<p><strong>ನವದೆಹಲಿ:</strong> ಇಂಡಿಯಾ ಮೈತ್ರಿಕೂಟವು ಒಗ್ಗಟ್ಟಾಗಿ ಮುನ್ನಡೆದರೆ, ಪರಿಣಾಮಕಾರಿಯಾಗಿ ಸಂಘಟಿತವಾದರೆ ದೇಶದ ಪ್ರಜಾಪ್ರಭುತ್ವದ ಭೀಕರ ಅವನತಿಯನ್ನು ತಡೆಯಬಹುದು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅವರು ಹೇಳಿದರು.</p>.<p>‘ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಸಾಮರ್ಥ್ಯ ‘ಇಂಡಿಯಾ’ಕ್ಕೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<p>ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘2014, 2019 ಮತ್ತು 2024ರ ಚುನಾವಣೆಗಳಲ್ಲಿ ಬಿಜೆಪಿ ಒಟ್ಟು ಮತಗಳ ಕೇವಲ ಮೂರನೇ ಒಂದು ಭಾಗದಷ್ಟನ್ನು ಪಡೆದುಕೊಂಡಿದೆ. ಮೂರನೇ ಎರಡರಷ್ಟು ಜನರು ಬಿಜೆಪಿಗೆ ಮತ ಹಾಕಿಲ್ಲ’ ಎಂದರು.</p>.<p>‘ಇದರ ಅರ್ಥ ಏನೆಂದರೆ, ಹಿಂದುತ್ವ ಮತ್ತು ಅದರ ಸಿದ್ಧಾಂತವು ಧರ್ಮ ಮತ್ತು ಜೀವನಪದ್ಧತಿ ಎನ್ನುವ ರಾಜಕೀಯ ಯೋಚನೆಗಳನ್ನು ಅರ್ಧದಷ್ಟು ಹಿಂದೂಗಳು ನಿರಾಕರಿಸಿದ್ದಾರೆ. ಹಾಗಾಗಿ ‘ಇಂಡಿಯಾ’ ಗೆಲ್ಲಬಹುದು’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಇಂಡಿಯಾ ಮೈತ್ರಿಕೂಟವು ಒಗ್ಗಟ್ಟಾಗಿ ಮುನ್ನಡೆದರೆ, ಪರಿಣಾಮಕಾರಿಯಾಗಿ ಸಂಘಟಿತವಾದರೆ ದೇಶದ ಪ್ರಜಾಪ್ರಭುತ್ವದ ಭೀಕರ ಅವನತಿಯನ್ನು ತಡೆಯಬಹುದು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅವರು ಹೇಳಿದರು.</p>.<p>‘ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಸಾಮರ್ಥ್ಯ ‘ಇಂಡಿಯಾ’ಕ್ಕೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<p>ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘2014, 2019 ಮತ್ತು 2024ರ ಚುನಾವಣೆಗಳಲ್ಲಿ ಬಿಜೆಪಿ ಒಟ್ಟು ಮತಗಳ ಕೇವಲ ಮೂರನೇ ಒಂದು ಭಾಗದಷ್ಟನ್ನು ಪಡೆದುಕೊಂಡಿದೆ. ಮೂರನೇ ಎರಡರಷ್ಟು ಜನರು ಬಿಜೆಪಿಗೆ ಮತ ಹಾಕಿಲ್ಲ’ ಎಂದರು.</p>.<p>‘ಇದರ ಅರ್ಥ ಏನೆಂದರೆ, ಹಿಂದುತ್ವ ಮತ್ತು ಅದರ ಸಿದ್ಧಾಂತವು ಧರ್ಮ ಮತ್ತು ಜೀವನಪದ್ಧತಿ ಎನ್ನುವ ರಾಜಕೀಯ ಯೋಚನೆಗಳನ್ನು ಅರ್ಧದಷ್ಟು ಹಿಂದೂಗಳು ನಿರಾಕರಿಸಿದ್ದಾರೆ. ಹಾಗಾಗಿ ‘ಇಂಡಿಯಾ’ ಗೆಲ್ಲಬಹುದು’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>