<p><strong>ನವದೆಹಲಿ: </strong>‘ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಶ್ರೇಷ್ಠ ಆಡಳಿತಗಾರರಾಗಿದ್ದೇ ಆದಲ್ಲಿ ಅವರ ವಂಶಸ್ಥರು ಏಕೆ ತಮ್ಮ ಹೆಸರಿನ ಜೊತೆ ಅವರ ಉಪನಾಮ ಬಳಸುತ್ತಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕುಟುಕಿದ್ದಾರೆ.</p>.<p>ರಾಷ್ಟ್ರಪತಿಯವರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ರಾಜ್ಯಸಭೆಯಲ್ಲಿ ಗುರುವಾರ ಉತ್ತರ ನೀಡಿದ ಅವರು, ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳ ಮೇಲೆ ಮತ್ತೊಮ್ಮೆ ಹರಿಹಾಯ್ದರು.</p>.<p>ಸ್ವಾತಂತ್ರ್ಯ ನಂತರದಲ್ಲಿ ಈ ದೇಶ ಕಟ್ಟುವುದಕ್ಕಾಗಿ ನೆಹರೂ ಅವರು ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಬಿಜೆಪಿಯವರು ಅದನ್ನು ಕಡೆಗಣಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದರು ಆರೋಪಿಸಿದರು. </p>.<p>ಇದಕ್ಕೆ ಪ್ರತಿಕ್ರಿಯಿಸಿದ ಮೋದಿ ‘ನೆಹರೂ ಅಷ್ಟೊಂದು ಶ್ರೇಷ್ಠ ಆಡಳಿತಗಾರರಾಗಿದ್ದೇ ಆದಲ್ಲಿ ಅವರ ವಂಶಸ್ಥರು ಏಕೆ ಅವರ ಉಪನಾಮ ಬಳಸುತ್ತಿಲ್ಲ’ ಎಂದು ತಿರುಗೇಟು ನೀಡಿದರು. </p>.<p>ಇದು ವಿರೋಧ ಪಕ್ಷದ ಸಂಸದರನ್ನು ಕೆರಳಿಸಿತು. ಭಿತ್ತಿಪತ್ರ ಹಿಡಿದಿದ್ದ ಕೆಲವರು ಸಭಾಪತಿ ಪೀಠದ ಮುಂಭಾಗಕ್ಕೆ ತೆರಳಿ ಪ್ರಧಾನಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಅದಾನಿ ಸಮೂಹದ ವಿರುದ್ಧದ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು. </p>.<p>ಗದ್ದಲದ ನಡುವೆಯೂ ಮಾತು ಮುಂದುವರಿಸಿದ ಮೋದಿ, ‘ನೀವು ಎಷ್ಟು ಕೆಸರು ಎರಚುತ್ತೀರೋ (ಆರೋಪ) ಅಷ್ಟು ದೊಡ್ಡದಾಗಿ ಕಮಲ ಅರಳುತ್ತದೆ’ ಎಂದು ವಿರೋಧ ಪಕ್ಷಗಳ ಸಂಸದರನ್ನು ಛೇಡಿಸಿದರು. </p>.<p>ಎದೆ ತಟ್ಟಿಕೊಳ್ಳುತ್ತಲೇ, ‘ನಾನು ಈ ದೇಶಕ್ಕಾಗಿ ಬದುಕುತ್ತಿದ್ದೇನೆ. ಈ ದೇಶಕ್ಕೆ ಏನನ್ನಾದರೂ ಮಾಡಬೇಕೆಂದು ಬಯಸುತ್ತಿದ್ದೇನೆ. ಇದನ್ನು ವಿರೋಧ ಪಕ್ಷಗಳು ಸಹಿಸಿಕೊಳ್ಳುತ್ತಿಲ್ಲ. ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ರಾಜಕೀಯ ನಾಟಕಗಳನ್ನು ಆಡುತ್ತಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು.