<p><strong>ನವದೆಹಲಿ: </strong>ಅಪರಾಧ ತಡೆ ಕಾಯ್ದೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರ ಗೃಹ ಇಲಾಖೆ ನೇಮಿಸಿರುವ ಸಮಿತಿಯು, ತಜ್ಞರ ಶಿಫಾರಸು, ಸಲಹೆಯನ್ನು ಪಡೆಯಲು ಆನ್ಲೈನ್ ಮೊರೆ ಹೋಗಿದೆ.</p>.<p>ಕೋವಿಡ್–19 ಪಿಡುಗಿನ ಕಾರಣದಿಂದಾಗಿ ಸಂಚಾರ, ಸಭೆ ಆಯೋಜನೆಗೆ ನಿರ್ಬಂಧವಿದ್ದು, ಹೀಗಾಗಿ ಸಮಿತಿಯು ಆನ್ಲೈನ್ ಮೂಲಕ ತಜ್ಞರನ್ನು ಸಂಪರ್ಕಿಸಿದೆ. ಜುಲೈ 4ರಿಂದ ಈ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸೆಪ್ಟೆಂಬರ್ 25ರವರೆಗೂ ನಡೆಯಲಿದೆ.</p>.<p>ಅಪರಾಧ ಕಾನೂನುಗಳನ್ನು ಪರಾಮರ್ಶಿಸಲು ಮೇ ತಿಂಗಳಲ್ಲಿರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ರಣ್ಬೀರ್ ಸಿಂಗ್ ನೇತೃತ್ವದಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು. ಖ್ಯಾತ ವಕೀಲರಾದ ಮಹೇಶ್ ಜೇಠ್ಮಲಾನಿ ಅವರೂ ಈ ಸಮಿತಿಯಲ್ಲಿ ಇದ್ದಾರೆ.ದೇಶದ್ರೋಹ, ಪೋಷಕರಿಂದಲೇ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮುಂತಾದ ಅಪರಾಧಗಳನ್ನು ಗಮನದಲ್ಲಿಟ್ಟುಕೊಂಡು, ತಜ್ಞರ ಸಲಹೆ ಪಡೆದು,ಕಾನೂನಿನಲ್ಲಿ ಆಗಬೇಕಾದಂಥ ತಿದ್ದುಪಡಿಗಳನ್ನು ಈ ಸಮಿತಿಯು ಶಿಫಾರಸು ಮಾಡಲಿದೆ. </p>.<p>ಮೊದಲ ಹಂತದಲ್ಲಿ ಭಾರತೀಯ ದಂಡ ಸಂಹಿತೆಯಲ್ಲಿ(ಐಪಿಸಿ) ಆಗಬೇಕಾದಂಥ ತಿದ್ದುಪಡಿಗಳ ಕುರಿತು ತಜ್ಞರ ಸಲಹೆಗಳನ್ನು ಸಮಿತಿಯು ಪಡೆಯಲಾರಂಭಿಸಿದ್ದು, ಈ ತಿಂಗಳ ಅಂತ್ಯದವರೆಗೆ ಈ ಪ್ರಕ್ರಿಯೆ ಮುಂದುವರಿಯಲಿದೆ. ಪ್ರಸ್ತುತ ಇರುವ ದೇಶದ್ರೋಹ ಕಾನೂನಿನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಈ ಕಾನೂನಿನಲ್ಲಿ ಇರುವ ಸೆಕ್ಷನ್ 124 ಎ ಅನ್ನು ಐಪಿಸಿಯಿಂದ ತೆಗೆಯಬೇಕೇ ಅಥವಾ ಅದನ್ನು ಪರಿಷ್ಕರಿಸಬೇಕೇ ಎನ್ನುವುದು ಮುನ್ನೆಲೆಗೆ ಬರಲಿದೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಅಪರಾಧ ತಡೆ ಕಾಯ್ದೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರ ಗೃಹ ಇಲಾಖೆ ನೇಮಿಸಿರುವ ಸಮಿತಿಯು, ತಜ್ಞರ ಶಿಫಾರಸು, ಸಲಹೆಯನ್ನು ಪಡೆಯಲು ಆನ್ಲೈನ್ ಮೊರೆ ಹೋಗಿದೆ.</p>.<p>ಕೋವಿಡ್–19 ಪಿಡುಗಿನ ಕಾರಣದಿಂದಾಗಿ ಸಂಚಾರ, ಸಭೆ ಆಯೋಜನೆಗೆ ನಿರ್ಬಂಧವಿದ್ದು, ಹೀಗಾಗಿ ಸಮಿತಿಯು ಆನ್ಲೈನ್ ಮೂಲಕ ತಜ್ಞರನ್ನು ಸಂಪರ್ಕಿಸಿದೆ. ಜುಲೈ 4ರಿಂದ ಈ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸೆಪ್ಟೆಂಬರ್ 25ರವರೆಗೂ ನಡೆಯಲಿದೆ.</p>.<p>ಅಪರಾಧ ಕಾನೂನುಗಳನ್ನು ಪರಾಮರ್ಶಿಸಲು ಮೇ ತಿಂಗಳಲ್ಲಿರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ರಣ್ಬೀರ್ ಸಿಂಗ್ ನೇತೃತ್ವದಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು. ಖ್ಯಾತ ವಕೀಲರಾದ ಮಹೇಶ್ ಜೇಠ್ಮಲಾನಿ ಅವರೂ ಈ ಸಮಿತಿಯಲ್ಲಿ ಇದ್ದಾರೆ.ದೇಶದ್ರೋಹ, ಪೋಷಕರಿಂದಲೇ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮುಂತಾದ ಅಪರಾಧಗಳನ್ನು ಗಮನದಲ್ಲಿಟ್ಟುಕೊಂಡು, ತಜ್ಞರ ಸಲಹೆ ಪಡೆದು,ಕಾನೂನಿನಲ್ಲಿ ಆಗಬೇಕಾದಂಥ ತಿದ್ದುಪಡಿಗಳನ್ನು ಈ ಸಮಿತಿಯು ಶಿಫಾರಸು ಮಾಡಲಿದೆ. </p>.<p>ಮೊದಲ ಹಂತದಲ್ಲಿ ಭಾರತೀಯ ದಂಡ ಸಂಹಿತೆಯಲ್ಲಿ(ಐಪಿಸಿ) ಆಗಬೇಕಾದಂಥ ತಿದ್ದುಪಡಿಗಳ ಕುರಿತು ತಜ್ಞರ ಸಲಹೆಗಳನ್ನು ಸಮಿತಿಯು ಪಡೆಯಲಾರಂಭಿಸಿದ್ದು, ಈ ತಿಂಗಳ ಅಂತ್ಯದವರೆಗೆ ಈ ಪ್ರಕ್ರಿಯೆ ಮುಂದುವರಿಯಲಿದೆ. ಪ್ರಸ್ತುತ ಇರುವ ದೇಶದ್ರೋಹ ಕಾನೂನಿನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಈ ಕಾನೂನಿನಲ್ಲಿ ಇರುವ ಸೆಕ್ಷನ್ 124 ಎ ಅನ್ನು ಐಪಿಸಿಯಿಂದ ತೆಗೆಯಬೇಕೇ ಅಥವಾ ಅದನ್ನು ಪರಿಷ್ಕರಿಸಬೇಕೇ ಎನ್ನುವುದು ಮುನ್ನೆಲೆಗೆ ಬರಲಿದೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>