<p><strong>ನವದೆಹಲಿ</strong>: ಹಿಂದೂ ಸಮಾಜ ಒಗ್ಗಟ್ಟಾಗಿರಬೇಕು ಮತ್ತು ಬಹುಶಕ್ತಿಗಳು ಒಟ್ಟಾಗಿ ಬಂದರೂ ವಶಪಡಿಸಿಕೊಳ್ಳಲು ಸಾಧ್ಯವಾಗದಷ್ಟು ಭಾರತದ ಸೇನೆ ಮತ್ತು ಆರ್ಥಿಕತೆಯನ್ನು ಶಕ್ತಿಯುತವಾಗಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಕರೆ ನೀಡಿದ್ದಾರೆ.</p><p>ಭಾರತವು ತನ್ನ ಎಲ್ಲ ಗಡಿಗಳಲ್ಲಿ ದುಷ್ಟರ ಚಟುವಟಿಕೆಗಳಿಗೆ ಸಾಕ್ಷಿಯಾಗಿರುವುದರಿಂದ ನಾವು ಶಕ್ತಿಯುತರಾಗುವುದು ಅನಿವಾರ್ಯವಾಗಿದೆ ಎಂದು ಸಂದರ್ಶನವೊಂದರಲ್ಲಿ ಭಾಗವತ್ ಅವರು ತಿಳಿಸಿದ್ದಾರೆ. ಈ ಸಂದರ್ಶನವು ‘ಆರ್ಗನೈಸರ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.</p><p>‘ಭಾರತವು ರಾಷ್ಟ್ರೀಯ ಭದ್ರತೆಗಾಗಿ ಬೇರೆಯವರನ್ನು ಅವಲಂಬಿಸುವಂತಾಗಬಾರದು. ಕೇವಲ ಸದ್ಗುಣಗಳಿಂದ ವ್ಯಕ್ತಿಯು ಸುರಕ್ಷಿತನಾಗಿರಲು ಸಾಧ್ಯವಿಲ್ಲ. ಆದ್ದರಿಂದ ಸದ್ಗುಣಗಳನ್ನು ಶಕ್ತಿಯೊಂದಿಗೆ ಸಂಯೋಜಿಸಬೇಕು. ವಿವೇಚನಾರಹಿತ ಬಲಪ್ರಯೋಗವು ಘೋರ ಹಿಂಸೆಗೆ ಕಾರಣವಾಗುತ್ತದೆ. ಬಲಪ್ರಯೋಗ ಮಾಡುವುದಿದ್ದರೆ ಅದಕ್ಕೆ ಸದುದ್ದೇಶ ಇರಬೇಕು’ ಎಂದು ಭಾಗವತ್ ಹೇಳಿದ್ದಾರೆ.</p><p>ನೆರೆಯ ರಾಷ್ಟ್ರಗಳಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ಮಾನವ ಹಕ್ಕುಗಳ ಹೋರಾಟಗಾರರು ಕಾಳಜಿ ತೋರಿದ್ದಾರೆ ಎಂದು ಅನಿಸುತ್ತದೆಯೇ ಎಂಬ ಪ್ರಶ್ನೆಗೆ ಭಾಗವತ್ ಅವರು, ‘ಹಿಂದೂಗಳು ಬಲಿಷ್ಠರಾದಾಗ ಮಾತ್ರ ಯಾರಾದರೂ ನಮ್ಮ ಬಗ್ಗೆ ಯೋಚಿಸುತ್ತಾರೆ’ ಎಂದು ಹೇಳಿದರು.</p><p>‘ಕೃಷಿ, ಕೈಗಾರಿಕೆ ಮತ್ತು ವೈಜ್ಞಾನಿಕ ಕ್ರಾಂತಿ ಮುಗಿದಿದೆ. ಜಗತ್ತಿನಲ್ಲಿ ಈಗ ಧಾರ್ಮಿಕ ಕ್ರಾಂತಿಯ ಅವಶ್ಯಕತೆಯಿದೆ. ನಾನು ಧರ್ಮದ ಬಗ್ಗೆ ಮಾತನಾಡುತ್ತಿಲ್ಲ, ಆದರೆ ಮಾನವ ಜೀವನವು ಸತ್ಯ, ಶುದ್ಧತೆ, ಸಹಾನುಭೂತಿ ಮತ್ತು ಧ್ಯಾನದ ಆಧಾರದಲ್ಲಿ ಮರುಸಂಘಟಿತವಾಗಬೇಕು. ಜಗತ್ತಿಗೆ ಇದು ಅಗತ್ಯವಾಗಿದ್ದು, ಭಾರತ ಅನಿವಾರ್ಯವಾಗಿ ಈ ಮಾರ್ಗವನ್ನು ತೋರಿಸಬೇಕು’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಹಿಂದೂ ಸಮಾಜ ಒಗ್ಗಟ್ಟಾಗಿರಬೇಕು ಮತ್ತು ಬಹುಶಕ್ತಿಗಳು ಒಟ್ಟಾಗಿ ಬಂದರೂ ವಶಪಡಿಸಿಕೊಳ್ಳಲು ಸಾಧ್ಯವಾಗದಷ್ಟು ಭಾರತದ ಸೇನೆ ಮತ್ತು ಆರ್ಥಿಕತೆಯನ್ನು ಶಕ್ತಿಯುತವಾಗಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಕರೆ ನೀಡಿದ್ದಾರೆ.</p><p>ಭಾರತವು ತನ್ನ ಎಲ್ಲ ಗಡಿಗಳಲ್ಲಿ ದುಷ್ಟರ ಚಟುವಟಿಕೆಗಳಿಗೆ ಸಾಕ್ಷಿಯಾಗಿರುವುದರಿಂದ ನಾವು ಶಕ್ತಿಯುತರಾಗುವುದು ಅನಿವಾರ್ಯವಾಗಿದೆ ಎಂದು ಸಂದರ್ಶನವೊಂದರಲ್ಲಿ ಭಾಗವತ್ ಅವರು ತಿಳಿಸಿದ್ದಾರೆ. ಈ ಸಂದರ್ಶನವು ‘ಆರ್ಗನೈಸರ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.</p><p>‘ಭಾರತವು ರಾಷ್ಟ್ರೀಯ ಭದ್ರತೆಗಾಗಿ ಬೇರೆಯವರನ್ನು ಅವಲಂಬಿಸುವಂತಾಗಬಾರದು. ಕೇವಲ ಸದ್ಗುಣಗಳಿಂದ ವ್ಯಕ್ತಿಯು ಸುರಕ್ಷಿತನಾಗಿರಲು ಸಾಧ್ಯವಿಲ್ಲ. ಆದ್ದರಿಂದ ಸದ್ಗುಣಗಳನ್ನು ಶಕ್ತಿಯೊಂದಿಗೆ ಸಂಯೋಜಿಸಬೇಕು. ವಿವೇಚನಾರಹಿತ ಬಲಪ್ರಯೋಗವು ಘೋರ ಹಿಂಸೆಗೆ ಕಾರಣವಾಗುತ್ತದೆ. ಬಲಪ್ರಯೋಗ ಮಾಡುವುದಿದ್ದರೆ ಅದಕ್ಕೆ ಸದುದ್ದೇಶ ಇರಬೇಕು’ ಎಂದು ಭಾಗವತ್ ಹೇಳಿದ್ದಾರೆ.</p><p>ನೆರೆಯ ರಾಷ್ಟ್ರಗಳಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ಮಾನವ ಹಕ್ಕುಗಳ ಹೋರಾಟಗಾರರು ಕಾಳಜಿ ತೋರಿದ್ದಾರೆ ಎಂದು ಅನಿಸುತ್ತದೆಯೇ ಎಂಬ ಪ್ರಶ್ನೆಗೆ ಭಾಗವತ್ ಅವರು, ‘ಹಿಂದೂಗಳು ಬಲಿಷ್ಠರಾದಾಗ ಮಾತ್ರ ಯಾರಾದರೂ ನಮ್ಮ ಬಗ್ಗೆ ಯೋಚಿಸುತ್ತಾರೆ’ ಎಂದು ಹೇಳಿದರು.</p><p>‘ಕೃಷಿ, ಕೈಗಾರಿಕೆ ಮತ್ತು ವೈಜ್ಞಾನಿಕ ಕ್ರಾಂತಿ ಮುಗಿದಿದೆ. ಜಗತ್ತಿನಲ್ಲಿ ಈಗ ಧಾರ್ಮಿಕ ಕ್ರಾಂತಿಯ ಅವಶ್ಯಕತೆಯಿದೆ. ನಾನು ಧರ್ಮದ ಬಗ್ಗೆ ಮಾತನಾಡುತ್ತಿಲ್ಲ, ಆದರೆ ಮಾನವ ಜೀವನವು ಸತ್ಯ, ಶುದ್ಧತೆ, ಸಹಾನುಭೂತಿ ಮತ್ತು ಧ್ಯಾನದ ಆಧಾರದಲ್ಲಿ ಮರುಸಂಘಟಿತವಾಗಬೇಕು. ಜಗತ್ತಿಗೆ ಇದು ಅಗತ್ಯವಾಗಿದ್ದು, ಭಾರತ ಅನಿವಾರ್ಯವಾಗಿ ಈ ಮಾರ್ಗವನ್ನು ತೋರಿಸಬೇಕು’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>