</p>.<p>‘ನಾನೊಬ್ಬನೇ ಎಲ್ಲರನ್ನೂ ಎದುರಿಸುತ್ತಿದ್ದೇನೆ. ಎಲ್ಲರನ್ನೂ ಮೀರಿಸುತ್ತಿದ್ದೇನೆ. ಅದನ್ನು ಇಡೀ ದೇಶವೇ ನೋಡುತ್ತಿದೆ’ ಎಂದು ಹೇಳಿದಾಗ ವಿರೋಧ ಪಕ್ಷಗಳ ಸದಸ್ಯರು ‘ಮೋದಿ–ಅದಾನಿ ಭಾಯ್ ಭಾಯ್; ದೇಶ್ ಬೇಚ್ ಕೆ ಖಾಯಿ ಮಲಾಯ್’ ಎಂದು ಗೇಲಿ ಮಾಡಿದರು.</p>.<p>ಇದರಿಂದ ವಿಚಲಿತರಾಗದ ಮೋದಿ, ‘ನನ್ನನ್ನು ಏಕಾಂಗಿಯಾಗಿ ಎದುರಿಸುವುದಕ್ಕೆ ವಿರೋಧ ಪಕ್ಷಗಳಿಗೆ ಧೈರ್ಯವಿಲ್ಲ. ಹೀಗಾಗಿ ಅವರು ರಾಜಕೀಯ ನಾಟಕ ಆಡುತ್ತಿದ್ದಾರೆ’ ಎಂದು ಕೆಣಕಿದರು. </p>.<p>‘ಕಾಂಗ್ರೆಸ್ ಪಕ್ಷ ದೇಶದ ಸಮಸ್ಯೆಗಳನ್ನು ಪರಿಹರಿಸುವ ವಿಚಾರದಲ್ಲಿ ಸಾಂಕೇತಿಕ ಧೋರಣೆಗಳನ್ನಷ್ಟೇ ಅನುಸರಿಸಿತ್ತು. ಆ ಪಕ್ಷ ತನ್ನ ರಾಜಕೀಯ ಹಿತಾಸಕ್ತಿ ಬಗ್ಗೆ ಚಿಂತಿಸುತ್ತಿತ್ತೇ ಹೊರತು ದೇಶದ ಅಭಿವೃದ್ಧಿಯ ಕುರಿತಲ್ಲ. ಸಾಂಕೇತಿಕ ಧೋರಣೆಗಳಲ್ಲಿ ನಮಗೆ ನಂಬಿಕೆ ಇಲ್ಲ. ದೇಶ ಮುನ್ನಡೆಸುವ ವಿಚಾರದಲ್ಲಿ ನಾವು ಪರಿಶ್ರಮದ ಹಾದಿ ಆಯ್ದುಕೊಂಡಿದ್ದೇವೆ’ ಎಂದರು.</p>.<p><strong> ‘ರಾಜ್ಯಗಳ ಹಕ್ಕು ಕಸಿದಿದ್ದ ಕಾಂಗ್ರೆಸ್’</strong></p>.<p>‘ಕಾಂಗ್ರೆಸ್ ಪಕ್ಷವು ಸಂವಿಧಾನದ 356ನೇ ವಿಧಿಯನ್ನು ದುರ್ಬಳಕೆ ಮಾಡಿಕೊಂಡು 90 ಬಾರಿ ಚುನಾಯಿತ ಸರ್ಕಾರಗಳನ್ನು ವಜಾಗೊಳಿಸಿತ್ತು. ಆ ಮೂಲಕ ರಾಜ್ಯಗಳು ಹಾಗೂ ಪ್ರಾದೇಶಿಕ ಪಕ್ಷಗಳ ಹಕ್ಕು ಕಸಿದಿತ್ತು. ಇಂದಿರಾಗಾಂಧಿ ಒಬ್ಬರೇ 50 ಬಾರಿ ಸರ್ಕಾರಗಳನ್ನು ವಜಾ ಮಾಡಿದ್ದರು’ ಎಂದು ಮೋದಿ ಆರೋಪಿಸಿದರು.</p>.<p>‘ಈ ದೇಶ ಯಾರೊಬ್ಬರ ಸ್ವತ್ತಲ್ಲ. ನಮ್ಮ ನೀತಿಗಳು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತವೆ. ಈಗ ಇಲ್ಲಿ ಕುಳಿತಿದ್ದಾರಲ್ಲ (ಕಾಂಗ್ರೆಸ್) ಇವರ ಮುಖವಾಡವನ್ನು ನಾನು ಕಳಚಲು ಬಯಸುತ್ತೇನೆ’ ಎಂದು ಹರಿಹಾಯ್ದರು. </p>.<p>‘ಕೇರಳದಲ್ಲಿನ ಎಡಪಕ್ಷ, ಶರದ್ ಪವಾರ್ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಹಾಗೂ ಎಂಜಿಆರ್ ಮುಂದಾಳತ್ವದ ತಮಿಳುನಾಡು ಸರ್ಕಾರಗಳನ್ನು ಕಾಂಗ್ರೆಸ್ ವಜಾಗೊಳಿಸಿತ್ತು. ಎನ್ಟಿಆರ್ ಅವರು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾಗ ಅವರ ಸರ್ಕಾರ ವಜಾಗೊಳಿಸಲಾಗಿತ್ತು. ಈ ಪಕ್ಷಗಳ ಸಂಸದರು ಇಂದು ಕಾಂಗ್ರೆಸ್ ಸಂಸದರ ಜೊತೆಯೇ ಕುಳಿತಿದ್ದಾರೆ. ಈ ಹಿಂದೆ ಹಲವು ಪಾಪಗಳನ್ನು ಮಾಡಿರುವ ಕಾಂಗ್ರೆಸ್ ಈಗ ದೇಶದ ದಾರಿ ತಪ್ಪಿಸಲು ಮುಂದಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. </p>.<p>‘ನಿಮ್ಮ ರಾಜಕೀಯ ಹಿತಾಸಕ್ತಿಗಾಗಿ ಉಚಿತ ಕೊಡುಗೆಗಳನ್ನು ಪ್ರಕಟಿಸಲು ಹೋಗಬೇಡಿ. ಹಳೆ ಪಿಂಚಣಿ ವ್ಯವಸ್ಥೆಯಂತಹ ಯೋಜನೆಗಳನ್ನು ಮರು ಜಾರಿಗೊಳಿಸಬೇಡಿ. ಇಂತಹ ಪಾಪಗಳ ಮೂಲಕ ಮುಂದಿನ ಪೀಳಿಗೆಯನ್ನು ಸಂಕಷ್ಟಕ್ಕೆ ದೂಡಬೇಡಿ’ ಎಂದು ರಾಜ್ಯಗಳಿಗೆ ಎಚ್ಚರಿಸಿದರು. </p>.<p><strong>***</strong></p>.<p>ಜನರ ಕಲ್ಯಾಣಕ್ಕಾಗಿ ರೂಪಿಸಿದ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಬೇಕು. ಅದು ನಿಜವಾದ ಜಾತ್ಯತೀತತೆ. ಇದರಿಂದ ಭ್ರಷ್ಟಾಚಾರ ಮತ್ತು ತಾರತಮ್ಯ ತೊಡೆದುಹಾಕಲು ಸಾಧ್ಯ</p>.<p><strong>–ನರೇಂದ್ರ ಮೋದಿ, ಪ್ರಧಾನಿ </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>‘ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಶ್ರೇಷ್ಠ ಆಡಳಿತಗಾರರಾಗಿದ್ದೇ ಆದಲ್ಲಿ ಅವರ ವಂಶಸ್ಥರು ಏಕೆ ತಮ್ಮ ಹೆಸರಿನ ಜೊತೆ ಅವರ ಉಪನಾಮ ಬಳಸುತ್ತಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕುಟುಕಿದ್ದಾರೆ.</p>.<p>ರಾಷ್ಟ್ರಪತಿಯವರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ರಾಜ್ಯಸಭೆಯಲ್ಲಿ ಗುರುವಾರ ಉತ್ತರ ನೀಡಿದ ಅವರು, ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳ ಮೇಲೆ ಮತ್ತೊಮ್ಮೆ ಹರಿಹಾಯ್ದರು.</p>.<p>ಸ್ವಾತಂತ್ರ್ಯ ನಂತರದಲ್ಲಿ ಈ ದೇಶ ಕಟ್ಟುವುದಕ್ಕಾಗಿ ನೆಹರೂ ಅವರು ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಬಿಜೆಪಿಯವರು ಅದನ್ನು ಕಡೆಗಣಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದರು ಆರೋಪಿಸಿದರು. </p>.<p>ಇದಕ್ಕೆ ಪ್ರತಿಕ್ರಿಯಿಸಿದ ಮೋದಿ ‘ನೆಹರೂ ಅಷ್ಟೊಂದು ಶ್ರೇಷ್ಠ ಆಡಳಿತಗಾರರಾಗಿದ್ದೇ ಆದಲ್ಲಿ ಅವರ ವಂಶಸ್ಥರು ಏಕೆ ಅವರ ಉಪನಾಮ ಬಳಸುತ್ತಿಲ್ಲ’ ಎಂದು ತಿರುಗೇಟು ನೀಡಿದರು. </p>.