ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ ಸೇರಿದಂತೆ 14 ರಾಜ್ಯಗಳ ಮುಖ್ಯಮಂತ್ರಿಗಳ ವಿಡಿಯೊ ಸಂವಾದ ನಡೆಸಿದ ಮೋದಿ,‘ಮತ್ತೆ ಲಾಕ್ಡೌನ್ ಘೋಷಿಸಲಾಗುತ್ತದೆ ಎನ್ನುವ ವದಂತಿಯ ವಿರುದ್ಧ ಇದೀಗ ಹೋರಾಡಬೇಕಾಗಿದೆ. ನಾವೀಗ ನಿರ್ಬಂಧಗಳಿಂದ ಹೊರಬರುವ ಹಂತದಲ್ಲಿ ಇದ್ದೇವೆ. ಜನರಿಗೆ ಹಾನಿಯಾಗದಂತೆ ಯಾವ ರೀತಿ ಅನ್ಲಾಕ್ 2.0 ಅನುಷ್ಠಾನಕ್ಕೆ ತರಬಹುದು ಎನ್ನುವುದರ ಬಗ್ಗೆ ಯೋಚಿಸಬೇಕಾಗಿದೆ’ ಎಂದಿದ್ದಾರೆ.