್ನಲ್ಲಿ ನಾಳೆಯಿಂದ ತೆರೆಯಲಿವೆ ಎಂದು ರಾಜ್ಯ ಸರ್ಕಾರ ಗುರುವಾರ ಘೋಷಿಸಿದೆ.</p><p>ಮೂವರು ಮಹಿಳೆಯರು ಹಾಗೂ ಮೂರು ಮಕ್ಕಳ ಮೃತದೇಹಗಳು ಜಿರೀಬಾಮ್ನಲ್ಲಿ ನವೆಂಬರ್ 16ರಂದು ಪತ್ತೆಯಾದ ಬಳಿಕ, ಈ ಜಿಲ್ಲೆಗಳಲ್ಲಿ 13 ದಿನಗಳಿಂದ ಶಾಲಾ–ಕಾಲೇಜುಗಳು ಬಂದ್ ಆಗಿದ್ದವು.</p><p>ಮಣಿಪುರ ಹಾಗೂ ಅಸ್ಸಾಂನಲ್ಲಿ ಹರಿಯುವ ಜಿರಿ ಮತ್ತು ಬರಾಕ್ ನದಿ ತಟದಲ್ಲಿ ಮೃತ ದೇಹಗಳು ಸಿಕ್ಕಿದ್ದವು.</p><p>ಶಾಲೆಗಳ ಪುನರಾರಂಭಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ನಿರ್ದೇಶನಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, 'ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ, ಖಾಸಗಿ ಮತ್ತು ಕೇಂದ್ರೀಯ ಶಾಲೆಗಳಲ್ಲಿ ಸಾಮಾನ್ಯ ತರಗತಿಗಳು ನವೆಂಬರ್ 29ರಿಂದ ಆರಂಭವಾಗಲಿವೆ' ಎಂದು ತಿಳಿಸಿದೆ.</p><p>ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ, ರಾಜ್ಯ ವಿಶ್ವ ವಿದ್ಯಾಲಯಗಳು ಸೇರಿದಂತೆ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಅಥವಾ ಅನುದಾನಿತ ಕಾಲೇಜುಗಳು ನಾಳೆಯಿಂದ ಆರಂಭವಾಗಲಿವೆ ಎಂದು ಮತ್ತೊಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.</p><p>ಜಿರೀಬಾಮ್ನಲ್ಲಿ ಭದ್ರತಾ ಪಡೆಗಳು ಮತ್ತು ಶಂಕಿತ ಕುಕಿ ಉಗ್ರರ ನಡುವೆ ನವೆಂಬರ್ 11 ರಂದು ಗುಂಡಿನ ಚಕಮಕಿ ನಡೆದಿತ್ತು. ಪರಿಣಾಮವಾಗಿ 10 ಮಂದಿ ಆಗಂತುಕರು ಹತ್ಯೆಯಾಗಿದ್ದರು. ಆದರೆ, ಈ ಪ್ರಕರಣದ ಬೆನ್ನಲ್ಲೇ, ಮೈತೇಯಿ ಸಮುದಾಯಕ್ಕೆ ಸೇರಿದವರಿದ್ದ ಪರಿಹಾರ ಶಿಬಿರಗಳಿಂದ ಮಹಿಳೆಯರು ಮತ್ತು ಮಕ್ಕಳು ನಾಪತ್ತೆಯಾಗಿದ್ದರು. ಅವರೆಲ್ಲರ ಶವಗಳು ಪತ್ತೆಯಾಗುತ್ತಿದ್ದಂತೆ, ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿತ್ತು.</p>.ಮಣಿಪುರ ಉದ್ವಿಗ್ನ: ರಾಷ್ಟ್ರಪತಿ ಮುರ್ಮು ಮಧ್ಯಪ್ರವೇಶಕ್ಕೆ ಖರ್ಗೆ ಒತ್ತಾಯ.ಮಣಿಪುರ ಹಿಂಸಾಚಾರ | ಕಾಂಗ್ರೆಸ್ ವೈಫಲ್ಯವೇ ಕಾರಣ: ಖರ್ಗೆಗೆ ನಡ್ಡಾ ತಿರುಗೇಟು.<p>ಹೀಗಾಗಿ, ಇಂಫಾಲ್ ಕಣಿವೆ ಜಿಲ್ಲೆಗಳು ಮತ್ತು ಜಿರೀಬಾಮ್ನಲ್ಲಿ ಗುರುವಾರದವರೆಗೆ ನಿಷೇಧಾಜ್ಞೆ ಹೇರಲಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.</p><p>'ಶುಕ್ರವಾರದಿಂದ ಕರ್ಫ್ಯೂ ಸಡಿಲಿಸಲಾಗುತ್ತದೆಯೇ, ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆ ಸಂಬಂಧ ಹೊಸದಾಗಿ ಯಾವುದೇ ಆದೇಶ ಬಂದಿಲ್ಲ' ಎಂದೂ ತಿಳಿಸಿದ್ದಾರೆ.</p><p>ಮೀಸಲಾತಿಗೆ ಸಂಬಂಧಿಸಿದಂತೆ ಕುಕಿ ಹಾಗೂ ಮೈತೇಯಿ ಸಮುದಾಯದವರ ನಡುವೆ ಕಳೆದ ವರ್ಷ ಮೇ ತಿಂಗಳಲ್ಲಿ ಆರಂಭವಾದ ಹಿಂಸಾಚಾರದಲ್ಲಿ ನೂರಾರು ಜನರು ಹತ್ಯೆಯಾಗಿದ್ದಾರೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>