<p>ಇದು ವಿರೋಧ ಪಕ್ಷದ ಸಂಸದರನ್ನು ಕೆರಳಿಸಿತು. ಭಿತ್ತಿಪತ್ರ ಹಿಡಿದಿದ್ದ ಕೆಲವರು ಸಭಾಪತಿ ಪೀಠದ ಮುಂಭಾಗಕ್ಕೆ ತೆರಳಿ ಪ್ರಧಾನಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಅದಾನಿ ಸಮೂಹದ ವಿರುದ್ಧದ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು. </p>.<p>ಗದ್ದಲದ ನಡುವೆಯೂ ಮಾತು ಮುಂದುವರಿಸಿದ ಮೋದಿ, ‘ನೀವು ಎಷ್ಟು ಕೆಸರು ಎರಚುತ್ತೀರೋ (ಆರೋಪ) ಅಷ್ಟು ದೊಡ್ಡದಾಗಿ ಕಮಲ ಅರಳುತ್ತದೆ’ ಎಂದು ವಿರೋಧ ಪಕ್ಷಗಳ ಸಂಸದರನ್ನು ಛೇಡಿಸಿದರು. </p>.<p>ಎದೆ ತಟ್ಟಿಕೊಳ್ಳುತ್ತಲೇ, ‘ನಾನು ಈ ದೇಶಕ್ಕಾಗಿ ಬದುಕುತ್ತಿದ್ದೇನೆ. ಈ ದೇಶಕ್ಕೆ ಏನನ್ನಾದರೂ ಮಾಡಬೇಕೆಂದು ಬಯಸುತ್ತಿದ್ದೇನೆ. ಇದನ್ನು ವಿರೋಧ ಪಕ್ಷಗಳು ಸಹಿಸಿಕೊಳ್ಳುತ್ತಿಲ್ಲ. ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ರಾಜಕೀಯ ನಾಟಕಗಳನ್ನು ಆಡುತ್ತಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು.</p>.<p>‘ನಾನೊಬ್ಬನೇ ಎಲ್ಲರನ್ನೂ ಎದುರಿಸುತ್ತಿದ್ದೇನೆ. ಎಲ್ಲರನ್ನೂ ಮೀರಿಸುತ್ತಿದ್ದೇನೆ. ಅದನ್ನು ಇಡೀ ದೇಶವೇ ನೋಡುತ್ತಿದೆ’ ಎಂದು ಹೇಳಿದಾಗ ವಿರೋಧ ಪಕ್ಷಗಳ ಸದಸ್ಯರು ‘ಮೋದಿ–ಅದಾನಿ ಭಾಯ್ ಭಾಯ್; ದೇಶ್ ಬೇಚ್ ಕೆ ಖಾಯಿ ಮಲಾಯ್’ ಎಂದು ಗೇಲಿ ಮಾಡಿದರು.</p>.<p>ಇದರಿಂದ ವಿಚಲಿತರಾಗದ ಮೋದಿ, ‘ನನ್ನನ್ನು ಏಕಾಂಗಿಯಾಗಿ ಎದುರಿಸುವುದಕ್ಕೆ ವಿರೋಧ ಪಕ್ಷಗಳಿಗೆ ಧೈರ್ಯವಿಲ್ಲ. ಹೀಗಾಗಿ ಅವರು ರಾಜಕೀಯ ನಾಟಕ ಆಡುತ್ತಿದ್ದಾರೆ’ ಎಂದು ಕೆಣಕಿದರು. </p>.<p>‘ಕಾಂಗ್ರೆಸ್ ಪಕ್ಷ ದೇಶದ ಸಮಸ್ಯೆಗಳನ್ನು ಪರಿಹರಿಸುವ ವಿಚಾರದಲ್ಲಿ ಸಾಂಕೇತಿಕ ಧೋರಣೆಗಳನ್ನಷ್ಟೇ ಅನುಸರಿಸಿತ್ತು. ಆ ಪಕ್ಷ ತನ್ನ ರಾಜಕೀಯ ಹಿತಾಸಕ್ತಿ ಬಗ್ಗೆ ಚಿಂತಿಸುತ್ತಿತ್ತೇ ಹೊರತು ದೇಶದ ಅಭಿವೃದ್ಧಿಯ ಕುರಿತಲ್ಲ. ಸಾಂಕೇತಿಕ ಧೋರಣೆಗಳಲ್ಲಿ ನಮಗೆ ನಂಬಿಕೆ ಇಲ್ಲ. ದೇಶ ಮುನ್ನಡೆಸುವ ವಿಚಾರದಲ್ಲಿ ನಾವು ಪರಿಶ್ರಮದ ಹಾದಿ ಆಯ್ದುಕೊಂಡಿದ್ದೇವೆ’ ಎಂದರು.</p>.