ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು ಬೃಂದಾವನ ಮತ್ತು ಮಥುರಾದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು ಅವುಗಳಿಗೆ ಮಥುರದಲ್ಲಿ ಪ್ರತ್ಯೇಕ ಪಾರ್ಕ್ ನಿರ್ಮಾಣಮಾಡಬೇಕು ಎಂದು ಮನವಿ ಮಾಡಿದ್ದಾರೆ.ಕೋತಿಗಳು ನೈಸರ್ಗಿಕವಾಗಿ ಗಿಡಗಳಲ್ಲಿ ಬಿಡುವ ಹಣ್ಣುಗಳನ್ನು ತಿನ್ನುತ್ತಿಲ್ಲ ಬದಲಿಗೆ ಮನುಷ್ಯರ ರೀತಿಯ ಆಹಾರ ಅಭ್ಯಾಸವನ್ನು ರೂಢಿಸಿಕೊಂಡಿದ್ದು ಅವುಸಮೋಸ ತಿನ್ನುತ್ತಿವೆ. ಆದ್ದರಿಂದಕೋತಿಗಳ ಆರೋಗ್ಯದ ಸಲುವಾಗಿ ಕೋತಿಗಳ ಪಾರ್ಕ್ ನಿರ್ಮಾಣ ಮಾಡಬೇಕು ಎಂದು ಅವರು ಹೇಳಿದ್ದಾರೆ.