ಅಪರಾಧ ಕಾನೂನುಗಳನ್ನು ಪರಾಮರ್ಶಿಸಲು ಮೇ ತಿಂಗಳಲ್ಲಿರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ರಣ್ಬೀರ್ ಸಿಂಗ್ ನೇತೃತ್ವದಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು. ಖ್ಯಾತ ವಕೀಲರಾದ ಮಹೇಶ್ ಜೇಠ್ಮಲಾನಿ ಅವರೂ ಈ ಸಮಿತಿಯಲ್ಲಿ ಇದ್ದಾರೆ.ದೇಶದ್ರೋಹ, ಪೋಷಕರಿಂದಲೇ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮುಂತಾದ ಅಪರಾಧಗಳನ್ನು ಗಮನದಲ್ಲಿಟ್ಟುಕೊಂಡು, ತಜ್ಞರ ಸಲಹೆ ಪಡೆದು,ಕಾನೂನಿನಲ್ಲಿ ಆಗಬೇಕಾದಂಥ ತಿದ್ದುಪಡಿಗಳನ್ನು ಈ ಸಮಿತಿಯು ಶಿಫಾರಸು ಮಾಡಲಿದೆ.