<p><strong> ‘ರಾಜ್ಯಗಳ ಹಕ್ಕು ಕಸಿದಿದ್ದ ಕಾಂಗ್ರೆಸ್’</strong></p>.<p>‘ಕಾಂಗ್ರೆಸ್ ಪಕ್ಷವು ಸಂವಿಧಾನದ 356ನೇ ವಿಧಿಯನ್ನು ದುರ್ಬಳಕೆ ಮಾಡಿಕೊಂಡು 90 ಬಾರಿ ಚುನಾಯಿತ ಸರ್ಕಾರಗಳನ್ನು ವಜಾಗೊಳಿಸಿತ್ತು. ಆ ಮೂಲಕ ರಾಜ್ಯಗಳು ಹಾಗೂ ಪ್ರಾದೇಶಿಕ ಪಕ್ಷಗಳ ಹಕ್ಕು ಕಸಿದಿತ್ತು. ಇಂದಿರಾಗಾಂಧಿ ಒಬ್ಬರೇ 50 ಬಾರಿ ಸರ್ಕಾರಗಳನ್ನು ವಜಾ ಮಾಡಿದ್ದರು’ ಎಂದು ಮೋದಿ ಆರೋಪಿಸಿದರು.</p>.<p>‘ಈ ದೇಶ ಯಾರೊಬ್ಬರ ಸ್ವತ್ತಲ್ಲ. ನಮ್ಮ ನೀತಿಗಳು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತವೆ. ಈಗ ಇಲ್ಲಿ ಕುಳಿತಿದ್ದಾರಲ್ಲ (ಕಾಂಗ್ರೆಸ್) ಇವರ ಮುಖವಾಡವನ್ನು ನಾನು ಕಳಚಲು ಬಯಸುತ್ತೇನೆ’ ಎಂದು ಹರಿಹಾಯ್ದರು. </p>.<p>‘ಕೇರಳದಲ್ಲಿನ ಎಡಪಕ್ಷ, ಶರದ್ ಪವಾರ್ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಹಾಗೂ ಎಂಜಿಆರ್ ಮುಂದಾಳತ್ವದ ತಮಿಳುನಾಡು ಸರ್ಕಾರಗಳನ್ನು ಕಾಂಗ್ರೆಸ್ ವಜಾಗೊಳಿಸಿತ್ತು. ಎನ್ಟಿಆರ್ ಅವರು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾಗ ಅವರ ಸರ್ಕಾರ ವಜಾಗೊಳಿಸಲಾಗಿತ್ತು. ಈ ಪಕ್ಷಗಳ ಸಂಸದರು ಇಂದು ಕಾಂಗ್ರೆಸ್ ಸಂಸದರ ಜೊತೆಯೇ ಕುಳಿತಿದ್ದಾರೆ. ಈ ಹಿಂದೆ ಹಲವು ಪಾಪಗಳನ್ನು ಮಾಡಿರುವ ಕಾಂಗ್ರೆಸ್ ಈಗ ದೇಶದ ದಾರಿ ತಪ್ಪಿಸಲು ಮುಂದಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. </p>.<p>‘ನಿಮ್ಮ ರಾಜಕೀಯ ಹಿತಾಸಕ್ತಿಗಾಗಿ ಉಚಿತ ಕೊಡುಗೆಗಳನ್ನು ಪ್ರಕಟಿಸಲು ಹೋಗಬೇಡಿ. ಹಳೆ ಪಿಂಚಣಿ ವ್ಯವಸ್ಥೆಯಂತಹ ಯೋಜನೆಗಳನ್ನು ಮರು ಜಾರಿಗೊಳಿಸಬೇಡಿ. ಇಂತಹ ಪಾಪಗಳ ಮೂಲಕ ಮುಂದಿನ ಪೀಳಿಗೆಯನ್ನು ಸಂಕಷ್ಟಕ್ಕೆ ದೂಡಬೇಡಿ’ ಎಂದು ರಾಜ್ಯಗಳಿಗೆ ಎಚ್ಚರಿಸಿದರು. </p>.<p><strong>***</strong></p>.<p>ಜನರ ಕಲ್ಯಾಣಕ್ಕಾಗಿ ರೂಪಿಸಿದ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಬೇಕು. ಅದು ನಿಜವಾದ ಜಾತ್ಯತೀತತೆ. ಇದರಿಂದ ಭ್ರಷ್ಟಾಚಾರ ಮತ್ತು ತಾರತಮ್ಯ ತೊಡೆದುಹಾಕಲು ಸಾಧ್ಯ</p>.<p><strong>–ನರೇಂದ್ರ ಮೋದಿ, ಪ್ರಧಾನಿ </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>