<p><strong>ಭೋಪಾಲ್/ಸಿಂಗ್ರೌಲಿ(ಮಧ್ಯಪ್ರದೇಶ):</strong> ಸಾರ್ವಜನಿಕ ಸಭೆಯೊಂದರಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು ಉಪವಿಭಾಗಾಧಿಕಾರಿಯ (ಎಸ್ಡಿಎಂ) ಶೂಗಳ ಲೇಸ್ ಕಟ್ಟುತ್ತಿರುವ ಚಿತ್ರ ಹರಿದಾಡಿದ ಬೆನ್ನಲ್ಲೇ, ಉಪವಿಭಾಗಾಧಿಕಾರಿಯನ್ನು ವರ್ಗಾವಣೆ ಮಾಡಿ ಮುಖ್ಯಮಂತ್ರಿ ಮೋಹನ್ ಯಾದವ್ ಗುರುವಾರ ಆದೇಶಿಸಿದ್ದಾರೆ.</p>.<p>ಚಿತ್ರಂಗಿ ಉಪವಿಭಾಗಾಧಿಕಾರಿ ಅಸ್ವನ್ರಾಮ್ ಚಿರಾವನ್ ವರ್ಗಾವಣೆಗೊಂಡವರು.</p>.<p>ಸಿಂಗ್ರೌಲಿ ಜಿಲ್ಲೆಯ ಚಿತ್ರಂಗಿಯಲ್ಲಿ ಜ.22ರಂದು ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಆರತಿ ಮಾಡುವುದಕ್ಕಾಗಿ ಚಿರಾವನ್ ಅವರು ಶೂ ಬಿಚ್ಚಿದ್ದರು. ನಂತರ, ಮಹಿಳಾ ಸಿಬ್ಬಂದಿಯೊಬ್ಬರು ಚಿರಾವನ್ ಅವರ ಶೂಲೇಸ್ ಕಟ್ಟಿದ್ದರು. ಇದರ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ನಂತರ ಯಾದವ್ ಕ್ರಮ ಕೈಗೊಂಡಿದ್ದಾರೆ.</p>.<p>ಭೋಪಾಲ್ನಲ್ಲಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವಾಗ ಈ ವಿಷಯ ಪ್ರಸ್ತಾಪಿಸಿದ ಮುಖ್ಯಮಂತ್ರಿ ಯಾದವ್, ‘ಉಪವಿಭಾಗಾಧಿಕಾರಿ ಚಿರಾವನ್ ಈ ಮೊದಲೇ ಗಾಯಗೊಂಡಿದ್ದರು. ಹೀಗಾಗಿ, ಅವರ ನೆರವಿಗೆ ಧಾವಿಸಿದ್ದ ಮಹಿಳಾ ಸಿಬ್ಬಂದಿ, ಅವರ ಶೂಲೇಸ್ ಕಟ್ಟಿದ್ದಾರೆ ಎಂದೂ ಗೊತ್ತಾಗಿದೆ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ಚಿತ್ರ ಒಳ್ಳೆಯ ಸಂದೇಶ ರವಾನಿಸುವುದಿಲ್ಲ’ ಎಂದಿದ್ದಾರೆ.</p>.<p>‘ಆ ಮಹಿಳೆ ಸ್ವ ಇಚ್ಛೆಯಿಂದಲೇ ಈ ಕಾರ್ಯ ಮಾಡಿದ್ದರು ಹಾಗೂ ಇಂತಹ ನಡೆ ಹಿಂದೆ ಯಾವುದೇ ದುರುದ್ದೇಶವೂ ಇರಲಿಲ್ಲ ಎಂಬುದು ಗೊತ್ತಿದೆ. ಆದರೆ, ಮಹಿಳೆಗೆ ಗೌರವ ನೀಡುವುದು ನನ್ನ ಸರ್ಕಾರದ ಪಾಲಿಗೆ ಬಹಳ ಮಹತ್ವದ ವಿಚಾರ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭೋಪಾಲ್/ಸಿಂಗ್ರೌಲಿ(ಮಧ್ಯಪ್ರದೇಶ):</strong> ಸಾರ್ವಜನಿಕ ಸಭೆಯೊಂದರಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು ಉಪವಿಭಾಗಾಧಿಕಾರಿಯ (ಎಸ್ಡಿಎಂ) ಶೂಗಳ ಲೇಸ್ ಕಟ್ಟುತ್ತಿರುವ ಚಿತ್ರ ಹರಿದಾಡಿದ ಬೆನ್ನಲ್ಲೇ, ಉಪವಿಭಾಗಾಧಿಕಾರಿಯನ್ನು ವರ್ಗಾವಣೆ ಮಾಡಿ ಮುಖ್ಯಮಂತ್ರಿ ಮೋಹನ್ ಯಾದವ್ ಗುರುವಾರ ಆದೇಶಿಸಿದ್ದಾರೆ.</p>.<p>ಚಿತ್ರಂಗಿ ಉಪವಿಭಾಗಾಧಿಕಾರಿ ಅಸ್ವನ್ರಾಮ್ ಚಿರಾವನ್ ವರ್ಗಾವಣೆಗೊಂಡವರು.</p>.<p>ಸಿಂಗ್ರೌಲಿ ಜಿಲ್ಲೆಯ ಚಿತ್ರಂಗಿಯಲ್ಲಿ ಜ.22ರಂದು ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಆರತಿ ಮಾಡುವುದಕ್ಕಾಗಿ ಚಿರಾವನ್ ಅವರು ಶೂ ಬಿಚ್ಚಿದ್ದರು. ನಂತರ, ಮಹಿಳಾ ಸಿಬ್ಬಂದಿಯೊಬ್ಬರು ಚಿರಾವನ್ ಅವರ ಶೂಲೇಸ್ ಕಟ್ಟಿದ್ದರು. ಇದರ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ನಂತರ ಯಾದವ್ ಕ್ರಮ ಕೈಗೊಂಡಿದ್ದಾರೆ.</p>.<p>ಭೋಪಾಲ್ನಲ್ಲಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವಾಗ ಈ ವಿಷಯ ಪ್ರಸ್ತಾಪಿಸಿದ ಮುಖ್ಯಮಂತ್ರಿ ಯಾದವ್, ‘ಉಪವಿಭಾಗಾಧಿಕಾರಿ ಚಿರಾವನ್ ಈ ಮೊದಲೇ ಗಾಯಗೊಂಡಿದ್ದರು. ಹೀಗಾಗಿ, ಅವರ ನೆರವಿಗೆ ಧಾವಿಸಿದ್ದ ಮಹಿಳಾ ಸಿಬ್ಬಂದಿ, ಅವರ ಶೂಲೇಸ್ ಕಟ್ಟಿದ್ದಾರೆ ಎಂದೂ ಗೊತ್ತಾಗಿದೆ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ಚಿತ್ರ ಒಳ್ಳೆಯ ಸಂದೇಶ ರವಾನಿಸುವುದಿಲ್ಲ’ ಎಂದಿದ್ದಾರೆ.</p>.<p>‘ಆ ಮಹಿಳೆ ಸ್ವ ಇಚ್ಛೆಯಿಂದಲೇ ಈ ಕಾರ್ಯ ಮಾಡಿದ್ದರು ಹಾಗೂ ಇಂತಹ ನಡೆ ಹಿಂದೆ ಯಾವುದೇ ದುರುದ್ದೇಶವೂ ಇರಲಿಲ್ಲ ಎಂಬುದು ಗೊತ್ತಿದೆ. ಆದರೆ, ಮಹಿಳೆಗೆ ಗೌರವ ನೀಡುವುದು ನನ್ನ ಸರ್ಕಾರದ ಪಾಲಿಗೆ ಬಹಳ ಮಹತ್ವದ ವಿಚಾರ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>